ಆ್ಯಪ್ನಗರ

ಶ್ರೀಗಳ ನಿಧನ: ಹುಟ್ಟೂರಿನಲ್ಲಿ ಮಡುಗಟ್ಟಿ ದ ಶೋಕ

ಕುದೂರು ಹೋಬಳಿಗೂ ಶ್ರೀ ಶಿವಕುಮಾರ ಮಹಾಸ್ವಾಮಿಗಳಿಗೂ ಎಲ್ಲಿಲ್ಲದ ನಂಟು. ಹುಟ್ಟೂರು ವೀರಾಪುರ ಗ್ರಾಮ ಈ ಹೋಬಳಿಗೇ ಸೇರಿದೆ. ಶ್ರೀಗಳ ನಿಧನದಿಂದ ಹೋಬಳಿಯ ಜನತೆ ಶೋಕ ಸಾಗರದಲ್ಲಿ ಮುಳುಗಿದ್ದಾರೆ.

Vijaya Karnataka 22 Jan 2019, 5:00 am
ಕುದೂರು: ಕುದೂರು ಹೋಬಳಿಗೂ ಶ್ರೀ ಶಿವಕುಮಾರ ಮಹಾಸ್ವಾಮಿಗಳಿಗೂ ಎಲ್ಲಿಲ್ಲದ ನಂಟು. ಹುಟ್ಟೂರು ವೀರಾಪುರ ಗ್ರಾಮ ಈ ಹೋಬಳಿಗೇ ಸೇರಿದೆ. ಶ್ರೀಗಳ ನಿಧನದಿಂದ ಹೋಬಳಿಯ ಜನತೆ ಶೋಕ ಸಾಗರದಲ್ಲಿ ಮುಳುಗಿದ್ದಾರೆ.
Vijaya Karnataka Web sr s death the sadness of madugatti in hattur
ಶ್ರೀಗಳ ನಿಧನ: ಹುಟ್ಟೂರಿನಲ್ಲಿ ಮಡುಗಟ್ಟಿ ದ ಶೋಕ


ಇಲ್ಲಿನ ಜನರು ಶ್ರೀ ಶಿವಕುಮಾರ ಮಹಾಸ್ವಾಮಿಗಳನ್ನು ನಡೆದಾಡುವ ದೇವರು ಎಂದು ಆರಾಧಿಸುತ್ತಾರೆ. ಅವರ ಹುಟ್ಟುಹಬ್ಬ ಬಂತೆಂದರೆ ಎಲ್ಲೆಡೆ ಸಾರ್ವಜನಿಕವಾಗಿ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಿ ಅನ್ನಸಂತರ್ಪಣೆ ಮಾಡುತ್ತಿದ್ದರು. ಶ್ರೀ ಗಳು ಸಹಾ ಕಾಗಿಮಡು ಹಾಗೂ ಕುದೂರಿನಲ್ಲಿ ನಾನಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಇಲ್ಲಿನ ಜನತೆಯನ್ನು ಆಶೀರ್ವದಿಸುತ್ತಿದ್ದರು. ಆದರೆ ಶ್ರೀಗಳ ನಿಧನದಿಂದ ಹೋಬಳಿಗೇ ಬರಸಿಡಿಲು ಬಡಿದಂತಾಗಿದ್ದು ಎಲ್ಲೆಡೆ ಶೋಕ ಮಡುಗಟ್ಟಿದೆ.

ಕಾಗಿಮಡು ಕಾರ್ಯಕ್ರಮ: ವರ್ಷ ವರ್ಷವೂ ಶ್ರೀಗಳ ಜನ್ಮದಿನವನ್ನು ಗುರುವಂದನಾ ಕಾರ್ಯಕ್ರಮದ ಮೂಲಕ ಮಹಾಸ್ವಾಮಿಗಳನ್ನು ಕರೆಸಿ ಅರ್ಥಪೂರ್ಣವಾಗಿ ನೆರವೇರಿಸುತ್ತಿದ್ದರು. ಶ್ರೀಗಳ 110 ನೇ ವರ್ಷದ ಗುರುವಂದನಾ ಕಾರ್ಯಕ್ರಮವನ್ನು ಶ್ರೀಗಳ ಸಮ್ಮುಖದಲ್ಲಿ ಗ್ರಾಮಸ್ಥರೆಲ್ಲರೂ ನೆರವೇರಿಸಿ ಅಭಿಮಾನ ಮೆರೆದಿದ್ದರು. ಜಿಲ್ಲೆಯ ಪ್ರಮುಖ ರಾಜಕಾರಣಿಗಳು ಹಾಗೂ ಸರಕಾರದ ಮಂತ್ರಿಗಳೂ ಸಹಾ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಇದು ಮಾಸುವ ಮುನ್ನವೇ ಸ್ವಾಮೀಜಿ ಇಹ ಲೋಕ ತ್ಯಜಿಸಿದ್ದು ಭಕ್ತರಿಗೆ ಆಘಾತವಾಗಿದೆ.

ಹುಟ್ಟೂರು ವೀರಾಪುರ: ಜಗತ್ತಿನಾದ್ಯಂತ ಭಕ್ತಕೋಟಿಯನ್ನೇ ಹೊಂದಿರುವ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಜನಿಸಿದ್ದು ಕುದೂರು ಹೋಬಳಿಗೆ ಸೇರಿದ ವೀರಾಪುರ ಗ್ರಾಮದಲ್ಲಿ. ಪ್ರಾಥಮಿಕ ಶಿಕ್ಷ ಣವನ್ನೂ ಇಲ್ಲಿಯೇ ಮುಗಿಸಿರುವ ಬಗ್ಗೆ ಹಿರಿಯರು ಹೇಳುತ್ತಾರೆ. ಇವರ ತಂದೆ ತಾಯಿ ವಾಸಿಸಿದ ಮನೆ ಹಾಗೂ ಶ್ರೀಗಳ ಸಂಬಂಧಿಕರು ವೀರಾಪುರದಲ್ಲಿ ಇದ್ದಾರೆ. ತಮ್ಮ ತ್ರಿವಿಧ ದಾಸೋಹದ ಮೂಲಕ ದೇಶದ ಮೂಲೆ ಮೂಲೆಯಲ್ಲಿ ಭಕ್ತ ಕೋಟಿ ಹೊಂದಿರುವ ಶ್ರೀಗಳು ಅಗಲಿದ್ದು ಹುಟ್ಟೂರಿನಲ್ಲಿ ಶೋಕ ಮಡುಗಟ್ಟಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ