ಆ್ಯಪ್ನಗರ

ಕ್ಷೇತ್ರ ನಿರ್ಲಕ್ಷಿಸಿದ ಸಿಎಂ ವಿರುದ್ಧ ಮೌನ ಪ್ರತಿಭಟನೆ

ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ಅಧಿಕಾರಕ್ಕೆ ಬಂದು ವರ್ಷ ಕಳೆದರೂ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಗಮನ ಹರಿಸಿಲ್ಲ ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಕಾರ‍್ಯಕರ್ತರು ಶುಕ್ರವಾರ ಮೌನ ಪ್ರತಿಭಟನೆ ನಡೆಸಿದರು.

Vijaya Karnataka 18 May 2019, 5:00 am
ಚನ್ನಪಟ್ಟಣ: ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ಅಧಿಕಾರಕ್ಕೆ ಬಂದು ವರ್ಷ ಕಳೆದರೂ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಗಮನ ಹರಿಸಿಲ್ಲ ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಕಾರ‍್ಯಕರ್ತರು ಶುಕ್ರವಾರ ಮೌನ ಪ್ರತಿಭಟನೆ ನಡೆಸಿದರು.
Vijaya Karnataka Web silence protests against the party ignored
ಕ್ಷೇತ್ರ ನಿರ್ಲಕ್ಷಿಸಿದ ಸಿಎಂ ವಿರುದ್ಧ ಮೌನ ಪ್ರತಿಭಟನೆ


ಬಾಯಿಗೆ ಕಪ್ಪುಬಟ್ಟೆ ಕಟ್ಟಿಕೊಂಡಿದ್ದ ಪ್ರತಿಭಟನಾಕಾರರು, ಮುಖ್ಯಮಂತ್ರಿಗಳ ಚಿತ್ರ ಇನ್ನಾದರೂ ಕ್ಷೇತ್ರದತ್ತ ಹರಿಯಲಿ ಎಂಬ ಭಿತ್ತಿಪತ್ರಗಳನ್ನು ಹಿಡಿದು ಉರಿ ಬಿಸಿಲನ್ನು ಲೆಕ್ಕಿಸದೇ ಸುಮಾರು ಒಂದು ಗಂಟೆ ಕಾಲ ಮೌನವಾಗಿ ಪ್ರತಿಭಟನೆ ನಡೆಸಿದರು.

ಮತದಾತರ ಹಕ್ಕೊತ್ತಾಯ: ಹದಿನೈದು ವರ್ಷಗಳ ಹಿಂದೆ ಕಿತ್ತು ಹಾಕಿರುವ ಶ್ರೀ ಮಹದೇಶ್ವರ ದೇವಸ್ಥಾನವನ್ನು ಇನ್ನೂ ಮರು ನಿರ್ಮಾಣ ಮಾಡಿಲ್ಲ. ಇದರಿಂದ ಭಕ್ತರ ಮನಸ್ಸಿಗೆ ತೀವ್ರ ನೋವಾಗಿದೆ. ದೇಗುಲ ಈ ಹಿಂದೆ ಬಡವರ ಮದುವೆಗೆ ಅನುಕೂಲವಾಗಿತ್ತು. ಈಗ ಅದೂ ಇಲ್ಲದೇ, ಕಲ್ಯಾಣ ಮಂಟಪಗಳ ದುಬಾರಿ ಬಾಡಿಗೆ ತೆರಲಾಗದೇ, ಬಡವರು ಮರದ ಕೆಳಗೆ ಮದುವೆ ಮಾಡಿಕೊಳ್ಳುವ ದುಸ್ಥಿತಿ ಇದೆ. ಬಡವರನ್ನು ಗಮನದಲಿರಿಸಿಕೊಂಡು ಸಮುದಾಯ ಭವನ ನಿರ್ಮಿಸಬೇಕು ಎಂಬ ಬೇಡಿಕೆ ಈಡೇರಿಲ್ಲ. ಪಟ್ಟಣದ ಹೃದಯ ಭಾಗದಲ್ಲಿ ಸುಸಜ್ಜಿತ ಬಸ್‌ ನಿಲ್ದಾಣ ಮತ್ತು ವಾಣಿಜ್ಯ ಸಂಕೀರ್ಣ ನಿರ್ಮಿಸಬೇಕು. ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಬಂದು ಹೋದ ಸ್ಥಳ ಶಿಥಿಲಗೊಂಡಿದ್ದು, ಅದನ್ನು ಅ.2ರ ಒಳಗೆ ದುರಸ್ತಿ ಮಾಡಬೇಕು, ಡಾ. ರಾಜ್‌ ಬಯಲು ರಂಗಮಂದಿರ ನಿರ್ಮಿಸಬೇಕು, ಶೆಟ್ಟಿಹಳ್ಳಿ ಕೆರೆಯ ಸುತ್ತಲಿನ ಒತ್ತುವರಿ ತೆರವುಗೊಳಿಸಿ, ಶುದ್ದ ನೀರು ನಿಲ್ಲುವ ಹಾಗೆ ಮಾಡಿ, ದೋಣಿ ವಿಹಾರ ಮತ್ತು ವಾಯು ವಿಹಾರಿಗಳಿಗೆ ಪಾರ್ಕ್‌ ನಿರ್ಮಾಣ ಮಾಡಬೇಕು ಮುಂತಾದ ಹಕ್ಕೊತ್ತಾಯಗಳನ್ನು ಸಲ್ಲಿಸಲಾಯಿತು.

ಕೆರೆ ನಾಶ ತಪ್ಪಿಸಿ: ರಾಮಮ್ಮನ ಕೆರೆಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ತ್ಯಾಜ್ಯ ಸೇರಿ ನಾಶಗೊಳ್ಳುತ್ತಿದೆ. ಇದನ್ನು ತಪ್ಪಿಸಿ ಕೆರೆಯನ್ನು ಶುದ್ದೀಕರಿಸಿ, ಪ್ರವಾಸಿತಾಣವಾಗಿ ಅಭಿವೃದ್ದಿಪಡಿಸಬೇಕು. ಕೆರೆಯಲ್ಲಿ ದೋಣಿ ವಿಹಾರ, ವಾಯು ವಿಹಾರಿಗಳಿಗೆ ಅನುಕೂಲ ಮಾಡಿಕೊಡಬೇಕು. ತಾಲೂಕಿನ ಅರಣ್ಯ ದಂಚಿನ ಗ್ರಾಮ ಬಿ.ವಿ.ಹಳ್ಳಿ, ಅರಳಾಳುಸಂದ್ರ, ಕೋಡಂಬಳ್ಳಿ, ಶ್ಯಾನಭೋಗನಹಳ್ಳಿ ಮೋಳೆದೊಡ್ಡಿ, ಸೇರಿದಂತೆ 30ಕ್ಕೂ ಹೆಚ್ಚು ಹಳ್ಳಿಗಳು ಕಾಡಾನೆಗಳ ದಾಳಿಗೆ, ಕೋಟ್ಯಾಂತರ ಮೌಲ್ಯದ ಕೃಷಿ ಬೆಳೆ ನಷ್ಟವಾಗಿದ್ದು, ಕೂಡಲೇ ಪರಿಹಾರ ಮತ್ತು ಆನೆಗಳ ದಾಳಿ ಮತ್ತೆ ಆಗದಂತೆ ಮುಂಜಾಗ್ರತೆ ವಹಿಸಬೇಕು ಎಂದು ಒತ್ತಾಯಿಸಲಾಯಿತು.

ಜನತಾ ದರ್ಶಕ್ಕೆ ಆಗ್ರಹ:
ಮುಖ್ಯಮಂತ್ರಿಗಳ ತಕ್ಷಣವೇ ಕ್ಷೇತ್ರಕ್ಕೆ ಬಂದು ಜನತಾದರ್ಶನ ನೀಡಬೇಕು. ಗ್ರಾಮ ವಾಸ್ತವ್ಯ ಮಾಡಬೇಕು. ತಿಂಗಳಿಗೊಮ್ಮೆ ಜಿಪಂ ವ್ಯಾಪ್ತಿ ಮತ್ತು ನಗರ ಸಂಚಾರಕ್ಕೂ ಮುಂದಾಗಬೇಕು. ಈ ಬೇಡಿಕೆ ಈಡೇರಿಸದಿದ್ದರೆ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.

ಮೌನ ಪ್ರತಿಭಟನೆಯಲ್ಲಿ ವೇದಿಕೆಯ ಜಿಲ್ಲಾಧ್ಯಕ್ಷ ಬೇವೂರು ಯೋಗೀಶ್‌ಗೌಡ, ಮಂಡ್ಯ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ್‌, ಯುವ ಘಟಕದ ಉಪಾಧ್ಯಕ್ಷ ರಂಜಿತ್‌ಗೌಡ, ಐಟಿ-ಬಿಟಿ ಘಟಕದ ಅಧ್ಯಕ್ಷ ಚೇತನ್‌ಕೀಕರ್‌, ವೇದಿಕೆಯ ಪದಾಧಿಕಾರಿ ಮರಿಅಂಕೇಗೌಡ, ಮಹಿಳಾ ಘಟಕದ ರಾಜಮ್ಮ, ಮಂಗಳಮ್ಮ, ಕೃಷ್ಣಪ್ರಸಾದ್‌, ಕೋಡಂಬಳ್ಳಿ ನಾಗರಾಜು, ಮದ್ದೂರು ತಾಲೂಕು ಅಧ್ಯಕ್ಷ ತಿಪ್ಪೂರು ರಾಜೇಶ್‌, ಯೇಸು, ಸವಿತಾ ಸಮಾಜದ ಕುಮಾರ್‌, ಶ್ಯಾಮ್‌, ಕೃಷ್ಣಪ್ಪ, ಅರಳಾಪುರ ಚೇತನ್‌, ರೋಸಿ, ನಿರ್ಮಲ, ಮಹೇಶ್‌ ಸೇರಿದಂತೆ ಅನೇಕರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ