ರಾಮನಗರ ಎಸ್ಪಿಗೂ ಕೊರೊನಾ ಸೋಂಕು, ಪೊಲೀಸರಿಗೂ ಪಾಸಿಟಿವ್
ಐದು ದಿನಗಳ ಕಾಲ ನಡೆದ ಮೇಕೆದಾಟು ಪಾದಯಾತ್ರೆಯ ಬಂದೋಬಸ್ತ್ನ ಸಂಪೂರ್ಣ ಜವಾಬ್ದಾರಿಯನ್ನು ಗಿರೀಶ್ ವಹಿಸಿಕೊಂಡಿದ್ದರು. ಇದೀಗ ಬಿಡದಿ ಪೊಲೀಸ್ ಠಾಣೆಯಲ್ಲಿ ಗಿರೀಶ್ ಅವರಿಗೆ ರಾಪಿಡ್ ಕಿಟ್ ಟೆಸ್ಟ್ ಮಾಡಲಾಗಿದೆ.
Vijaya Karnataka 18 Jan 2022, 9:00 pm
ರಾಮನಗರ: ರಾಮನಗರ ಜಿಲ್ಲೆಯಲ್ಲಿ ಕೊರೊನಾ ಸ್ಫೋಟಗೊಂಡಿದೆ. ಕಾಂಗ್ರೆಸ್ ಹಮ್ಮಿಕೊಂಡಿದ್ದ ಮೇಕೆದಾಟು ಪಾದಯಾತ್ರೆಯ ಬಂದೋಬಸ್ತ್ ಮೇಲುಸ್ತುವಾರಿ ವಹಿಸಿಕೊಂಡಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಗಿರೀಶ್ ಅವರಿಗೆ ಕೋವಿಡ್ ದೃಢಪಟ್ಟಿದ್ದರೆ, ಮೇಕೆದಾಟು ಪಾದಯಾತ್ರೆ ಚಾಲನೆಗೊಂಡ ಕನಕಪುರ ತಾಲೂಕಿನಲ್ಲಿ ಒಂದರಲ್ಲೇ ಬರೋಬ್ಬರಿ 237 ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ಈ ಮಧ್ಯೆ ಚಿಕಿತ್ಸೆ ಫಲಕಾರಿಯಾಗದೇ ಕನಕಪುರ ತಾಲೂಕಿನಲ್ಲಿಯೇ ಒಬ್ಬರು ಮೃತಪಟ್ಟಿದ್ಧಾರೆ.
ಮೇಕೆದಾಟು ಪಾದಯಾತ್ರೆ: ಸಂಗಮದಿಂದ ಮಾರ್ಗದುದ್ದಕ್ಕೂ ಕಾಂಗ್ರೆಸ್ ಕಾರ್ಯಕರ್ತರಿಂದ ಸ್ವಚ್ಛತೆ ಕಾರ್ಯ
ಐದು ದಿನಗಳ ಕಾಲ ನಡೆದ ಮೇಕೆದಾಟು ಪಾದಯಾತ್ರೆಯ ಬಂದೋಬಸ್ತ್ನ ಸಂಪೂರ್ಣ ಜವಾಬ್ದಾರಿಯನ್ನು ಗಿರೀಶ್ ವಹಿಸಿಕೊಂಡಿದ್ದರು. ಇದೀಗ ಬಿಡದಿ ಪೊಲೀಸ್ ಠಾಣೆಯಲ್ಲಿ ಗಿರೀಶ್ ಅವರಿಗೆ ರಾಪಿಡ್ ಕಿಟ್ ಟೆಸ್ಟ್ ಮಾಡಲಾಗಿದ್ದು, ಪಾಸಿಟಿವ್ ಬಂದಿದೆ. ಕಳೆದ ಎರಡು ದಿನಗಳ ಹಿಂದೆ ಗಿರೀಶ್ ಅವರ ಪತ್ನಿಗೆ ಕೋವಿಡ್ ದೃಢಪಟ್ಟಿತ್ತು.
ಕ್ಷೀಣಿಸಿದ ಮಾಗಡಿ ಅವರೆ ಘಮಲು; ಸಂತೆಯಲ್ಲಿ ಹುಣಸೂರು, ಹಾಸನ ಅವರೆ ಪಾರಮ್ಯ!
ಮಂಗಳವಾರದ ಬೆಳಗಿನ ತನಕ ಒಟ್ಟು 57 ಪೊಲೀಸರಲ್ಲಿ ಸೋಂಕು ಪತ್ತೆಯಾಗಿದೆ. ಮೇಕೆದಾಟು ಹೋರಾಟದ ಸಂಬಂಧ ಜಿಲ್ಲೆಯ 700 ಪೊಲೀಸರು ಭದ್ರತೆಗೆ ನಿಯೋಜನೆಗೊಂಡಿದ್ದರು.
ಕಳೆದ ನಾಲ್ಕು ತಿಂಗಳ ಅಂತರದಲ್ಲಿಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಹೆಚ್ಚಳವಾಗಿದೆ. ಮಂಗಳವಾರದ ಅಂತ್ಯದ ವೇಳೆಗೆ ಜಿಲ್ಲೆಯಲ್ಲಿ 385 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇದರಲ್ಲಿ ಮೇಕೆದಾಟು ಪಾದಯಾತ್ರೆ ಆರಂಭಗೊಂಡ ಕನಕಪುರ ತಾಲೂಕಿನಲ್ಲಿ ಪ್ರಕರಣಗಳ ಸಂಖ್ಯೆ ದ್ವಿಶತಕದ ಗಡಿ ದಾಟಿದ್ದು, ಒಟ್ಟು 237 ಮಂದಿಯಲ್ಲಿ ಸೋಂಕು ಕಂಡುಬಂದಿದೆ.
ಕೋವಿಡ್ ಸಹಾಯವಾಣಿ ಆರಂಭ
ರಾಮನಗರ: ಕೋವಿಡ್ 3ನೇ ಅಲೆ ನಿಯಂತ್ರಿಸಿ, ಜಿಲ್ಲೆಯಲ್ಲಿನ ಸೋಂಕಿತರಿಗೆ ಅಗತ್ಯ ಮಾಹಿತಿ ನೀಡಿ ಸಕಾಲಕ್ಕೆ ಆರೋಗ್ಯ ಚಿಕಿತ್ಸೆ ನೆರವು ನೀಡಲು ರಾಮನಗರ ಜಿಲ್ಲಾಡಳಿತವು ತಾಲೂಕುವಾರು ಸಹಾಯವಾಣಿ ಆರಂಭಿಸಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ.ರಾಕೇಶ್ ಕುಮಾರ್ ತಿಳಿಸಿದ್ದಾರೆ.
ರಾಮನಗರ ಜಿಲ್ಲಾ ಕೇಂದ್ರದ ಸಹಾಯವಾಣಿ ಸಂಖ್ಯೆ 080-27271029 ಮತ್ತು 9113077476 (ವಾಟ್ಸಾಪ್ ಸಂಖ್ಯೆ ) ರಾಮನಗರ ತಾಲೂಕು -9632162354, ಚನ್ನಪಟ್ಟಣ -080-27251765, ಕನಕಪುರ ತಾಲೂಕು-080-27522442, ಮಾಗಡಿ ತಾಲೂಕು 080-27745233 ಯನ್ನು ಸಂಪರ್ಕಿಸಬಹುದು. ಕೋವಿಡ್ ಸಂಬಂಧಿತ ಆರೋಗ್ಯ ಸಲಹೆ, ಯಾವುದೇ ತೊಂದರೆ, ಸಮಸ್ಯೆಗಳಿದ್ದಲ್ಲಿಸಂಪರ್ಕಿಸಲು ಜಿಲ್ಲಾಡಳಿತ ಸಹಾಯವಾಣಿಗಳನ್ನು ಆರಂಭಿಸಿದೆ. ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೇಕೆದಾಟು ಪಾದಯಾತ್ರೆ: ಸಂಗಮದಿಂದ ಮಾರ್ಗದುದ್ದಕ್ಕೂ ಕಾಂಗ್ರೆಸ್ ಕಾರ್ಯಕರ್ತರಿಂದ ಸ್ವಚ್ಛತೆ ಕಾರ್ಯ
ಐದು ದಿನಗಳ ಕಾಲ ನಡೆದ ಮೇಕೆದಾಟು ಪಾದಯಾತ್ರೆಯ ಬಂದೋಬಸ್ತ್ನ ಸಂಪೂರ್ಣ ಜವಾಬ್ದಾರಿಯನ್ನು ಗಿರೀಶ್ ವಹಿಸಿಕೊಂಡಿದ್ದರು. ಇದೀಗ ಬಿಡದಿ ಪೊಲೀಸ್ ಠಾಣೆಯಲ್ಲಿ ಗಿರೀಶ್ ಅವರಿಗೆ ರಾಪಿಡ್ ಕಿಟ್ ಟೆಸ್ಟ್ ಮಾಡಲಾಗಿದ್ದು, ಪಾಸಿಟಿವ್ ಬಂದಿದೆ. ಕಳೆದ ಎರಡು ದಿನಗಳ ಹಿಂದೆ ಗಿರೀಶ್ ಅವರ ಪತ್ನಿಗೆ ಕೋವಿಡ್ ದೃಢಪಟ್ಟಿತ್ತು.
ಕ್ಷೀಣಿಸಿದ ಮಾಗಡಿ ಅವರೆ ಘಮಲು; ಸಂತೆಯಲ್ಲಿ ಹುಣಸೂರು, ಹಾಸನ ಅವರೆ ಪಾರಮ್ಯ!
ಮಂಗಳವಾರದ ಬೆಳಗಿನ ತನಕ ಒಟ್ಟು 57 ಪೊಲೀಸರಲ್ಲಿ ಸೋಂಕು ಪತ್ತೆಯಾಗಿದೆ. ಮೇಕೆದಾಟು ಹೋರಾಟದ ಸಂಬಂಧ ಜಿಲ್ಲೆಯ 700 ಪೊಲೀಸರು ಭದ್ರತೆಗೆ ನಿಯೋಜನೆಗೊಂಡಿದ್ದರು.
ಕಳೆದ ನಾಲ್ಕು ತಿಂಗಳ ಅಂತರದಲ್ಲಿಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಹೆಚ್ಚಳವಾಗಿದೆ. ಮಂಗಳವಾರದ ಅಂತ್ಯದ ವೇಳೆಗೆ ಜಿಲ್ಲೆಯಲ್ಲಿ 385 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇದರಲ್ಲಿ ಮೇಕೆದಾಟು ಪಾದಯಾತ್ರೆ ಆರಂಭಗೊಂಡ ಕನಕಪುರ ತಾಲೂಕಿನಲ್ಲಿ ಪ್ರಕರಣಗಳ ಸಂಖ್ಯೆ ದ್ವಿಶತಕದ ಗಡಿ ದಾಟಿದ್ದು, ಒಟ್ಟು 237 ಮಂದಿಯಲ್ಲಿ ಸೋಂಕು ಕಂಡುಬಂದಿದೆ.
ಕೋವಿಡ್ ಸಹಾಯವಾಣಿ ಆರಂಭ
ರಾಮನಗರ: ಕೋವಿಡ್ 3ನೇ ಅಲೆ ನಿಯಂತ್ರಿಸಿ, ಜಿಲ್ಲೆಯಲ್ಲಿನ ಸೋಂಕಿತರಿಗೆ ಅಗತ್ಯ ಮಾಹಿತಿ ನೀಡಿ ಸಕಾಲಕ್ಕೆ ಆರೋಗ್ಯ ಚಿಕಿತ್ಸೆ ನೆರವು ನೀಡಲು ರಾಮನಗರ ಜಿಲ್ಲಾಡಳಿತವು ತಾಲೂಕುವಾರು ಸಹಾಯವಾಣಿ ಆರಂಭಿಸಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ.ರಾಕೇಶ್ ಕುಮಾರ್ ತಿಳಿಸಿದ್ದಾರೆ.
ರಾಮನಗರ ಜಿಲ್ಲಾ ಕೇಂದ್ರದ ಸಹಾಯವಾಣಿ ಸಂಖ್ಯೆ 080-27271029 ಮತ್ತು 9113077476 (ವಾಟ್ಸಾಪ್ ಸಂಖ್ಯೆ ) ರಾಮನಗರ ತಾಲೂಕು -9632162354, ಚನ್ನಪಟ್ಟಣ -080-27251765, ಕನಕಪುರ ತಾಲೂಕು-080-27522442, ಮಾಗಡಿ ತಾಲೂಕು 080-27745233 ಯನ್ನು ಸಂಪರ್ಕಿಸಬಹುದು. ಕೋವಿಡ್ ಸಂಬಂಧಿತ ಆರೋಗ್ಯ ಸಲಹೆ, ಯಾವುದೇ ತೊಂದರೆ, ಸಮಸ್ಯೆಗಳಿದ್ದಲ್ಲಿಸಂಪರ್ಕಿಸಲು ಜಿಲ್ಲಾಡಳಿತ ಸಹಾಯವಾಣಿಗಳನ್ನು ಆರಂಭಿಸಿದೆ. ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.