ಎಸ್. ಶ್ರೀಧರ್
ರಾಮನಗರ: ಮಾಗಡಿ ತಾಲೂಕಿನಲ್ಲಿ ಬೆಳಕಿಗೆ ಬಂದಿರುವ ಎಸ್ಸೆಸ್ಸೆಲ್ಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣವು ಇಡೀ ರಾಜ್ಯದಲ್ಲಿ ವ್ಯಾಪಿಸಿರುವ ಶಂಕೆ ಇದ್ದು, ಇದನ್ನು ಸಿಐಡಿ ತನಿಖೆಗೆ ಒಪ್ಪಿಸಬೇಕು ಎಂಬ ಆಗ್ರಹ ಸಾರ್ವತ್ರಿಕವಾಗಿದೆ. ಮಾಗಡಿಯಲ್ಲಿ ಪರೀಕ್ಷೆಗೆ 15 ನಿಮಿಷ ಮೊದಲು ವಾಟ್ಸ್ ಆ್ಯಪ್ನಲ್ಲಿ ಪ್ರಶ್ನೆ ಪತ್ರಿಕೆ ಕಳಿಸಿ ತಜ್ಞರಿಂದ ಉತ್ತರ ಬರೆಸಿ ನಕಲಿಗೆ ಅವಕಾಶ ನೀಡಲಾಗಿದೆ. ಚಿಕ್ಕೋಡಿ, ಬೆಳಗಾವಿ ಪರೀಕ್ಷಾ ಕೇಂದ್ರಗಳಲ್ಲಿ ಸಾಮೂಹಿಕ ನಕಲು ನಡೆದಿರುವುದು ಮಂಗಳೂರಿನ ಮೌಲ್ಯ ಮಾಪನ ಕೇಂದ್ರದ ಮೂಲಕ ಬೆಳಕಿಗೆ ಬಂದಿದೆ. ಹೀಗೆ, ರಾಜ್ಯದ ವಿವಿಧೆಡೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಸಂದೇಹ ಶುರುವಾಗಿದೆ. ಈ ಹಿಂದೆ ಪಿಯುಸಿ ಪರೀಕ್ಷೆಯಲ್ಲಿಯೂ ಅಕ್ರಮ ನಡೆದಿದ್ದು, ಮರು ಪರೀಕ್ಷೆಯನ್ನು ಸಹ ನಡೆಸಲಾಗಿತ್ತು.
ಪಿಎಸ್ಐ ಪರೀಕ್ಷೆ, ಕೆಎಎಸ್ ಪರೀಕ್ಷೆಯಲ್ಲಿಯೂ ಅಕ್ರಮ ನಡೆದಿತ್ತು. ಈಗ ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸುವ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲೂ ಅಕ್ರಮ ನುಸುಳಿದೆ. ಇದೆಲ್ಲದಕ್ಕಿಂತ ಹೆಚ್ಚಾಗಿ ಅಕ್ರಮದಲ್ಲಿ ಶಿಕ್ಷಕರು, ಸಿಬ್ಬಂದಿಗಳು ಸಹ ಭಾಗವಹಿಸಿರುವುದು ಮಾಗಡಿ ಪ್ರಕರಣದಿಂದ ಧೃಡಪಟ್ಟಿದೆ.
ಮಕ್ಕಳ ವಿಶ್ವಾಸಕ್ಕೆ ಪೆಟ್ಟು: ಹತ್ತನೇ ತರಗತಿ ಪರೀಕ್ಷೆ ಮತ್ತು ಫಲಿತಾಂಶ ವಿದ್ಯಾರ್ಥಿಗಳ ಭವಿಷ್ಯದ ದಿಕ್ಕನ್ನೇ ಬದಲಿಸುತ್ತದೆ. ಈಗ ಇಲ್ಲೂ ಅಕ್ರಮ ನಡೆಯುತ್ತಿರುವುದು ಮಕ್ಕಳು ಹಾಗೂ ಪೋಷಕರ ವಿಶ್ವಾಸಕ್ಕೆ ಧಕ್ಕೆ ತಂದಿದೆ. ಪ್ರಾಮಾಣಿಕ ಮಕ್ಕಳು ಕಷ್ಟ ಪಟ್ಟು ಓದಿ ಪರೀಕ್ಷೆ ಬರೆದರೆ, ಕೆಲವರು ಸ್ವಾರ್ಥಕ್ಕಾಗಿ ಅಕ್ರಮ ನಡೆಸುತ್ತಿರುವುದು ಇಡೀ ವ್ಯವಸ್ಥೆ ಕುಸಿದು ಬೀಳುವ ಅಪಾಯ ತಂದೊಡ್ಡಿದೆ. ಆದ್ದರಿಂದ, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಅಕ್ರಮದ ತಳ ಶೋಧಿಸಿ, ತಪ್ಪಿತಸ್ಥರನ್ನು ಕಠಿಣವಾಗಿ ಶಿಕ್ಷಿಸುವ ಮೂಲಕ ಮುಂದೆ ಹೀಗಾಗದಂತೆ ಎಚ್ಚರಿಕೆ ವಹಿಸಬೇಕು ಎಂಬುದು ಸಾರ್ವಜನಿಕ ವಲಯದ ಆಗ್ರಹ.
ಸಿಐಡಿ ತನಿಖೆಯೇ ಏಕೆ ಬೇಕು?: ಸಿಐಡಿಗೆ ಯಾವುದೇ ಜಿಲ್ಲೆಯ ಗಡಿ ರೇಖೆ ಇರುವುದಿಲ್ಲ. ಮುಕ್ತವಾಗಿ ತನಿಖೆ ನಡೆಸಬಹುದು. ಆದರೆ, ಪೊಲೀಸರ ಮೇಲೆ ಸಾಕಷ್ಟು ಒತ್ತಡಗಳು ಬರಬಹುದು. ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆಯಷ್ಟೇ ಗಂಭೀರವಾಗಿ ಎಸ್ಸೆಸ್ಸೆಲ್ಸಿ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ಪರಿಗಣಿಸಬೇಕು ಎಂಬುದು ಜನರ ಆಗ್ರಹ.
ರಾಮನಗರ: ಮಾಗಡಿ ತಾಲೂಕಿನಲ್ಲಿ ಬೆಳಕಿಗೆ ಬಂದಿರುವ ಎಸ್ಸೆಸ್ಸೆಲ್ಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣವು ಇಡೀ ರಾಜ್ಯದಲ್ಲಿ ವ್ಯಾಪಿಸಿರುವ ಶಂಕೆ ಇದ್ದು, ಇದನ್ನು ಸಿಐಡಿ ತನಿಖೆಗೆ ಒಪ್ಪಿಸಬೇಕು ಎಂಬ ಆಗ್ರಹ ಸಾರ್ವತ್ರಿಕವಾಗಿದೆ. ಮಾಗಡಿಯಲ್ಲಿ ಪರೀಕ್ಷೆಗೆ 15 ನಿಮಿಷ ಮೊದಲು ವಾಟ್ಸ್ ಆ್ಯಪ್ನಲ್ಲಿ ಪ್ರಶ್ನೆ ಪತ್ರಿಕೆ ಕಳಿಸಿ ತಜ್ಞರಿಂದ ಉತ್ತರ ಬರೆಸಿ ನಕಲಿಗೆ ಅವಕಾಶ ನೀಡಲಾಗಿದೆ.
ಪಿಎಸ್ಐ ಪರೀಕ್ಷೆ, ಕೆಎಎಸ್ ಪರೀಕ್ಷೆಯಲ್ಲಿಯೂ ಅಕ್ರಮ ನಡೆದಿತ್ತು. ಈಗ ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸುವ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲೂ ಅಕ್ರಮ ನುಸುಳಿದೆ. ಇದೆಲ್ಲದಕ್ಕಿಂತ ಹೆಚ್ಚಾಗಿ ಅಕ್ರಮದಲ್ಲಿ ಶಿಕ್ಷಕರು, ಸಿಬ್ಬಂದಿಗಳು ಸಹ ಭಾಗವಹಿಸಿರುವುದು ಮಾಗಡಿ ಪ್ರಕರಣದಿಂದ ಧೃಡಪಟ್ಟಿದೆ.
ಮಕ್ಕಳ ವಿಶ್ವಾಸಕ್ಕೆ ಪೆಟ್ಟು: ಹತ್ತನೇ ತರಗತಿ ಪರೀಕ್ಷೆ ಮತ್ತು ಫಲಿತಾಂಶ ವಿದ್ಯಾರ್ಥಿಗಳ ಭವಿಷ್ಯದ ದಿಕ್ಕನ್ನೇ ಬದಲಿಸುತ್ತದೆ. ಈಗ ಇಲ್ಲೂ ಅಕ್ರಮ ನಡೆಯುತ್ತಿರುವುದು ಮಕ್ಕಳು ಹಾಗೂ ಪೋಷಕರ ವಿಶ್ವಾಸಕ್ಕೆ ಧಕ್ಕೆ ತಂದಿದೆ. ಪ್ರಾಮಾಣಿಕ ಮಕ್ಕಳು ಕಷ್ಟ ಪಟ್ಟು ಓದಿ ಪರೀಕ್ಷೆ ಬರೆದರೆ, ಕೆಲವರು ಸ್ವಾರ್ಥಕ್ಕಾಗಿ ಅಕ್ರಮ ನಡೆಸುತ್ತಿರುವುದು ಇಡೀ ವ್ಯವಸ್ಥೆ ಕುಸಿದು ಬೀಳುವ ಅಪಾಯ ತಂದೊಡ್ಡಿದೆ. ಆದ್ದರಿಂದ, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಅಕ್ರಮದ ತಳ ಶೋಧಿಸಿ, ತಪ್ಪಿತಸ್ಥರನ್ನು ಕಠಿಣವಾಗಿ ಶಿಕ್ಷಿಸುವ ಮೂಲಕ ಮುಂದೆ ಹೀಗಾಗದಂತೆ ಎಚ್ಚರಿಕೆ ವಹಿಸಬೇಕು ಎಂಬುದು ಸಾರ್ವಜನಿಕ ವಲಯದ ಆಗ್ರಹ.
ಸಿಐಡಿ ತನಿಖೆಯೇ ಏಕೆ ಬೇಕು?: ಸಿಐಡಿಗೆ ಯಾವುದೇ ಜಿಲ್ಲೆಯ ಗಡಿ ರೇಖೆ ಇರುವುದಿಲ್ಲ. ಮುಕ್ತವಾಗಿ ತನಿಖೆ ನಡೆಸಬಹುದು. ಆದರೆ, ಪೊಲೀಸರ ಮೇಲೆ ಸಾಕಷ್ಟು ಒತ್ತಡಗಳು ಬರಬಹುದು. ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆಯಷ್ಟೇ ಗಂಭೀರವಾಗಿ ಎಸ್ಸೆಸ್ಸೆಲ್ಸಿ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ಪರಿಗಣಿಸಬೇಕು ಎಂಬುದು ಜನರ ಆಗ್ರಹ.