ಆ್ಯಪ್ನಗರ

ಶಾಸಕಿ ಅನಿತಾ ಕುಮಾರಸ್ವಾಮಿಗೆ ಶಾಲಾ ಸಿಬ್ಬಂದಿಯಿಂದ ಛತ್ರಿ ಸೇವೆ

ಕೆಲವು ಹೊತ್ತು ಶಾಲಾ ಸಿಬ್ಬಂದಿಯೇ ಶಾಸಕಿಗೆ ಛತ್ರಿ ಹಿಡಿದು ಬಿಸಿಲಿನಿಂದ ರಕ್ಷಿಸಿದ್ದರು. ಆ ನಂತರ ಓಡಿ ಬಂದ ಶಾಸಕರ ಗನ್‌ಮ್ಯಾನ್‌ ಶಾಲಾ ಸಿಬ್ಬಂದಿಯಿಂದ ಛತ್ರಿ ಪಡೆದು ಹಿಡಿದುಕೊಂಡರು.

Vijaya Karnataka Web 27 Dec 2018, 7:06 pm
ರಾಮನಗರ: ಸ್ಥಳೀಯ ಶಾಸಕಿ ಅನಿತಾ ಕುಮಾರಸ್ವಾಮಿ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಛತ್ರಿ ಸೇವೆಯಾಗಿದೆ.
Vijaya Karnataka Web ಅನಿತಾ ಕುಮಾರಸ್ವಾಮಿ
ಅನಿತಾ ಕುಮಾರಸ್ವಾಮಿ


ಇಲ್ಲಿನ ಖಾಸಗಿ ಶಾಲೆಯ ವಾರ್ಷಿಕ ಕಾರ್ಯಕ್ರಮದಲ್ಲಿ ಶಾಸಕಿ ಅನಿತಾ ಕುಮಾರಸ್ವಾಮಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಬಿಸಿಲು ನೆತ್ತಿಯ ಸುಡುತ್ತಿತ್ತು.

ಕೂಡಲೇ ಶಾಲೆಯ ಸಿಬ್ಬಂದಿಯೊಬ್ಬರು ಆಗಮಿಸಿ ಶಾಸಕಿ ಅನಿತಾ ಕುಮಾರಸ್ವಾಮಿಗೆ ಛತ್ರಿ ಹಿಡಿದರು.

ಕೆಲವು ಹೊತ್ತು ಶಾಲಾ ಸಿಬ್ಬಂದಿಯೇ ಶಾಸಕಿಗೆ ಛತ್ರಿ ಹಿಡಿದು ಬಿಸಿಲಿನಿಂದ ರಕ್ಷಿಸಿದ್ದರು. ಆ ನಂತರ ಓಡಿ ಬಂದ ಶಾಸಕರ ಗನ್‌ಮ್ಯಾನ್‌ ಶಾಲಾ ಸಿಬ್ಬಂದಿಯಿಂದ ಛತ್ರಿ ಪಡೆದು ಹಿಡಿದುಕೊಂಡರು.

ಶಾಸಕಿ ಅನಿತಾ ಕುಮಾರಸ್ವಾಮಿ ಭಾಷಣ ಮಾಡುವಾಗಲೂ ಗನ್‌ಮ್ಯಾನ್‌ ಛತ್ರಿ ಹಿಡಿದೇ ನಿಂತಿದ್ದರು.

ಬಿರು ಬಿಸಿಲಿನಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರೇ, ಅನಿತಾ ಕುಮಾರಸ್ವಾಮಿಗೆ ಛತ್ರಿ ಸೇವೆ ಜೋರಾಗಿ ಸಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ