ಆ್ಯಪ್ನಗರ

ರಸ್ತೆ ಇಕ್ಕಟ್ಟು , ಸಂಚಾರ ಬಿಕ್ಕಟ್ಟು

ನಗರದ ಐಜೂರು ವೃತ್ತದಿಂದ ರೈಲ್ವೆ ನಿಲ್ದಾಣದವರೆಗಿನ ರಸ್ತೆ ಕಿರಿದಾಗಿದ್ದು, ವಾಹನಗಳ ದಟ್ಟಣೆ ಹೆಚ್ಚಾಗಿ ಸಂಚಾರ ದುಸ್ತರವಾಗಿದ್ದು, ಹಳೆ ನಗರಕ್ಕೆ ಹೋಗಲು ಕಿರಿಕಿರಿ ಉಂಟಾಗುತ್ತಿದೆ.

Vijaya Karnataka Web 17 Dec 2018, 5:00 am
ವಿಕ ಸುದ್ದಿಲೋಕ ರಾಮನಗರ :ನಗರದ ಐಜೂರು ವೃತ್ತದಿಂದ ರೈಲ್ವೆ ನಿಲ್ದಾಣದವರೆಗಿನ ರಸ್ತೆ ಕಿರಿದಾಗಿದ್ದು, ವಾಹನಗಳ ದಟ್ಟಣೆ ಹೆಚ್ಚಾಗಿ ಸಂಚಾರ ದುಸ್ತರವಾಗಿದ್ದು, ಹಳೆ ನಗರಕ್ಕೆ ಹೋಗಲು ಕಿರಿಕಿರಿ ಉಂಟಾಗುತ್ತಿದೆ.
Vijaya Karnataka Web road crisis traffic crisis bridge to the arkavati river
ರಸ್ತೆ ಇಕ್ಕಟ್ಟು , ಸಂಚಾರ ಬಿಕ್ಕಟ್ಟು

ಬೆಂಗಳೂರು-ಮೈಸೂರು ರಸ್ತೆಯಿಂದ ಕೈಗಾರಿಕಾ ಪ್ರದೇಶದ ಮೂಲಕ ರಾಮನಗರದ ಹಳೆಯ ಪ್ರದೇಶಗಳಿಗೆ (ಅಗ್ರಹಾರ ಬೀದಿ ಮೂಲಕ) ಸಂಪರ್ಕ ಕಲ್ಪಿಸಲು ಅರ್ಕಾವತಿ ನದಿಗೆ ಸೇತುವೆ ನಿರ್ಮಿಸಲಾಗಿದೆ. ಈ ಮೂಲಕ ರೈಲ್ವೇ ಸ್ಟೇಷನ್‌ಗೆ ಹೋಗುವ ರಸ್ತೆಯಲ್ಲಿ ವಾಹನ ದಟ್ಟಣೆ ಕಡಿಮೆ ಮಾಡಬಹುದೆಂದು ಅಂದಾಜಿಸಲಾಗಿತ್ತು.
ಸೇತುವೆ ಪೂರ್ಣಗೊಂಡರೂ ಸಣ್ಣಪುಟ್ಟ ಕಾಮಗಾರಿಗಳನ್ನು ಪೂರ್ಣಗೊಳಿಸದಿರುವುದರಿಂದ ಸಂಚಾರಕ್ಕೆ ಇನ್ನು ಮುಕ್ತಗೊಳಿಸಿಲ್ಲ. ಇದರಿಂದ ಸುಮಾರು 2 ಕೋಟಿಗೂ ಹೆಚ್ಚು ಹಣ ಖರ್ಚು ಮಾಡಿ ನಿರ್ಮಿಸಿದ ಸೇತುವೆ ವ್ಯರ್ಥವಾಗುವಂತೆ ಮಾಡಲಾಗಿದೆ.
ಈಗಾಗಲೆ ನಗರ ವ್ಯಾಪ್ತಿಯಲ್ಲಿ ವಾಹನ ದಟ್ಟಣೆಯಿಂದ ವಾಹನ ಸವಾರರು ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ. ಇದರಿಂದ ಪ್ರತಿದಿನ ನಗರದ ಸ್ಟೇಷನ್‌ ರಸ್ತೆಯಲ್ಲಿ ಚಿಕ್ಕಪುಟ್ಟ ಅಪಘಾತಗಳು ಸಂಭವಿಸುತ್ತಿವೆ. ಎಂಜಿ ರಸ್ತೆಯ ಅಡಿಗಾಸ್‌ ಹೋಟೆಲ್‌ ಬಳಿ ವಾಹನಗಳು ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿ ಶಪಿಸುತ್ತಾ ಕಾಯುವುದು ಮಾಮೂಲಿ ದೃಶ್ಯ ಎಂಬಂತಾಗಿದೆ.
ಈ ರಸ್ತೆಯಲ್ಲಿ ಒತ್ತಡವನ್ನು ತಗ್ಗಿಸಲು ತಕ್ಷಣವೇ ನಗರದ ಕೈಗಾರಿಕಾ ಪ್ರದೇಶದ ಬಳಿ ಅರ್ಕಾವತಿ ನದಿಗೆ ನಿರ್ಮಿಸಿರುವ ಸೇತುವೆ ಮೂಲಕ ವಾಹನಗಳ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ನಗರದ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಹೋಗಲು ಸಂಚಾರ ವ್ಯವಸ್ಥೆ ಮಾಡಿಕೊಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ