ಆರ್.ಶ್ರೀಧರ್ ರಾಮನಗರ
ರಾಮನಗರ: ಪ್ರವಾಸಿಗಳ ನೆಚ್ಚಿನ ತಾಣಗಳು ರಾಮನಗರ ಜಿಲ್ಲೆಯಲ್ಲಿ ಅನೇಕ ಇವೆ. ಆದರೆ, ಪ್ರಸಿದ್ದಿಗೆ ಬಾರದೇ ತೆರೆಮರೆಯಲ್ಲೇ ಉಳಿದಿರುವ ಅನೇಕ ಸ್ಥಳಗಳು ಬಹಳಷ್ಟಿವೆ. ಹೊಸತನ್ನು ಹುಡುಕಿ, ಹಳತನ್ನು ಅಭಿವೃದ್ಧಿಪಡಿಸಿದ್ದೇ ಆದಲ್ಲಿ ರಾಮನಗರ ಜಿಲ್ಲೆ ದೇಶದ ಪ್ರಮುಖ ಪ್ರವಾಸಿ ಕೇಂದ್ರವಾಗಿ ಬೆಳಗುವುದರಲ್ಲಿ ಸಂಶಯವಿಲ್ಲ. ಗರಿಗೆದರಿದ ನಿರೀಕ್ಷೆ
ಜಿಲ್ಲೆಯವರೇ ಆಗಿರುವ ಸಿ.ಪಿ.ಯೋಗೇಶ್ವರ್ ಪ್ರವಾಸೋದ್ಯಮ ಸಚಿವರಾಗಿರುವುದು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಡಿಸಿಎಂ ಡಾ. ಅಶ್ವತ್ಥ ನಾರಾಯಣ್ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಆಸಕ್ತಿ ತಾಳಿರುವುದರಿಂದ ಈ ಸರಕಾರದ ಅವಧಿಯಲ್ಲೇ ಜಿಲ್ಲೆಗೆ ಏನಾದರೂ ದಕ್ಕಬಹುದು ಎಂಬ ನಿರೀಕ್ಷೆ ಜನರದ್ದು. ಇದಕ್ಕೆ ಪೂರಕವೆಂಬಂತೆ ರಾಜ್ಯ ಸರಕಾರ ಕೂಡ ತನ್ನ ಬಜೆಟ್ನಲ್ಲಿ ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆಗಳನ್ನು ಕೇಂದ್ರವಾಗಿರಿಸಿಕೊಂಡು ವಿಶೇಷ ಪ್ರವಾಸ ಪ್ಯಾಕೇಜ್ ರೂಪಿಸುವ ಘೋಷಣೆ ಮಾಡಿದೆ. ಇಂತಹ ಪ್ಯಾಕೇಜ್ ರೂಪಿಸಿದರೆ ಅದರಲ್ಲಿ ಖಂಡಿತವಾಗಿಯೂ ರಾಮನಗರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಸಿಗಲಿದೆ. ಏಕೆಂದರೆ, ಅಷ್ಟೊಂದು ಪ್ರವಾಸಿ ಮತ್ತು ಪಿಕ್ನಿಕ್ ತಾಣಗಳು ಜಿಲ್ಲೆಯಲ್ಲಿವೆ.
ಕನಸು ಹಂಚಿಕೊಂಡ ನಟಿ ಶೃತಿ
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಹಾಗು ಚಲನಚಿತ್ರ ನಟಿ ಆದ ಶೃತಿ ಕೂಡ ರಾಮನಗರವನ್ನು ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಪಡಿಸುವ ತಮ್ಮ ಕನಸನ್ನು ವಿಕ ಜತೆ ಹಂಚಿಕೊಂಡಿದ್ದಾರೆ. ಬೆಂಗಳೂರಿನ ಜನರು ವಾರಂತ್ಯ ಕಳೆಯಲು ಕೇವಲ ಪಬ್, ಬಾರ್ಗಳನ್ನಷ್ಟೆ ಅವಲಂಭಿಸಿದ್ದಾರೆ. ಇದು ಬಿಟ್ಟರೆ ನಂದಿ ಬೆಟ್ಟ ಎನ್ನುತ್ತಿದ್ದಾರೆ. ಇಂತಹ ಪ್ರವಾಸ ಪ್ರಿಯ ಜನರನ್ನೇ ಗುರಿಯಾಗಿಸಿಕೊಂಡು, ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆಗಳನ್ನು ಕೇಂದ್ರೀಕರಿಸಿ ವಿಶೇಷ ಪ್ರವಾಸಿ ಪ್ಯಾಕೇಜ್ಗಳನ್ನು ರೂಪಿಸುವಂತೆ ಸರಕಾರಕ್ಕೆ ಮನವಿ ಮಾಡಿದ್ದೆ. ನನ್ನ ಮನವಿಯನ್ನು ಸಿಎಂ ಬಿಎಸ್ವೈ ಪುರಸ್ಕರಿಸಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ರಾಮನಗರ ಸಮೃದ್ಧ
ಪ್ರವಾಸ ಮತ್ತು ಪಿಕ್ನಿಕ್ ಕೇಂದ್ರಗಳ ವಿಷಯದಲ್ಲಿ ರಾಮನಗರ ಜಿಲ್ಲೆ ಸಮೃದ್ಧವಾಗಿದೆ. ಇಲ್ಲಿ ಎಲ್ಲವೂ ಇದೆ. ದಟ್ಟ ಅರಣ್ಯ, ಕಿರು ಅರಣ್ಯ, ಜಲಾಶಯ, ಜಲಾಶಯ ಹಿನ್ನೀರು, ಪುರಾತನ ದೇಗುಲಗಳು, ಧಾರ್ಮಿಕ ಸ್ಥಳಗಳು, ಮನೋರಂಜನೆ ಪಾರ್ಕ್ ಗಳು, ಆಕರ್ಷಕ ರೆಸಾರ್ಟ್ಗಳು, ಟ್ರಕ್ಕಿಂಗ್ ಸ್ಪಾಟ್ಗಳು ಹೀಗೆ ಪ್ರತಿಯೊಂದೂ ರಾಮನಗರದಲ್ಲಿದೆ. ಇದರ ಸದ್ಬಳಕೆಗೆ ರಚನಾತ್ಮಕ ಯೋಜನೆ ರೂಪಿಸಬೇಕಿದೆ ಎಂದರು. ಪ್ರವಾಸ, ಮನರಂಜನೆ ಜತೆಗೆ ಶಾಪಿಂಗ್ಗೂ ಅವಕಾಶ ಕಲ್ಪಿಸಲು ಉದ್ದೇಶಿಸಲಾಗಿದ್ದು, ಅದಕ್ಕೆ ಯೋಜನೆ ರೂಪಿಸಲಾಗುತ್ತಿದೆ ಎಂದರು.
ಪ್ರವಾಸಿ ತಾಣಗಳ ಪಟ್ಟಿ
ಚನ್ನಪಟ್ಟಣ ಸಮೀಪದ ಕೆಂಗಲ್ ಆಂಜನೇಯ ದೇಗುಲ, ಕಣ್ವ ಡ್ಯಾಂ, ಅಂಬೆಗಾಲು ಕೃಷ್ಣ ದೇಗುಲ, ಇಗ್ಗಲೂರು ಡ್ಯಾಂ, ಮಾಗಡಿಯ ಮಂಚನಬೆಲೆ, ತಿಪ್ಪಗೊಂಡನಹಳ್ಳಿ ಜಲಾಶಯ, ಕನಕಪುರದ ಮುತ್ತಿತ್ತಿಯ ಮುತ್ತುರಾಯ, ಕಲ್ಲಹಳ್ಳಿಯ ವೆಂಕಟೇಶ್ವರ, ಸಂಗಮ ಪಕ್ಕದ ಶಿವನಾಂಕೇಶ್ವರ ದೇಗುಲ, ಕಾವೇರಿ ವನ್ಯಜೀವಿಧಾಮಕ್ಕೆ ಸೇರಿದ ಮುತ್ತತ್ತಿ, ಸಂಗಮ, ಮೇಕೆದಾಟು ಅರಣ್ಯ ಪ್ರದೇಶಗಳು, ಮನರಂಜನೆ, ವಿಶ್ರಾಂತಿ ಪ್ರಿಯರಿಗಾಗಿ ವಂಡರ್ಲಾ, ಇನ್ನೋವೆಟಿವ್ ಫಿಲ್ಮ್ ಸಿಟಿ, ಈಗಲ್ ಟನ್ ರೆರ್ಸಾಟ್, ಶಿಲಾಂಧ್ರ ಸಹಿತ ಲೆಕ್ಕವಿಲ್ಲದಷ್ಟು ಹೋಂ ಸ್ಟೇ, ರೆರ್ಸಾಟ್ ಹೋಟಲ್ಗಳಿವೆ.
ತಿಂಡಿಗಳೇ ಫೇಮಸ್ಸು
ಬಿಡದಿಯ ತಟ್ಟೆ ಇಡ್ಲಿ, ರಾಮನಗರದ ಜನಾರ್ಧನ್ ಹೋಟಲ್ ಮೈಸೂರು ಪಾಕ್, ಮಾಗಡಿಯ ಚಿತ್ರಾನ್ನ, ಸೆಂಟ್ ದೋಸೆ, ಕನಕಪುರದ ವಾಸು ಹೋಟಲ್ ಮಸಾಲೆ ದೋಸೆ, ಕೋಟೆ ಇಡ್ಲಿ, ತಿನ್ನುವ ರುಚಿ-ಸವಿಯೇ ಬೇರೆ.
ಬೆಳಕಿಗೆ ಬರಬೇಕಿರುವ ತಾಣಗಳು
ಕನಕಪುರದ ಶ್ರೀ ಗವಿರಂಗಸ್ವಾಮಿ ಬೆಟ್ಟ, ಶಿವಗಿರಿ ಕ್ಷೇತ್ರದ ಶಿವಾಲ್ದಾಪ್ಪನ ಬೆಟ್ಟ, ಮಾಗಡಿಯ ಸೋಮೇಶ್ವರ ಸ್ವಾಮಿ ದೇವಾಲಯ, ತಾಳವಾಡಿ ಬೆಟ್ಟ, ಕಣಿವೆ ಆಂಜನೇಯ ಸ್ವಾಮಿ ಬೆಟ್ಟ, ಕುಡ್ಲಾಣಿ ದೊಡ್ಡಿ ಫಾಲ್ಸ್, ಚುಂಚಿ ಫಾಲ್ಸ್, ರಾಮದೇವರ ಬೆಟ್ಟದಲ್ಲಿ ಹರಿಯುವ ನೈದಿಲೆ ತೀರ್ಥ, ಅರ್ಕಾವತಿ ನದಿ, ನಲ್ಲಿಗುಡ್ಡೆ ಕೆರೆ, ಕಣಿವೆ ಆಂಜನೇಯ, ಹಾರೋಬೆಲೆ ಡ್ಯಾಂ, ಅರೇಹಳ್ಳಿಯ ರಸ್ತೆಯಲ್ಲಿ ಮನತಣಿಸುವ ಮರಗಳ ಸಾಲು ಪ್ರಸಿದ್ದಿಗೆ ಬರಬೇಕಿದೆ.
ಸಚಿವರೇ ಮನಸು ಮಾಡಿ
ರಾಮನಗರದಲ್ಲಿ ಎಲ್ಲವೂ ಇದೆ. ಈಗ ಬೇಕಿರುವುದು ಸರಕಾರ ಮತ್ತು ಸಚಿವರ ಇಚ್ಛಾಶಕ್ತಿ. ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಮನಸ್ಸು ಮಾಡಿದರೆ, ಡಿಸಿಎಂ ಅಶ್ವತ್ಥ ನಾರಾಯಣ್ ಸಾಥ್ ನೀಡಿದರೆ ರಾಮನಗರ ಅಂತಾರಾಷ್ಟ್ರೀಯ ಮಟ್ಟದ ಪ್ರವಾಸಿ ಕೇಂದ್ರವಾಗುವುದರಲ್ಲಿ ಸಂಶಯವಿಲ್ಲ. ಇದರಿಂದ ಜಿಲ್ಲೆಯಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಯೂ ಆಗಿ, ನಿರುದ್ಯೋಗ ಸಮಸ್ಯೆ ನಿವಾರಣೆಯಾಗಲಿದೆ.
ಜಿಲ್ಲೆಯಲ್ಲಿನ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಲಾಗಿದೆ. ವೀರಾಪುರ-ಬಾನಂದೂರು ಗ್ರಾಮಗಳ ಅಭಿವೃದ್ಧಿ. ಹೊಸದಾಗಿ ನಿರ್ಮಾಣಗೊಳ್ಳುತ್ತಿರುವ ಬೈಪಾಸ್ ರಸ್ತೆಯೇ ಬೆಟ್ಟದ ಮಧ್ಯದಲ್ಲಿ ಸಿದ್ದಗೊಳ್ಳುತ್ತಿದೆ. ಹೀಗಾಗಿ ಈ ರಸ್ತೆಯೇ ಸ್ವರ್ಗ ಎನ್ನಬಹುದು. ಜಿಲ್ಲೆಯ ಪ್ರವಾಸಿ ತಾಣಗಳ ಬಗ್ಗೆ ಸಮಗ್ರ ವರದಿ ಪಡೆಯಲಾಗಿದ್ದು, ಅಭಿವೃದ್ಧಿಗೆ ಪೂರಕ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು.
ಸಿ.ಪಿ.ಯೋಗೇಶ್ವರ್, ಪ್ರವಾಸೋದ್ಯಮ ಸಚಿವ
ಬೆಂಗಳೂರಿನ ಜನರಿಗೆ ವಾರಾಂತ್ಯದಲ್ಲಿ ಸಮಯ ಕಳೆಯಲು ಜಾಗವೇ ಇಲ್ಲ. ಹೀಗಾಗಿ ಎರಡು ದಿನದ ಹಿಂದಷ್ಟೆ ನಂದಿಗಿರಿಧಾಮಕ್ಕೆ 2 ದಿನದ ಪ್ಯಾಕೇಜ್ ತೆರೆಯಲಾಗಿದೆ. ಮುಂದಿನ ದಿನಗಳಲ್ಲಿ ರಾಮನಗರದ ಸಾವನದುರ್ಗ, ಮೇಕೆದಾಟು, ದೇವರಾಯನದುರ್ಗಕ್ಕೂ ಪ್ಯಾಕೇಜ್ ನೀಡಲಾಗುವುದು.
ಶೃತಿ ಕೃಷ್ಣ, ಅಧ್ಯಕ್ಷೆ, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ
ರಾಮನಗರ: ಪ್ರವಾಸಿಗಳ ನೆಚ್ಚಿನ ತಾಣಗಳು ರಾಮನಗರ ಜಿಲ್ಲೆಯಲ್ಲಿ ಅನೇಕ ಇವೆ. ಆದರೆ, ಪ್ರಸಿದ್ದಿಗೆ ಬಾರದೇ ತೆರೆಮರೆಯಲ್ಲೇ ಉಳಿದಿರುವ ಅನೇಕ ಸ್ಥಳಗಳು ಬಹಳಷ್ಟಿವೆ. ಹೊಸತನ್ನು ಹುಡುಕಿ, ಹಳತನ್ನು ಅಭಿವೃದ್ಧಿಪಡಿಸಿದ್ದೇ ಆದಲ್ಲಿ ರಾಮನಗರ ಜಿಲ್ಲೆ ದೇಶದ ಪ್ರಮುಖ ಪ್ರವಾಸಿ ಕೇಂದ್ರವಾಗಿ ಬೆಳಗುವುದರಲ್ಲಿ ಸಂಶಯವಿಲ್ಲ.
ಜಿಲ್ಲೆಯವರೇ ಆಗಿರುವ ಸಿ.ಪಿ.ಯೋಗೇಶ್ವರ್ ಪ್ರವಾಸೋದ್ಯಮ ಸಚಿವರಾಗಿರುವುದು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಡಿಸಿಎಂ ಡಾ. ಅಶ್ವತ್ಥ ನಾರಾಯಣ್ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಆಸಕ್ತಿ ತಾಳಿರುವುದರಿಂದ ಈ ಸರಕಾರದ ಅವಧಿಯಲ್ಲೇ ಜಿಲ್ಲೆಗೆ ಏನಾದರೂ ದಕ್ಕಬಹುದು ಎಂಬ ನಿರೀಕ್ಷೆ ಜನರದ್ದು. ಇದಕ್ಕೆ ಪೂರಕವೆಂಬಂತೆ ರಾಜ್ಯ ಸರಕಾರ ಕೂಡ ತನ್ನ ಬಜೆಟ್ನಲ್ಲಿ ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆಗಳನ್ನು ಕೇಂದ್ರವಾಗಿರಿಸಿಕೊಂಡು ವಿಶೇಷ ಪ್ರವಾಸ ಪ್ಯಾಕೇಜ್ ರೂಪಿಸುವ ಘೋಷಣೆ ಮಾಡಿದೆ. ಇಂತಹ ಪ್ಯಾಕೇಜ್ ರೂಪಿಸಿದರೆ ಅದರಲ್ಲಿ ಖಂಡಿತವಾಗಿಯೂ ರಾಮನಗರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಸಿಗಲಿದೆ. ಏಕೆಂದರೆ, ಅಷ್ಟೊಂದು ಪ್ರವಾಸಿ ಮತ್ತು ಪಿಕ್ನಿಕ್ ತಾಣಗಳು ಜಿಲ್ಲೆಯಲ್ಲಿವೆ.
ಕನಸು ಹಂಚಿಕೊಂಡ ನಟಿ ಶೃತಿ
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಹಾಗು ಚಲನಚಿತ್ರ ನಟಿ ಆದ ಶೃತಿ ಕೂಡ ರಾಮನಗರವನ್ನು ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಪಡಿಸುವ ತಮ್ಮ ಕನಸನ್ನು ವಿಕ ಜತೆ ಹಂಚಿಕೊಂಡಿದ್ದಾರೆ. ಬೆಂಗಳೂರಿನ ಜನರು ವಾರಂತ್ಯ ಕಳೆಯಲು ಕೇವಲ ಪಬ್, ಬಾರ್ಗಳನ್ನಷ್ಟೆ ಅವಲಂಭಿಸಿದ್ದಾರೆ. ಇದು ಬಿಟ್ಟರೆ ನಂದಿ ಬೆಟ್ಟ ಎನ್ನುತ್ತಿದ್ದಾರೆ. ಇಂತಹ ಪ್ರವಾಸ ಪ್ರಿಯ ಜನರನ್ನೇ ಗುರಿಯಾಗಿಸಿಕೊಂಡು, ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆಗಳನ್ನು ಕೇಂದ್ರೀಕರಿಸಿ ವಿಶೇಷ ಪ್ರವಾಸಿ ಪ್ಯಾಕೇಜ್ಗಳನ್ನು ರೂಪಿಸುವಂತೆ ಸರಕಾರಕ್ಕೆ ಮನವಿ ಮಾಡಿದ್ದೆ. ನನ್ನ ಮನವಿಯನ್ನು ಸಿಎಂ ಬಿಎಸ್ವೈ ಪುರಸ್ಕರಿಸಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ರಾಮನಗರ ಸಮೃದ್ಧ
ಪ್ರವಾಸ ಮತ್ತು ಪಿಕ್ನಿಕ್ ಕೇಂದ್ರಗಳ ವಿಷಯದಲ್ಲಿ ರಾಮನಗರ ಜಿಲ್ಲೆ ಸಮೃದ್ಧವಾಗಿದೆ. ಇಲ್ಲಿ ಎಲ್ಲವೂ ಇದೆ. ದಟ್ಟ ಅರಣ್ಯ, ಕಿರು ಅರಣ್ಯ, ಜಲಾಶಯ, ಜಲಾಶಯ ಹಿನ್ನೀರು, ಪುರಾತನ ದೇಗುಲಗಳು, ಧಾರ್ಮಿಕ ಸ್ಥಳಗಳು, ಮನೋರಂಜನೆ ಪಾರ್ಕ್ ಗಳು, ಆಕರ್ಷಕ ರೆಸಾರ್ಟ್ಗಳು, ಟ್ರಕ್ಕಿಂಗ್ ಸ್ಪಾಟ್ಗಳು ಹೀಗೆ ಪ್ರತಿಯೊಂದೂ ರಾಮನಗರದಲ್ಲಿದೆ. ಇದರ ಸದ್ಬಳಕೆಗೆ ರಚನಾತ್ಮಕ ಯೋಜನೆ ರೂಪಿಸಬೇಕಿದೆ ಎಂದರು. ಪ್ರವಾಸ, ಮನರಂಜನೆ ಜತೆಗೆ ಶಾಪಿಂಗ್ಗೂ ಅವಕಾಶ ಕಲ್ಪಿಸಲು ಉದ್ದೇಶಿಸಲಾಗಿದ್ದು, ಅದಕ್ಕೆ ಯೋಜನೆ ರೂಪಿಸಲಾಗುತ್ತಿದೆ ಎಂದರು.
ಪ್ರವಾಸಿ ತಾಣಗಳ ಪಟ್ಟಿ
ಚನ್ನಪಟ್ಟಣ ಸಮೀಪದ ಕೆಂಗಲ್ ಆಂಜನೇಯ ದೇಗುಲ, ಕಣ್ವ ಡ್ಯಾಂ, ಅಂಬೆಗಾಲು ಕೃಷ್ಣ ದೇಗುಲ, ಇಗ್ಗಲೂರು ಡ್ಯಾಂ, ಮಾಗಡಿಯ ಮಂಚನಬೆಲೆ, ತಿಪ್ಪಗೊಂಡನಹಳ್ಳಿ ಜಲಾಶಯ, ಕನಕಪುರದ ಮುತ್ತಿತ್ತಿಯ ಮುತ್ತುರಾಯ, ಕಲ್ಲಹಳ್ಳಿಯ ವೆಂಕಟೇಶ್ವರ, ಸಂಗಮ ಪಕ್ಕದ ಶಿವನಾಂಕೇಶ್ವರ ದೇಗುಲ, ಕಾವೇರಿ ವನ್ಯಜೀವಿಧಾಮಕ್ಕೆ ಸೇರಿದ ಮುತ್ತತ್ತಿ, ಸಂಗಮ, ಮೇಕೆದಾಟು ಅರಣ್ಯ ಪ್ರದೇಶಗಳು, ಮನರಂಜನೆ, ವಿಶ್ರಾಂತಿ ಪ್ರಿಯರಿಗಾಗಿ ವಂಡರ್ಲಾ, ಇನ್ನೋವೆಟಿವ್ ಫಿಲ್ಮ್ ಸಿಟಿ, ಈಗಲ್ ಟನ್ ರೆರ್ಸಾಟ್, ಶಿಲಾಂಧ್ರ ಸಹಿತ ಲೆಕ್ಕವಿಲ್ಲದಷ್ಟು ಹೋಂ ಸ್ಟೇ, ರೆರ್ಸಾಟ್ ಹೋಟಲ್ಗಳಿವೆ.
ತಿಂಡಿಗಳೇ ಫೇಮಸ್ಸು
ಬಿಡದಿಯ ತಟ್ಟೆ ಇಡ್ಲಿ, ರಾಮನಗರದ ಜನಾರ್ಧನ್ ಹೋಟಲ್ ಮೈಸೂರು ಪಾಕ್, ಮಾಗಡಿಯ ಚಿತ್ರಾನ್ನ, ಸೆಂಟ್ ದೋಸೆ, ಕನಕಪುರದ ವಾಸು ಹೋಟಲ್ ಮಸಾಲೆ ದೋಸೆ, ಕೋಟೆ ಇಡ್ಲಿ, ತಿನ್ನುವ ರುಚಿ-ಸವಿಯೇ ಬೇರೆ.
ಬೆಳಕಿಗೆ ಬರಬೇಕಿರುವ ತಾಣಗಳು
ಕನಕಪುರದ ಶ್ರೀ ಗವಿರಂಗಸ್ವಾಮಿ ಬೆಟ್ಟ, ಶಿವಗಿರಿ ಕ್ಷೇತ್ರದ ಶಿವಾಲ್ದಾಪ್ಪನ ಬೆಟ್ಟ, ಮಾಗಡಿಯ ಸೋಮೇಶ್ವರ ಸ್ವಾಮಿ ದೇವಾಲಯ, ತಾಳವಾಡಿ ಬೆಟ್ಟ, ಕಣಿವೆ ಆಂಜನೇಯ ಸ್ವಾಮಿ ಬೆಟ್ಟ, ಕುಡ್ಲಾಣಿ ದೊಡ್ಡಿ ಫಾಲ್ಸ್, ಚುಂಚಿ ಫಾಲ್ಸ್, ರಾಮದೇವರ ಬೆಟ್ಟದಲ್ಲಿ ಹರಿಯುವ ನೈದಿಲೆ ತೀರ್ಥ, ಅರ್ಕಾವತಿ ನದಿ, ನಲ್ಲಿಗುಡ್ಡೆ ಕೆರೆ, ಕಣಿವೆ ಆಂಜನೇಯ, ಹಾರೋಬೆಲೆ ಡ್ಯಾಂ, ಅರೇಹಳ್ಳಿಯ ರಸ್ತೆಯಲ್ಲಿ ಮನತಣಿಸುವ ಮರಗಳ ಸಾಲು ಪ್ರಸಿದ್ದಿಗೆ ಬರಬೇಕಿದೆ.
ಸಚಿವರೇ ಮನಸು ಮಾಡಿ
ರಾಮನಗರದಲ್ಲಿ ಎಲ್ಲವೂ ಇದೆ. ಈಗ ಬೇಕಿರುವುದು ಸರಕಾರ ಮತ್ತು ಸಚಿವರ ಇಚ್ಛಾಶಕ್ತಿ. ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಮನಸ್ಸು ಮಾಡಿದರೆ, ಡಿಸಿಎಂ ಅಶ್ವತ್ಥ ನಾರಾಯಣ್ ಸಾಥ್ ನೀಡಿದರೆ ರಾಮನಗರ ಅಂತಾರಾಷ್ಟ್ರೀಯ ಮಟ್ಟದ ಪ್ರವಾಸಿ ಕೇಂದ್ರವಾಗುವುದರಲ್ಲಿ ಸಂಶಯವಿಲ್ಲ. ಇದರಿಂದ ಜಿಲ್ಲೆಯಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಯೂ ಆಗಿ, ನಿರುದ್ಯೋಗ ಸಮಸ್ಯೆ ನಿವಾರಣೆಯಾಗಲಿದೆ.
ಜಿಲ್ಲೆಯಲ್ಲಿನ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಲಾಗಿದೆ. ವೀರಾಪುರ-ಬಾನಂದೂರು ಗ್ರಾಮಗಳ ಅಭಿವೃದ್ಧಿ. ಹೊಸದಾಗಿ ನಿರ್ಮಾಣಗೊಳ್ಳುತ್ತಿರುವ ಬೈಪಾಸ್ ರಸ್ತೆಯೇ ಬೆಟ್ಟದ ಮಧ್ಯದಲ್ಲಿ ಸಿದ್ದಗೊಳ್ಳುತ್ತಿದೆ. ಹೀಗಾಗಿ ಈ ರಸ್ತೆಯೇ ಸ್ವರ್ಗ ಎನ್ನಬಹುದು. ಜಿಲ್ಲೆಯ ಪ್ರವಾಸಿ ತಾಣಗಳ ಬಗ್ಗೆ ಸಮಗ್ರ ವರದಿ ಪಡೆಯಲಾಗಿದ್ದು, ಅಭಿವೃದ್ಧಿಗೆ ಪೂರಕ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು.
ಸಿ.ಪಿ.ಯೋಗೇಶ್ವರ್, ಪ್ರವಾಸೋದ್ಯಮ ಸಚಿವ
ಬೆಂಗಳೂರಿನ ಜನರಿಗೆ ವಾರಾಂತ್ಯದಲ್ಲಿ ಸಮಯ ಕಳೆಯಲು ಜಾಗವೇ ಇಲ್ಲ. ಹೀಗಾಗಿ ಎರಡು ದಿನದ ಹಿಂದಷ್ಟೆ ನಂದಿಗಿರಿಧಾಮಕ್ಕೆ 2 ದಿನದ ಪ್ಯಾಕೇಜ್ ತೆರೆಯಲಾಗಿದೆ. ಮುಂದಿನ ದಿನಗಳಲ್ಲಿ ರಾಮನಗರದ ಸಾವನದುರ್ಗ, ಮೇಕೆದಾಟು, ದೇವರಾಯನದುರ್ಗಕ್ಕೂ ಪ್ಯಾಕೇಜ್ ನೀಡಲಾಗುವುದು.
ಶೃತಿ ಕೃಷ್ಣ, ಅಧ್ಯಕ್ಷೆ, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ