ಆ್ಯಪ್ನಗರ

ಬಸವೇಶ್ವರ ದೇವರ ಅಗ್ನಿಕೊಂಡ, ರಥೋತ್ಸವ ರದ್ದು: ಅಧಿಕಾರಿಗಳ ಜತೆ ಗ್ರಾಮಸ್ಥರ ಜಟಾಪಟಿ

ಕಳೆದ ವರ್ಷ ಅಗ್ನಿಕೊಂಡ ಹಾಯುವ ವೇಳೆ ಅಗ್ನಿಕೊಂಡದಲ್ಲಿ ಅರ್ಚಕ ವಿಜಯ್ ಕುಮಾರ್ ಅಗ್ನಿಕೊಂಡದಲ್ಲಿ ಬಿದ್ದು ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಅಗ್ನಿ ಕೊಂಡೋತ್ಸವವನ್ನು ಜಿಲ್ಲಾಡಳಿತ ರದ್ದುಪಡಿಸಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹಾಗೂ ಧಾರ್ಮಿಕ ದತ್ತಿ ಜಟಾಪಟಿ ನಡೆದಿದೆ.

Vijaya Karnataka Web 18 May 2019, 4:21 pm
ರಾಮನಗರ: ರಾಮನಗರ ತಾಲೂಕಿನ ಅವ್ವೇರಹಳ್ಳಿ ಗ್ರಾಮದ ಪ್ರಸಿದ್ಧ ಶ್ರೀ ರೇವಣಸಿದ್ದೇಶ್ವರ ಜಾತ್ರಾ ಮಹೋತ್ಸವದ ವೇಳೆ ಪಾರಂಪರಿಕವಾಗಿ ನಡೆಯುತ್ತಿದ್ದ ಅಗ್ನಿ ಕೊಂಡೋತ್ಸವ ಹಾಗೂ ರಥೋತ್ಸವವನ್ನು ಧಾರ್ಮಿಕ ದತ್ತಿ ಇಲಾಖೆ ರದ್ದುಪಡಿಸಿದೆ.
Vijaya Karnataka Web Kondotsava


ಕಳೆದ ವರ್ಷ ಅಗ್ನಿಕೊಂಡ ಹಾಯುವ ವೇಳೆ ಅಗ್ನಿಕೊಂಡದಲ್ಲಿ ಅರ್ಚಕ ವಿಜಯ್ ಕುಮಾರ್ ಅಗ್ನಿಕೊಂಡದಲ್ಲಿ ಬಿದ್ದು ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಅಗ್ನಿ ಕೊಂಡೋತ್ಸವವನ್ನು ಜಿಲ್ಲಾಡಳಿತ ರದ್ದುಪಡಿಸಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹಾಗೂ ಧಾರ್ಮಿಕ ದತ್ತಿ ಜಟಾಪಟಿ ನಡೆದಿದೆ.

ಕೊಂಡೋತ್ಸವದ ವೇಳೆ ಅವಘಡ: ಪ್ರಧಾನ ಅರ್ಚಕರಿಗೆ ಗಂಭೀರ ಗಾಯ

ಈ ಹಿನ್ನೆಲೆಯಲ್ಲಿ ಅರ್ಚಕರು ಧಾರ್ಮಿಕ ದತ್ತಿ ಇಲಾಖೆಗೆ ಅಗ್ನಿಕೊಂಡದ ಗಾತ್ರವನ್ನು ಕಿರಿದಾಗಿಸುವಂತೆ ಮನವಿ ಮಾಡಿದ್ದರು. ಇದನ್ನು ಪರಿಗಣಿಸಿದ ಇಲಾಖೆ, 60 ಅಡಿ ಉದ್ದದ ಅಗ್ನಿಕೊಂಡವನ್ನು 15 ಅಡಿಗೆ ಇಳಿಸಿತ್ತು. ಅಗ್ನಿಕೊಂಡದ ಎರಡು ಬದಿ 10 ಅಡಿ ಇಟ್ಟಿಗೆಯಿಂದ ಕೊಂಡದ ಗಾತ್ರ ಕಡಿಮೆ ಮಾಡಿತ್ತು. ಇದನ್ನು ಒಪ್ಪದ ಗ್ರಾಮಸ್ಥರು, ಭಕ್ತರು, ಧಾರ್ಮಿಕ ದತ್ತಿ ಇಲಾಖೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದು, ಅಧಿಕಾರಿಗಳ ಜೊತೆ ಮಾತಿನ ಚಕಮಕಿ ನಡೆಸಿದರು.

ವೀಡಿಯೋ: ಕೊಂಡೋತ್ಸವದಲ್ಲಿ ಕೆಂಡಕ್ಕೆ ಬಿದ್ದು ಗಂಭೀರ ಗಾಯ

ಕೊನೆಗೆ ಅಗ್ನಿ ಕೊಂಡೋತ್ಸವವನ್ನೇ ರದ್ದುಪಡಿಸಿ ಇಲಾಖೆ ಆದೇಶ ಹೊರಡಿಸಿತು. ಇಲಾಖೆಯ ಕ್ರಮ ವಿರೋಧಿಸಿ ಇಂದು ನಡೆಯಬೇಕಿದ್ದ ರಥೋತ್ಸವದಲ್ಲಿ ರಥ ಎಳೆಯಲು ಆಚಾರರು ಬರಲಿಲ್ಲ. ಮಧ್ಯಾಹ್ನ ಸರಿಯಾಗಿ 12 ಗಂಟೆಗೆ ರಥೋತ್ಸವ ನಡೆಯಬೇಕಿತ್ತು. ಆಚಾರರು ಬಾರದ ಹಿನ್ನೆಲೆಯಲ್ಲಿ ರಥೋತ್ಸವವನ್ನೂ ಜಿಲ್ಲಾಡಳಿತ ರದ್ದುಪಡಿಸಿತು.

ಜಿಲ್ಲಾಡಳಿತದಿಂದ ಎಷ್ಟೇ ಮನವೊಲಿಸಿದರೂ ರಥ ಎಳೆಯಲು ಆಚಾರರು ಬರಲಿಲ್ಲ. ಹೀಗಾಗಿ ಭಕ್ತರು ರಥಕ್ಕೆ ಕೈ ಮುಗಿದು ಹೊರಡುತ್ತಿದ್ದಾರೆ.
ಮಂಡ್ಯ, ಮೈಸೂರು ಸೇರಿದಂತೆ ಅನೇಕ ಭಾಗಗಳಿಂದ ಬಂದಿದ್ದ ಭಕ್ತರು, ರಥೋತ್ಸವ ರದ್ದಾದ ಹಿನ್ನೆಲೆಯಲ್ಲಿ ನಿರಾಸೆಯಿಂದ ಹೊರಟರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ