ಆ್ಯಪ್ನಗರ

ರೈಲು ನಿಲ್ದಾಣದಲ್ಲಿ ಶೋಲೆ, ಸ್ಥಳೀಯ ಇತಿಹಾಸ ಸಾರುವ ಬರಹ

ಪ್ರಯಾಣಿಕರು ರಾಮನಗರ ರೈಲು ನಿಲ್ದಾಣದ ಗೋಡೆ ಮೇಲೆ ಶೋಲೆ ಚಿತ್ರ ನಟರ ಬರಹ ನೋಡಬಹುದು. ಸ್ಥಳೀಯ ಇತಿಹಾಸ ಸಾರುವ ಪ್ರಸಿದ್ಧ ತಾಣಗಳ ಪರಿಚಯವನ್ನೂ ಮಾಡಿಕೊಳ್ಳಬಹುದು.

Vijaya Karnataka 5 Mar 2019, 5:00 am
ರಾಮನಗರ: ಪ್ರಯಾಣಿಕರು ರಾಮನಗರ ರೈಲು ನಿಲ್ದಾಣದ ಗೋಡೆ ಮೇಲೆ ಶೋಲೆ ಚಿತ್ರ ನಟರ ಬರಹ ನೋಡಬಹುದು. ಸ್ಥಳೀಯ ಇತಿಹಾಸ ಸಾರುವ ಪ್ರಸಿದ್ಧ ತಾಣಗಳ ಪರಿಚಯವನ್ನೂ ಮಾಡಿಕೊಳ್ಳಬಹುದು.
Vijaya Karnataka Web sholay at the train station local history preaching
ರೈಲು ನಿಲ್ದಾಣದಲ್ಲಿ ಶೋಲೆ, ಸ್ಥಳೀಯ ಇತಿಹಾಸ ಸಾರುವ ಬರಹ


ಗೋಡೆಗಳ ಮೇಲೆ ಚಲನಚಿತ್ರದ ಚಿತ್ರಣ: ಪ್ರವಾಸಿಗರಿಗೆ ರಾಮನಗರ ಎಂದ ಕೂಡಲೇ ಥಟ್ಟನೆ ನೆನಪಾಗುವುದು ಹಿಂದಿಯ ಶೋಲೆ ಚಲನಚಿತ್ರ. ಇಲ್ಲಿನ ರಾಮದೇವರ ಬೆಟ್ಟವು ಶೋಲೆ ಬೆಟ್ಟ ಎಂತಲೂ ಪ್ರಸಿದ್ಧಿ. ಇದನ್ನೇ ಆಧಾರವಾಗಿ ಇಟ್ಟುಕೊಂಡು ನಿಲ್ದಾಣದ ಮುಂಭಾಗದ ಗೋಡೆಗಳ ಮೇಲೆ ಆ ಚಲನಚಿತ್ರದ ಚಿತ್ರಣ ಕಟ್ಟಿಕೊಡಲಾಗಿದೆ. ಗೋಡೆಗಳ ಮೇಲೆ ಅಮಿತಾಬ್‌ ಬಚ್ಚನ್‌, ಧರ್ಮೇಂದ್ರ. ಅಮ್ಜದ್‌ ಖಾನ್‌ ಅವರ ಚಿತ್ರಗಳು ಮೂಡಿವೆ. ಚಿತ್ರವು ಚಿತ್ರೀಕರಣಗೊಂಡ ತಾಣಗಳನ್ನೂ ತಿಳಿಸುತ್ತದೆ.

ಪ್ರೇಕ್ಷ ಣೀಯ ತಾಣಗಳ ಚಿತ್ರ: ಇದರ ಜತೆಗೆ ರಾಮದೇವರ ಬೆಟ್ಟ, ಸಪ್ತರ್ಷಿಗಳ ಬೆಟ್ಟ, ಶಿಡ್ಕಕಲ್‌ ಬೆಟ್ಟ, ಕೂಟಗಲ್‌ ಬೆಟ್ಟ,ಹಂದಿಗುಂದಿ ಬೆಟ್ಟ, ರಾಮನಗರದ ರೇಷ್ಮೆಗೂಡು ಮಾರುಕಟ್ಟೆ, ರಂಗರಾಯದರೊಡ್ಡಿ ಕೆರೆ ಮೊದಲಾದ ಪ್ರಮುಖ ಪ್ರೇಕ್ಷ ಣೀಯ ತಾಣಗಳ ಚಿತ್ರಗಳೂ ನಿಲ್ದಾಣದ ಗೋಡೆಗಳ ಮೇಲೆ ಮೂಡಿ ಬಂದಿದೆ. ರಾಮದೇವರ ಬೆಟ್ಟದ ಪಾದದಲ್ಲಿನ ಅಭಯ ಆಂಜನೇಯನ ಬಹೃತ್‌ ಚಿತ್ರವೂ ಒಳಗೊಂಡಿದೆ.

ನಿಲ್ದಾಣದ ಸ್ವಚ್ಛತೆಯೇ ಮುಖ್ಯ ಉದ್ದೇಶ: ರೈಲ್ವೆ ನಿಲ್ದಾಣವನ್ನು ಸ್ವಚ್ಛವಾಗಿ, ಆಕರ್ಷಣೀಯವಾಗಿಟ್ಟುಕೊಳ್ಳುವುದು ಇದರ ಮುಖ್ಯ ಉದ್ದೇಶವಾಗಿದೆ. ಹೀಗೆ ಮಾಡುವುದರಿಂದ ಜನ ಇಲ್ಲಿ ಉಗುಳುವುದು, ಮೂತ್ರ ವಿಸರ್ಜನೆ ಮಾಡುವುದು ತಪ್ಪುತ್ತದೆ. ಜತೆಗೆ ಬೇರೆ ಬೇರೆ ಊರುಗಳಿಗೆ ಪ್ರಯಾಣಿಸುವವರಿಗೂ ಇಲ್ಲಿನ ಪರಿಚಯ ಆಗುತ್ತದೆ ಎಂಬುದು ರೈಲ್ವೆ ಅಧಿಕಾರಿಗಳ ಅಭಿಪ್ರಾಯ.


ರೈಲ್ವೇ ನಿಲ್ದಾಣದಲ್ಲೇ ರಾಮನಗರ ಸ್ಥಳೀಯ ಇತಿಹಾಸವನ್ನು ಕಾಣಬಹುದು. ಗೋಡೆಯ ಮೇಲಿನ ಬರಹ ಆಕರ್ಷಣಿಯಾಗಿದೆ. ಇಂತಹ ಬರಹಗಳನ್ನು ಕೇವಲ ಬೆಂಗಳೂರಿನಂತಹ ಮಹಾನಗರಿಯಲ್ಲಿ ಕಾಣಬಹುದಾಗಿತ್ತು. ರೈಲ್ವೆ ಇಲಾಖೆಯ ಕಾರ‍್ಯದಿಂದಾಗಿ ರಾಮನಗರದಲ್ಲೂ ಸಾಧ್ಯವಾಗಿದೆ.
-ವೆಂಕಟೇಶ್‌.ಎಂ. ನಿವಾಸಿ ರಾಮನಗರ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ