ಆ್ಯಪ್ನಗರ

40 ಲಕ್ಷ ಮೌಲ್ಯದ ರಕ್ತಚಂದನ ಮರದ ತುಂಡು ಜಪ್ತಿ

ಹೆಸರಾಂತ ಬ್ರಾಂಡ್‌ಗಳಲ್ಲಿ ಅತ್ಯಂತ ಮೌಲ್ಯವುಳ್ಳ ರಕ್ತಚಂದನದ ಮರದ ತುಂಡುಗಳನ್ನು ಅಕ್ರಮವಾಗಿ ಸಂಗ್ರಹಿಸಿದ್ದ ಮರದ ಸಾಮಿಲ್‌ವೊಂದರ ಮೇಲೆ ಆಂಧ್ರಪ್ರದೇಶ ಮತ್ತು ಕನಕಪುರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ 40 ಲಕ್ಷ ರೂ. ಬೆಲೆಬಾಳುವ ಮಾಲನ್ನು ವಶಪಡಿಸಿಕೊಂಡಿದ್ದಾರೆ.

Vijaya Karnataka 8 Jul 2018, 5:00 am
ಹಾರೋಹಳ್ಳಿ (ಕನಕಪುರ ): ಹೆಸರಾಂತ ಬ್ರಾಂಡ್‌ಗಳಲ್ಲಿ ಅತ್ಯಂತ ಮೌಲ್ಯವುಳ್ಳ ರಕ್ತಚಂದನದ ಮರದ ತುಂಡುಗಳನ್ನು ಅಕ್ರಮವಾಗಿ ಸಂಗ್ರಹಿಸಿದ್ದ ಮರದ ಸಾಮಿಲ್‌ವೊಂದರ ಮೇಲೆ ಆಂಧ್ರಪ್ರದೇಶ ಮತ್ತು ಕನಕಪುರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ 40 ಲಕ್ಷ ರೂ. ಬೆಲೆಬಾಳುವ ಮಾಲನ್ನು ವಶಪಡಿಸಿಕೊಂಡಿದ್ದಾರೆ.
Vijaya Karnataka Web RNR-7 Harohalli -3


ಖಚಿತ ಮಾಹಿತಿ: ಕನಕಪುರ ಪಟ್ಟಣದ ದೇಗುಲಮಠ ರಸ್ತೆಯಲ್ಲಿನ ನಂದಕುಮಾರ್‌ ಎಂಬುವವರಿಗೆ ಸೇರಿದ ಸಾಮಿಲ್‌ನಲ್ಲಿ ಎರಡು ಟನ್‌ ತೂಕದ ರಕ್ತಚಂದನ ಮರದ ತುಂಡುಗಳನ್ನು ಅಕ್ರಮವಾಗಿ ದಾಸ್ತಾನು ಮಾಡಲಾಗಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಪೊಲೀಸ್‌ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ತಿರುಪತಿ ಠಾಣೆಯ ಸರ್ಕಲ್‌ ಇನ್ಸ್‌ಪೆಕ್ಟರ್‌ ಸಾದಿಕ್‌ ಮತ್ತು ಕನಕಪುರ ಸರ್ಕಲ್‌ ಇನ್ಸ್‌ಪೆಕ್ಟರ್‌ ಕೆ.ಎಂ.ಮಲ್ಲೇಶ್‌ ಮತ್ತವರ ಸಿಬ್ಬಂದಿು ಜಂಟಿ ಕಾರ್ಯಾಚರಣೆ ನಡೆಸಿ, ಮಾಲು ವಶಪಡಿಸಿಕೊಂಡ ಬಳಿಕ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸಿದ್ದಾರೆ.

ತಿರುಪತಿಯಲ್ಲಿ ಸುಳಿವು:
ತಿರುಪತಿ ಪಟ್ಟಣ ಪೊಲೀಸ್‌ ಠಾಣಾ ವ್ಯಾಪ್ತಿಯ ಟೆಂಪೋವೊಂದರಲ್ಲಿ ಮೌಲ್ಯಯುತವಾದ 20 ಮರದ ತುಂಡುಗಳನ್ನು ಸಾಗಿಸುತ್ತಿದ್ದಾಗ ತಪಾಸಣೆ ವೇಳೆಯಲ್ಲಿ ಅನುಮಾನ ಬಂದು ವಿಚಾರಣೆ ನಡೆಸಿದಾಗ ಟೆಂಪೋದಲ್ಲಿದ್ದ ಇಬ್ಬರು ಆರೋಪಿಗಳು ಅಕ್ರಮ ಮರ ಸಾಗಾಣಿಕೆಯ ಬಗ್ಗೆ ಬಾಯ್ಬಿಟ್ಟಿದ್ದಾರೆ. ರಕ್ತಚಂದನ ಮರವು ಪ್ರತಿ ಕೆ.ಜಿ.ಗೆ 2.5 ಲಕ್ಷ ರೂ.ಗೂ ಹೆಚ್ಚಿನ ಮೌಲ್ಯವುಳ್ಳದ್ದಾಗಿದೆ. ಆರೋಪಿಗಳನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಿದ ತನಿಖೆಯಲ್ಲಿ ಕನಕಪುರದ ನಂದಕುಮಾರ್‌ ಮಿಲ್ಲಿಗೆ ಎರಡು ಟನ್‌ ರಕ್ತಚಂದನ ಮರಗಳನ್ನು ಸಾಗಿಸಿರುವ ಬಗ್ಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಶನಿವಾರ ಮದ್ಯಾಹ್ನ ಪೊಲೀಸರು ದಿಢೀರ್‌ ದಾಳಿ ನಡೆಸಿ ಮಾಲನ್ನು ವಶಕ್ಕೆ ತೆಗೆದುಕೊಂಡು ತನಿಖೆ ಕೈಗೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ