ಆ್ಯಪ್ನಗರ

ಸರಕಾರದ ಯೋಜನೆಗಳು ವಿದ್ಯಾರ್ಥಿಗಳಿಗೆ ಸಿಗಲಿ

ಸರಕಾರ ಶಾಲೆಗಳಿಗೆ ರೂಪಿಸುವ ಯೋಜನೆಗಳು ಜಾತಿ, ಮತದ ತಾರತಮ್ಯದಿಂದ ಕೂಡಿರಬೇಕು ಎಂದು ಬಿಬಿಎಂಪಿ ಮಾಜಿ ಪ್ರತಿಪಕ್ಷ ನಾಯಕ ಬಸವರಾಜು ತಿಳಿಸಿದರು.

Vijaya Karnataka 4 Aug 2018, 5:12 pm
ಮಾಗಡಿ ಗ್ರಾಮಾಂತರ: ಸರಕಾರ ಶಾಲೆಗಳಿಗೆ ರೂಪಿಸುವ ಯೋಜನೆಗಳು ಜಾತಿ, ಮತದ ತಾರತಮ್ಯದಿಂದ ಕೂಡಿರಬೇಕು ಎಂದು ಬಿಬಿಎಂಪಿ ಮಾಜಿ ಪ್ರತಿಪಕ್ಷ ನಾಯಕ ಬಸವರಾಜು ತಿಳಿಸಿದರು.
Vijaya Karnataka Web students should get government plans
ಸರಕಾರದ ಯೋಜನೆಗಳು ವಿದ್ಯಾರ್ಥಿಗಳಿಗೆ ಸಿಗಲಿ


ಮಾಗಡಿ ತಾಲೂಕಿನ ತಿಪ್ಪಸಂದ್ರ ಹೋಬಳಿ ಕೇಂದ್ರ ಶ್ರೀ ಮಾರುತಿ ಸರಕಾರಿ ಪ್ರೌಢಶಾಲೆಯಲ್ಲಿ ತಿಪ್ಪಸಂದ್ರ ಹೋಬಳಿ ಮತ್ತು ಕುದೂರು ಹೋಬಳಿ ಪ್ರಾಂತ್ಯದ ಶಾಲೆಗಳಿಗೆ ತಟ್ಟೆ,ಲೋಟ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭಾವೈಕ್ಯತೆಯ ಸಂಗಮ: ''ಶಾಲೆಗಳು ಭಾವೈಕ್ಯತೆಯ ಸಂಗಮ, ಶಾಲೆಗಳಲ್ಲಿ ಸಮವಸ್ತ್ರ ಜಾರಿಗೊಳಿಸಿರುವುದೇ ಸಮಾನತೆಯನ್ನು ಬಿಂಬಿಸಲು ಆದಕಾರಣ ರಾಜ್ಯ ಸರಕಾರ ರೂಪಿಸುವ ಪ್ರತಿಯೊಂದು ಯೋಜನೆಗಳು ಎಲ್ಲಾ ಶಾಲಾ ಮಕ್ಕಳಿಗೆ ತಲುಪುವಂತೆ ಮಾಡಬೇಕು,'' ಎಂದರು.

''ವಿದ್ಯಾರ್ಥಿವೇತನ, ಶೈಕ್ಷ ಣಿಕ ಪ್ರವಾಸದ ಪ್ರೋತ್ಸಾಹ ಧನ ಹೀಗೆ ಅನೇಕ ಯೋಜನೆಗಳು ಆರ್ಥಿಕವಾಗಿ ಹಿಂದಿರುವ ಎಲ್ಲರಿಗೂ ತಲುಪಲಿ,'' ಎಂದರು.

ಬಸ್‌ ಪಾಸ್‌, ಪುನಃ ಪರಿಶೀಲಿಸಿ: ''ಬಸ್‌ಪಾಸ್‌ ವಿತರಣೆಯಲ್ಲಿ ಸರಕಾರದ ನಿಲುವು ಬೇಸರ ತಂದಿದೆ. ಈ ವಿಚಾರವಾಗಿ ಮುಖ್ಯಮಂತ್ರಿಗಳು ಪುನಃ ಪರಿಶೀಲನೆ ಮಾಡಿ ಮಕ್ಕಳಿಗೆ ಅನುಕೂಲಮಾಡಬೇಕು,'' ಎಂದರು.

ಮಾರುತಿ ಪ್ರೌಢಶಾಲೆಯ ಮುಖ್ಯಶಿಕ್ಷ ಕ ಸುರೇಶ್‌ ಮಾತನಾಡಿ, ''ದಾನಿಗಳು ಸರಕಾರಿ ಶಾಲೆಯನ್ನು ಗುರುತಿಸಿ ಕೊಡುಗೆ ನೀಡುತ್ತಿದ್ದಾರೆ. ಕೊಡುಗೆ ಸ್ವೀಕರಿಸಿದ ಶಾಲೆಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ತಂದುಕೊಡುವ ಮೂಲಕ ಹಳ್ಳಿಗೆ ಮತ್ತು ಶಾಲೆಗೆ ಕೀರ್ತಿತರುವ ಕೆಲಸಮಾಡಬೇಕು,'' ಎಂದರು.

ತಿಪ್ಪಸಂದ್ರ ಹೋಬಳಿ, ಬಿಸ್ಕೂರು ಕ್ಲಸ್ಟರ್‌ ಶಾಲೆಗಳು ಸೇರಿದಂತೆ ಹಲವು ಶಾಲೆಗಳ ಮುಖ್ಯ ಶಿಕ್ಷ ಕರಿಗೆ ಮತ್ತು ಮಕ್ಕಳಿಗೆ ತಟ್ಟೆ,ಲೋಟ ವಿತರಿಸಿದರು.

ತಾಲೂಕು ಎಸ್‌ಡಿಎಂಸಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಅಶೋಕ್‌, ಪಾಳ್ಯದ ಹಳ್ಳಿ ರಾಮಪ್ರಸಾದ್‌, ಮಾಗಡಿ ಗಂಗಾಧರ್‌, ಮಾಗಡಿ ಛಾಯಾಗ್ರಾಹಕ ಸಂಘದ ಅಧ್ಯಕ್ಷ ಪ್ರಕಾಶ್‌, ಅಣ್ಣೇಶಾಸ್ತ್ರಿಪಾಳ್ಯ ಸಿದ್ದಲಿಂಗಪ್ಪ, ಶಿಕ್ಷ ಕರಾದ ಪ್ರಕಾಶ್‌, ಡಿ.ಜಿ ಗಂಗಾಧರ್‌ ಮತ್ತು ಬಿಸ್ಕೂರ್‌ ಸಿಆರ್‌ಪಿ ಪಾಂಡುರಂಗಸ್ವಾಮಿ, ತಿಪ್ಪಸಂದ್ರ ಸಿಆರ್‌ಪಿ ರಾಜೇಶ್‌ ಮತ್ತು ವಿವಿಧ ಶಾಲಾ ಮಕ್ಕಳು ಹಾಗೂ ಶಾಲಾಭಿವೃದ್ಧಿ ಸದಸ್ಯರು ಹಾಜರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ