ಆ್ಯಪ್ನಗರ

ಬಡಮಕ್ಕಳನ್ನು ಹೊರಹಾಕಿದ ಖಾಸಗಿ ಶಾಲೆಗಳು: ರಾಮನಗರದಲ್ಲಿ ವಿದ್ಯಾರ್ಥಿಗಳ ಗೋಳು ಕೇಳೋರು ಯಾರು?!

ಶಾಲಾ ಶುಲ್ಕವನ್ನು ಕಟ್ಟದ ವಿದ್ಯಾರ್ಥಿಗಳನ್ನು ಆನ್ ಲೈನ್ ಕ್ಲಾಸ್ ನಿಂದ ಖಾಸಗಿ ಶಾಲೆಗಳು ಹೊರಹಾಕಿವೆ. ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಜೈನ್‌ ವಿದ್ಯಾಸಂಸ್ಥೆಯು ಶುಲ್ಕ ಕಟ್ಟದ ಮಕ್ಕಳ ಜತೆಗೆ ಆರ್‌ಟಿಇ ಅಡಿ ಪ್ರವೇಶ ಪಡೆದ ಮಕ್ಕಳನ್ನೂ ತರಗತಿಯಿಂದ ಹೊರ ಹಾಕಿದೆ.

Vijaya Karnataka Web 7 Jan 2021, 12:45 pm
ಕನಕಪುರ: ರಾಜ್ಯ ಸರಕಾರ ಮತ್ತು ಶಿಕ್ಷಣ ಇಲಾಖೆಯ ಸ್ಪಷ್ಟ ನಿರ್ದೇಶನವನ್ನು ಗಾಳಿಗೆ ತೂರಿರುವ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು, ಶಾಲಾ ಶುಲ್ಕದ ಎರಡನೇ ಕಂತು ಕಟ್ಟದ ವಿದ್ಯಾರ್ಥಿಗಳನ್ನು ಆನ್‌ಲೈನ್‌ ಕ್ಲಾಸ್‌ನಿಂದ ಹೊರ ಹಾಕಿವೆ.
Vijaya Karnataka Web ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ


ಕನಕಪುರ ತಾಲೂಕಿನ ಜೈನ್‌ ಶಿಕ್ಷಣ ಸಂಸ್ಥೆ ಹಾಗೂ ಕನಕಪುರ ನಗರದ ಸೆಂಟ್‌ಥಾಮಸ್‌ ಶಾಲೆ ಸೇರಿದಂತೆ ಅನೇಕ ಶಾಲೆಗಳ ವಿದ್ಯಾರ್ಥಿಗಳು ಅನ್‌ಲೈನ್‌ ಶಿಕ್ಷಣದಿಂದ ವಂಚಿತರಾಗುವಂತಾಗಿದೆ.

ಆರ್‌ಟಿಇ ಮಕ್ಕಳೂ ಹೊರಕ್ಕೆ

ಜ.1ರಂದು ಆರಂಭಗೊಂಡ 10 ಮತ್ತು 12ನೇ ತರಗತಿಗಳಿಗೂ ಶುಲ್ಕ ಕಟ್ಟದ ಮಕ್ಕಳಿಗೆ ಪ್ರವೇಶ ನಿರಾಕರಿಸಲಾಗಿತ್ತು. ಸಾಮಾಜಿಕ ಕಾರ‍್ಯಕರ್ತರು ಮತ್ತು ಮಾಧ್ಯಮಗಳಿಗೆ ವಿಷಯ ತಿಳಿಯುತ್ತಿದ್ದಂತೆ, ತರಾತುರಿಯಲ್ಲಿ ಮಕ್ಕಳನ್ನು ತರಗತಿ ಒಳಗೆ ಬಿಟ್ಟುಕೊಳ್ಳಲಾಗಿತ್ತು. ಇನ್ನು ತಾಲೂಕಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಜೈನ್‌ ವಿದ್ಯಾಸಂಸ್ಥೆಯು ಶುಲ್ಕ ಕಟ್ಟದ ಮಕ್ಕಳ ಜತೆಗೆ ಆರ್‌ಟಿಇ ಅಡಿ ಪ್ರವೇಶ ಪಡೆದ ಮಕ್ಕಳನ್ನೂ ತರಗತಿಯಿಂದ ಹೊರ ಹಾಕಿದೆ.
ಶಾಲಾ-ಕಾಲೇಜಿನಲ್ಲಿ ಏರುತ್ತಿದೆ ಹಾಜರಿ: ಕೋವಿಡ್ ಗೆ ಸೆಡ್ಡು ಹೊಡೆದ ವಿದ್ಯಾರ್ಥಿಗಳ ಸಂಖ್ಯೆ ದಿನೇ ದಿನೇ ಏರಿಕೆ!

ಬಡ ಹಾಗೂ ಸ್ಥಳೀಯ ಮಕ್ಕಳಿಗೆ ಉಚಿತ ಶಿಕ್ಷಣದ ಭರವಸೆ ನೀಡಿ ಸರಕಾರದಿಂದ 40 ಎಕರೆ ಜಮೀನನ್ನು ಈ ಸಂಸ್ಥೆ ಉಚಿತವಾಗಿ ಪಡೆದಿತ್ತು. ಈಗ ತಾನೇ ನೀಡಿದ ಭರವಸೆಯನ್ನು ಶಿಕ್ಷಣ ಸಂಸ್ಥೆ ಮುರಿದಿದೆ ಎಂದು ಬಿಜೆಪಿ ಮುಖಂಡ ನಾಗಾನಂದ್‌ ಅವರು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ಬಾಗಲಕೋಟೆ: ಐವರು ಶಿಕ್ಷಕರಿಗೆ ಕೊರೊನಾ ಪಾಸಿಟಿವ್‌, ಪೋಷಕರಲ್ಲಿ ಆತಂಕ!

ಬಿಇಒ ನಾಟ್‌ ರೀಚಬಲ್‌
ಬಿಜೆಪಿ ನಾಯಕ ನೀಡಿದ ದೂರಿನ ಸಂಬಂಧ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಕೊಳ್ಳಲು ಕರೆ ಮಾಡಿದರೆ ಬಿಇಒ ಕರೆಯನ್ನೇ ಸ್ವೀಕರಿಸುತ್ತಿಲ್ಲ. ಇದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.
ಚಿಕ್ಕಮಗಳೂರು: ಶಾಲೆ ಆರಂಭದ ಬೆನ್ನಲ್ಲೇ ನಾಲ್ವರು ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ