ಆ್ಯಪ್ನಗರ

ಶುಕ್ರವಾರದಿಂದ ಶಾಲಾ-ಕಾಲೇಜು ಓಪನ್: ಕಾನೂನು ಉಲ್ಲಂಸಿದರೆ ಕಠಿಣ ಕ್ರಮ ಜಿಲ್ಲಾಧಿಕಾರಿ ಎಚ್ಚರಿಕೆ

ಮಾಜಿ ಸಚಿವ ಡಿಕೆ ಶಿವಕುಮಾರ್‌ ಬಂಧನ ನಂತರ ರಾಮನಗರ ಜಿಲ್ಲೆಯಲ್ಲಿ ಭಾರಿ ಪ್ರತಿಭಟನೆ, ಬಂದ್‌ನಿಂದಾಗಿ ಶಾಲಾ, ಕಾಲೇಜಿಗೆ ರಜೆ ಘೋಷಿಸಲಾಗಿತ್ತು. ಈಗ ಮತ್ತೆ ಪುನಾರಂಬಗೊಳ್ಳಲಿದೆ.

Vijaya Karnataka Web 5 Sep 2019, 6:58 pm
ರಾಮನಗರ: ಕಳೆದ ಎರಡು ದಿನಗಳಿಂದಲ್ಲೂ ಸಂಪೂರ್ಣ ಸ್ಥಬ್ತಗೊಂಡಿದ್ದ ರಾಮನಗರ ಜಿಲ್ಲೆ ಶುಕ್ರವಾರ ಸಹಜ ಸ್ಥಿತಿಗೆ ಮರಳುವ ನಿರೀಕ್ಷೆ ಇದೆ.
Vijaya Karnataka Web ಪೊಲೀಸ್ ಬಿಗಿ ಭದ್ರತೆ
ಪೊಲೀಸ್ ಬಿಗಿ ಭದ್ರತೆ


ಶಾಲಾ-ಕಾಲೇಜುಗಳು ಎಂದಿನಂತೆ ನಡೆಯಲಿದ್ದು, ಜನ ಜೀವನ ಸಹಜ ಸ್ಥಿತಿಗೆ ಮರಳುವ ನಿರೀಕ್ಷೆ ಇದೆ.

ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧನ ಖಂಡಿಸಿ ಜಿಲ್ಲೆಯಾದ್ಯಂತ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಈಗ ಎಲ್ಲವೂ ಸುಧಾರಣೆಯಾಗಿದ್ದು, ಎಂದಿನಂತೆ ಕಾರ್ಯನಿರ್ವಹಣೆಯಾಗಲಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ವಿಜಯ ಕರ್ನಾಟಕಕ್ಕೆ ತಿಳಿಸಿದರು.

2ನೇ ದಿನ ಸೈಲೆಂಟ್

ಬಂದ್‌ನ ಮೊದಲ ದಿನವಾದ ಬುಧವಾರ 3 ಬೈಕ್, 1 ಕೆಎಸ್‌ಅರ್‌ಟಿಸಿ ಬಸ್‌ಗೆ ಬೆಂಕಿ ಇಡಲಾಗಿತ್ತು. ಗುರುವಾರ ಬಹುತೇಕ ಶಾಂತಿಯುತವಾಗಿ ಬಂದ್ ಆಚರಣೆ ಮುಗಿದಿದ್ದು, ಡಿಕೆಶಿ ಸ್ವಗ್ರಾಮವಾದ ದೊಡ್ಡ ಆಲಹಳ್ಳಿ ಮಾತ್ರ ಪ್ರತಿಭಟನೆ ನೆಪದಲ್ಲಿ ಟೈರ್ ಸುಡುವಾಗ ಗುಜರಿಯಲ್ಲಿದ್ದ ಬೈಕ್ ಅನ್ನು ಬೆಂಕಿಗೆ ಆಹುತಿ ಮಾಡಲಾಗಿದೆ. ಇದನ್ನು ಹೊರತು ಪಡಿಸಿದರೆ, ಯಾವುದೇ ಸಾರ್ವಜನಿಕರ ಆಸ್ತಿ-ಪಾಸ್ತಿ ನಷ್ಟಗೊಂಡಿಲ್ಲ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ಮತ್ತೆ ಬನ್ನಿ ಶಾಲೆಗೆ

2 ದಿನಗಳಿಂದ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಶುಕ್ರವಾರ ಎಂದಿನಂತೆ ಶಾಲಾ ಕಾಲೇಜುಗಳು ನಡೆಯಲಿದೆ. ಈ 2 ದಿನಗಳ ರಜೆ ಸರಿದೂಗಿಸಲು ಸೆ.7 ಹಾಗೂ ಸೆ.14ರ ಶನಿವಾರ ಇಡೀ ದಿನ ತರಗತಿಗಳನ್ನು ನಡೆಸಲಾಗುವುದು.

ಕಠಿಣ ಕ್ರಮ

ಬಂದ್ ಹಿನ್ನೆಲೆಯಲ್ಲಿ ಜಿಲ್ಲೆಗೆ ಆಗಮಿಸಿರುವ ಹೆಚ್ಚುವರಿ ಪೊಲೀಸ್ ಪಡೆ ಮುನ್ನೆಚರಿಕಾ ಕ್ರಮವಾಗಿ ಶುಕ್ರವಾರವು ಜಿಲ್ಲೆಯಲ್ಲಿರಲಿದೆ. ಅನುಮತಿ ಇಲ್ಲದೇ, ಪ್ರತಿಭಟನೆಗೆ ಮುಂದಾಗುವುದು, ರಸ್ತೆ ತಡೆ, ಸಾರ್ವಜನಿಕರ ಆಸ್ತಿ ನಷ್ಟವನ್ನುಂಟು ಮಾಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ