ಆ್ಯಪ್ನಗರ

ಸಿರಿಧಾನ್ಯಗಳ ಪ್ರದರ್ಶನ, ಆಹಾರ ಮೇಳ

ಆರ್ಥಿಕ ಲಾಭಕ್ಕಾಗಿ ರೈತರು ವಾಣಿಜ್ಯೋತ್ಪನ್ನಗಳತ್ತ ಮುಖ ಮಾಡಿದ್ದರಿಂದ ಸಿರಿಧಾನ್ಯಗಳು ಅಪರೂಪವಾಗುತ್ತಿವೆ. ಇದು ಆತಂಕದ ವಿಷಯ ಎಂದು ಯೋಜನಾಧಿಕಾರಿ ಶಶಿಕಲಾ ಸುವರ್ಣ ಅಭಿಪ್ರಾಯಪಟ್ಟರು.

Vijaya Karnataka Web 26 May 2019, 6:26 pm
ಮಾಗಡಿ ಗ್ರಾಮಂತರ: ಆರ್ಥಿಕ ಲಾಭಕ್ಕಾಗಿ ರೈತರು ವಾಣಿಜ್ಯೋತ್ಪನ್ನಗಳತ್ತ ಮುಖ ಮಾಡಿದ್ದರಿಂದ ಸಿರಿಧಾನ್ಯಗಳು ಅಪರೂಪವಾಗುತ್ತಿವೆ. ಇದು ಆತಂಕದ ವಿಷಯ ಎಂದು ಯೋಜನಾಧಿಕಾರಿ ಶಶಿಕಲಾ ಸುವರ್ಣ ಅಭಿಪ್ರಾಯಪಟ್ಟರು.
Vijaya Karnataka Web siridhanya exhibition food festival
ಸಿರಿಧಾನ್ಯಗಳ ಪ್ರದರ್ಶನ, ಆಹಾರ ಮೇಳ


ಶನಿವಾರ ತಿಪ್ಪಸಂದ್ರದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆ ವತಿಯಿಂದ ಆಯೋಜನೆಯಾಗಿದ್ದ 'ಸಿರಿಧಾನ್ಯಗಳ ಆಹಾರ ಮೇಳ ಪ್ರದರ್ಶನ, ಮಾರಾಟ ಮತ್ತು ಅಡುಗೆ ಪ್ರಾತ್ಯಕ್ಷಿಕೆ' ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಆರೋಗ್ಯಕ್ಕೆ ಸಹಕಾರಿ:

ಇಂದಿನ ಆಧುನಿಕತೆಯ ಜಂಜಾಟದಲ್ಲಿ ಜಂಕ್‌ ಫುಡ್‌, ಪಾಸ್ಟ್‌ ಫುಡ್‌ ಮತ್ತು ಕರಿದ ಜಿಡ್ಡು ಪದಾರ್ಥಗಳನ್ನು ಸೇವಿಸುವ ಮೂಲಕ ಜನರು ವಿವಿಧ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಆಯೋಜಿಸಿರುವ ಸಿರಿಧಾನ್ಯ ಮೇಳೆ ಜಿಲ್ಲೆ ಜನರಿಗೆ ಅತ್ಯುಪಯುಕ್ತ ಎಂದರು.

ಸ್ವಯಂ ಉದ್ಯೋಗಕ್ಕೆ ನೆರವು:

ಜಿಲ್ಲೆಯಲ್ಲಿ ಸಾವಿರಾರು ಸ್ವಸಹಾಯ ಸಂಘವಿದ್ದು, ಇವರಿಗೆ ಸ್ವಯಂ ಉದ್ಯೋಗ ಕಲ್ಪಿಸಲು ಬ್ಯಾಂಕ್‌ನಿಂದ ಆರ್ಥಿಕ ನೆರವು ಸಂಸ್ಥೆ ಕೊಡಿಸಿದೆ. ಧರ್ಮಸ್ಥಳದ ಈ ಸಂಸ್ಥೆಯ ಗ್ರಾಮೀಣ ಮಹಿಳೆಯರಿಗೆ ವರದಾನವಾಗಿದ್ದು, ಈ ಎಲ್ಲ ಯೋಜನೆಗಳ ಸಫಲತೆಯನ್ನು ಪಡೆಯಬೇಕೆಂದರು.

ರುಚಿಕರ ಅಡುಗೆ ತಯಾರಿ:

ಸಿರಿಧಾನ್ಯಗಳ ಸಂಪನ್ಮೂಲ ವ್ಯಕ್ತಿ ವೇಮೂರ್ತಿ ಬೆಳ್ಳಿ ಮಾತನಾಡಿ, ಕಡಿಮೆ ನೀರಿನಲ್ಲಿ ಯಾವ ರಾಸಾಯನಿಕ ಬಳಸದೆ ಸುಲಭವಾಗಿ ಬೆಳೆಯುವ ನವಣೆ, ಉದಲು, ಹಾರಕ, ರಾಗಿ ಇನ್ನಿತರ ಸಿರಿಧಾನ್ಯಗಳಿಂದ ರುಚಿಕರವಾದ ಅಡುಗೆಗಳನ್ನು ತಯಾರಿಸಬಹುದು. ದಿನ ನಿತ್ಯ ಇವುಗಳನ್ನು ಬಳಸುವುದರಿಂದ ದೇಹವನ್ನು ಸಮತೋಲನದಲ್ಲಿಟ್ಟುಕೊಳ್ಳಬಹುದು. ಕಾರಣ ರೈತರು ಆರ್ಥಿಕ ಲಾಭವನ್ನು ನೆಚ್ಚಿಕೊಳ್ಳದೆ ತಮಗಿರುವ ಜಮೀನಿನಲ್ಲಿ ಸ್ವಲ್ಪ ಭಾಗವಾದರೂ ಸಿರಿ ಧಾನ್ಯಗಳನ್ನು ಬೆಳೆದು, ಜನಪರ ಯೋಗಿ ಆಗಬೇಕು ಎಂದರು.

ಮಳಿಗೆ ವಿಶೇಷತೆ :

ಸಿರಿಧಾನ್ಯ ಸಿರಿ ಮಳಿಗೆಯಲ್ಲಿ ಸಿರಿಧಾನ್ಯಗಳು, ಹತ್ತಿ, ಖಾದಿ ಬಟ್ಟೆಗಳು, ಸಾವಯವ ಕೃಷಿಯಿಂದ ತಯಾರಿಸಿದ್ದ ಆಹಾರ ಉತ್ಪನ್ನಗಳು ಮತ್ತು ರೈತರಿಗೆ ಮತ್ತು ಗೃಹಬಳಕೆಗೆ ಬೇಕಿದ್ದ ಅಗತ್ಯ ವಸ್ತುಗಳ ಪ್ರದರ್ಶನ ಮತ್ತು ಮಾರಟದ ವ್ಯವಸ್ಥೆ ಇತ್ತು.ಮೇಲ್ವಿಚರಕ ಜಯ್ಯಣ್ಣ, ಮಾರಾಟ ಮಳಿಗೆ ವ್ಯವಸ್ಥಾಪಕ ಚಂದ್ರಶೇಖರ್‌, ವೇದಮೂರ್ತಿ, ಗ್ರಾಪಂ ಸದಸ್ಯ ರಘು, ಗಾಯಿತ್ರಿ, ಲತಾ, ಲಕ್ಷ್ಮಿ, ಸುನಂದ, ಸುರೇಶ್‌, ಮೀನಾಕ್ಷಿ, ಮಮತ ಹಾಗೂ ಸಾರ್ವಜನಿಕರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ