ಆ್ಯಪ್ನಗರ

ಶಿವಗಂಗೆ ಬೆಟ್ಟದ ಮೇಲಿಂದ ಬಿದ್ದು ಆತ್ಮಹತ್ಯೆ

ಬೆಟ್ಟದ ಮೇಲಿಂದ ವ್ಯಕ್ತಿಯೊಬ್ಬ ಬಿದ್ದುಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ದಕ್ಷಿಣಕಾಶಿ ಶಿವಗಂಗೆ ಬೆಟ್ಟದಲ್ಲಿ ನಡೆದಿದೆ...

Vijaya Karnataka 27 Mar 2019, 5:00 am
ಮಾಗಡಿ ಗ್ರಾಮಾಂತರ: ಬೆಟ್ಟದ ಮೇಲಿಂದ ವ್ಯಕ್ತಿಯೊಬ್ಬ ಬಿದ್ದುಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ದಕ್ಷಿಣಕಾಶಿ ಶಿವಗಂಗೆ ಬೆಟ್ಟದಲ್ಲಿ ನಡೆದಿದೆ.ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಬಿಜಾಪುರ ಮೂಲದ ಸುಪ್ರಿತ್‌ ಕುಮಾರ್‌ ಬಿರಾದಾರ್‌ (35) ಎಂದು ಗುರುತಿಸಲಾಗಿದೆ.
Vijaya Karnataka Web shivagange fell from the top of the hill and committed suicide
ಶಿವಗಂಗೆ ಬೆಟ್ಟದ ಮೇಲಿಂದ ಬಿದ್ದು ಆತ್ಮಹತ್ಯೆ


ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯು ಮೂಲತಃ ಬಿಜಾಪುರ ಜಿಲ್ಲೆಯವನಾಗಿದ್ದು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಇಂಜಿನಿಯರ್‌ ಆಗಿ ಕೆಲಸ ಮಾಡುತ್ತಿರು ಎನ್ನಲಾಗಿದೆ. ಮೃತನಿಗೆ ಮದುವೆಯಾಗಿದ್ದು ಬೆಂಗಳೂರಿನ ಜೆಪಿ ನಗರದಲ್ಲಿ ಪತ್ನಿ ಹಾಗೂ ಮಗುವಿನ ಜೊತೆ ವಾಸಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಘಟನಾ ವಿವರ : ಬೆಂಗಳೂರಿನಿಂದ ದ್ವಿಚಕ್ರ ವಾಹನದಲ್ಲಿ ಶಿವಗಂಗೆಯ ಬೆಟ್ಟಕ್ಕೆ ಬಂದು ಬೆಟ್ಟದ ಬುಡದಲ್ಲಿ ತನ್ನ ದ್ವಿಚಕ್ರ ವಾಹನವನ್ನು ನಿಲ್ಲಿಸಿ. ಮಾರ್ಚ್‌ 24 ರಾತ್ರಿ ಸುಮಾರು 12 ರಿಂದ 7 ಗಂಟೆಯ ಒಳಗೆ ಅಥವಾ ಮಾರ್ಚ್‌ 25ರ ಬೆಳಗಿನ ಜಾವ ಶಿವಗಂಗೆ ಬೆಟ್ಟಕ್ಕೆ ಹತ್ತಿರಬಹುದೆಂದು ಸ್ಥಳೀಯರು ಶಂಕಿಸಿದ್ದಾರೆ. ಸೋಮವಾರ ಬೆಳಿಗ್ಗೆ 7 ರಿಂದ 8 ಗಂಟೆಯ ವೇಳೆಗೆ ಬೆಟ್ಟದತುತ್ತ ತುದಿಯ ಕಂಬದ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸೋಮವಾರ 9 ಗಂಟೆಗೆ ಬೆಟ್ಟಕ್ಕೆ ಹೋದ ವ್ಯಾಪಾರಿಗಳು ಹಾಗೂ ಪ್ರವಾಸಿಗರು ಬೆಟ್ಟ¨ Üಕಂಬಿಯ ಪಕ್ಕ ಶವ ಬಿದ್ದಿರುವುದನ್ನು ನೋಡಿ ತಕ್ಷ ಣ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ದಾಬಸ್‌ ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಾಥಮಿಕ ಆರೋಗ್ಯಕೇಂದ್ರದಲ್ಲಿ ಶವದ ಮರಣೋತ್ತರ ಪರೀಕ್ಷೆ ನಡೆಸಿ ಘಟನೆಗೆ ಸಂಬಂದಿಸಿದಂತೆ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ