ಆ್ಯಪ್ನಗರ

ಮೊಬೈಲ್‌ ಕಸಿದು ಪರಾರಿ

ಪಟ್ಟಣದ ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿ ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬರುವಾಗ ಕೈಯಿಂದ ಮೊಬೈಲ್‌ ಕಸಿದು ಪರಾರಿಯಾಗಿರುವ ಘಟನೆ ಶನಿವಾರ ನಡೆದಿದೆ...

Vijaya Karnataka 31 Mar 2019, 5:00 am
ಚನ್ನಪಟ್ಟಣ: ಪಟ್ಟಣದ ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿ ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬರುವಾಗ ಕೈಯಿಂದ ಮೊಬೈಲ್‌ ಕಸಿದು ಪರಾರಿಯಾಗಿರುವ ಘಟನೆ ಶನಿವಾರ ನಡೆದಿದೆ.
Vijaya Karnataka Web steal mobile and escape
ಮೊಬೈಲ್‌ ಕಸಿದು ಪರಾರಿ


ಮೊಬೈಲ್‌ ಕಳೆದುಕೊಂಡ ವ್ಯಕ್ತಿ ರಾಜೀವ್‌ನಾಥ್‌ ಎಂದು ಹೇಳಲಾಗಿದ್ದು, ಮಂಗಳೂರು ಮೂಲದ ಇವರು ಬೆಂಗಳೂರಿನಲ್ಲಿ ಉಡುಪಿ ಹೋಟೆಲ್‌ ನಡೆಸುತ್ತಿದ್ದಾರೆ. ಪಟ್ಟಣದ ಕುವೆಂಪು ನಗರದಲ್ಲಿ ಸ್ನೇಹಿತರನ್ನು ಭೇಟಿ ಮಾಡಲು ಬಂದು ಮರಳಿ ಬೆಂಗಳೂರಿಗೆ ಹೋಗಲು ನಿಲ್ದಾಣಕ್ಕೆ ಬಂದಿದ್ದಾಗ ಈ ಘಟನೆ ಸಂಭವಿಸಿದೆ.

ಸ್ನೇಹಿತರ ಜತೆ ಮೊಬೈಲ್‌ನಲ್ಲಿ ಸಂಭಾಷಣೆ ಮಾಡಿಕೊಂಡು ಬರುತ್ತಿದ್ದ ಇವರನ್ನು ಹಿಂಬಾಲಿಸಿದ ಕಾಲೇಜು ಯುವಕನಂತೆ ಬ್ಯಾಗ್‌ ಹೆಗಲಿಗೆರಿಸಿಕೊಂಡಿದ್ದ ಆತ ಏಕಾಎಕಿ ಕೈಯಿಂದಲೇ ಮೊಬೈಲ್‌ ಕಸಿದು ಕ್ಷ ಣಾರ್ಧದಲ್ಲಿ ಪರಾರಿಯಾಗಿದ್ದಾನೆ.

ಸ್ಯಾಮ್‌ಸ್ಯಾಂಗ್‌ ಕಂಪನಿಯ 49 ಸಾವಿರ ರೂ. ಮೌಲ್ಯದ ಮೊಬೈಲ್‌ನ್ನು ಹಾಡುಹಗಲೇ ನೂರಾರು ಪ್ರಯಾಣಿಕರ ಜನಜಂಗುಳಿಯಲ್ಲಿ ಈ ರೀತಿಯಾಗಿ ಕೈಯಿಂದಲೇ ಕಿತ್ತು ಪರಾರಿಯಾಗಿರುವುದರಿಂದ ಚನ್ನಪಟ್ಟಣ ಪೊಲೀಸ್‌ ವ್ಯವಸ್ಥೆಯ ಬಗ್ಗೆ ಬಸ್‌ ನಿಲ್ದಾಣದಲ್ಲಿನ ಸಾರ್ವಜನಿಕರು ಮತ್ತು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣದ ಬಗ್ಗೆ ನಗರ ಪೊಲೀಸ್‌ ಠಾಣೆಗೆ ದೂರು ನೀಡುವಂತೆ ತಿಳಿಸಿದರೂ, ದೂರು ಕೊಡಲು ನಿರಾಕರಿಸಿದ ಅವರು ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ