ಆ್ಯಪ್ನಗರ

ತಾಲೂಕು ಬಿಜೆಪಿ ಅಧ್ಯಕ್ಷ ರ ಐಶಾರಾಮಿ ಬಂಗಲೆ ಬೆಂಕಿಗಾಹುತಿ

ಮಾಗಡಿ ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ರಂಗಧಾಮಯ್ಯ ಅವರ ರಾಷ್ಟ್ರೀಯ ಹೆದ್ದಾರಿ ಯಂಟಗಾನಹಳ್ಳಿ ಪಂಚಾಯತಿ ವ್ಯಾಪ್ತಿಯ ಮಲ್ಲರಬಾಣವಾಡಿಯಲ್ಲಿರುವ ಐಶಾರಾಮಿ ಬಂಗಲೆ ಬೆಂಕಿಗಾಹುತಿಯಾಗಿದೆ.

Vijaya Karnataka 26 Mar 2019, 5:00 am
ಮಾಗಡಿ ಗ್ರಾಮಂತರ: ಮಾಗಡಿ ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ರಂಗಧಾಮಯ್ಯ ಅವರ ರಾಷ್ಟ್ರೀಯ ಹೆದ್ದಾರಿ ಯಂಟಗಾನಹಳ್ಳಿ ಪಂಚಾಯತಿ ವ್ಯಾಪ್ತಿಯ ಮಲ್ಲರಬಾಣವಾಡಿಯಲ್ಲಿರುವ ಐಶಾರಾಮಿ ಬಂಗಲೆ ಬೆಂಕಿಗಾಹುತಿಯಾಗಿದೆ.
Vijaya Karnataka Web taluk bjp presidents luxury bungalow burns
ತಾಲೂಕು ಬಿಜೆಪಿ ಅಧ್ಯಕ್ಷ ರ ಐಶಾರಾಮಿ ಬಂಗಲೆ ಬೆಂಕಿಗಾಹುತಿ


ಶಾರ್ಟ್‌ ಸರ್ಕಿಟ್‌ ಕಾರಣ: ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75 ರಲ್ಲಿರುವ ಮಲ್ಲರಬಾಣವಾಡಿ ಗ್ರಾಮದಲ್ಲಿರುವ ರಂಗಧಾಮಯ್ಯ ಅವರ ಮನೆಯಲ್ಲಿ ಮನೆಯವರು ಯಾರೂ ಇಲ್ಲದ ವೇಳೆ ಬೆಂಕಿ ಹತ್ತಿಕೊಂಡಿದೆ. ಮನೆಯ ಮಧ್ಯಭಾಗದಲ್ಲಿ ಹಾಕಲಾಗಿದ್ದ ಹವಾನಿಯಂತ್ರಿತ ಯಂತ್ರೋಪಕರಣದಲ್ಲಿ ಶಾರ್ಟ್‌ಸರ್ಕಿಟ್‌ನಿಂದ ಬೆಂಕಿ ಹತ್ತಿಕೊಂಡಿರುವುದು ಅವಘಡಕ್ಕೆ ಕಾರಣ ಎಂದು ಶಂಕಿಸಲಾಗಿದೆ.

ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಭಸ್ಮ: ಬೆಂಕಿ ಹತ್ತಿಕೊಂಡಿರುವುದನ್ನು ಗಮನಿಸಿದ ಮನೆಗೆಲಸದವರು ಬೆಂಕಿ ನಂದಿಸಲು ಪ್ರಯತ್ನಿಸಿದರಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಅಷ್ಟರಲ್ಲೇ ಮನೆಪೂರ್ತಿ ವ್ಯಾಪಿಸಿದ ಬೆಂಕಿ ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿಗಳು ಬೆಲೆಬಾಳುವ ಪೀಠೋಪಕರಣಗಳು ಪ್ಲಾಸ್ಟಿಕ್‌ ಮತ್ತು ಮರದ ವಸ್ತುಗಳೆನ್ನು ಆಪೋಶನ ತೆಗೆದುಕೊಂಡಿತ್ತು.

ಅಗ್ನಿಶಾಮಕ ಸಿಬ್ಬಂದಿ ಹರಸಾಹಸ: ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಎರಡು ಗಂಟೆಗಳ ಕಾಲ ಹರಸಾಹಸಪಟ್ಟು ಬೆಂಕಿ ನಂದಿಸಿದ್ದಾರೆ. ಅಷ್ಟು ಹೊತ್ತಿಗಾಗಲೇ ಮನೆಯಲಿದ್ದ ಬೆಲೆಬಾಳುವ ವಸ್ತುಗಳು ಸುಟ್ಟುಕರಕಲಾಗಿದ್ದವು. ಲಾಕರ್‌ನಲ್ಲಿಡಲಾಗಿದ್ದ ಬಂಗಾರ ಬೆಲೆಬಾಳುವ ಆಭರಣಗಳು ಮತ್ತು ಕೆಲ ಬೆಲೆಬಾಳುವ ಬೆಲೆಬಾಳುವ ದಾಖಲೆಗಳು ಬೆಂಕಿಯ ಕೆನ್ನಾಲಗೆಯಿಂದ ಬಚಾವಾಗಿದ್ದು, ಮನೆಯೊಡೆಯ ರಂಗಧಾಮಯ್ಯ ಅವರ ಕೈಸೇರಿವೆ ಎನ್ನಲಾಗಿದೆ.

ಅಂತೆಕಂತೆ ಮಾತು : ಬೆಂಕಿ ಅವಘಡ ಹವಾನಿಯಂತ್ರಿತ ಯಂತ್ರೋಪರಣದಿಂದ ಆಯ್ತಂತೆ, ದೇವರ ಮನೆಯಲ್ಲಿ ಹಚ್ಚಿದ್ದ ದೀಪದಿಂದ ಬೆಂಕಿ ಹತ್ತಿಕೊಂಡಿತಂತೆ ಎಂಬುದೂ ಸೇರಿದಂತೆ ಬೆಂಕಿ ಆಕಸ್ಮಿಕದ ಕುರಿತಂತೆ ಅಂತೆಕಂತೆಗಳ ಮಹಾಪೂರ ದಿನವಿಡೀ ಹರಿದಾಡಿತು.

ಸಾವಿರಾರು ಮಂದಿ ಜಮಾವಣೆ: ಘಟನೆಯ ವಿಚಾರ ತಿಳಿಯುತಿದ್ದಂತೆ ಸಾರ್ವಜನಿಕರು ಮತ್ತು ರಂಗಧಾಮಯ್ಯ ಅವರ ಅಭಿಮಾನಿಗಳು, ಹಿತೈಷಿಗಳು ಸೇರಿದಂತೆ ಸಾವಿರಾರು ಮಂದು ಮನೆ ಮುಂದೆ ಜಮಾಯಿಸಿ ತಲೆಗೊಂದರಂತೆ ಮಾತಾಡಿಕೊಂಡರು.

ಪ್ರತಿಕ್ರಿಯೆ ನೀಡಲು ನಕಾರ: ಬೆಂಕಿ ಆಕಸ್ಮಿಕದ ಕುರಿತಂತೆ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಲು ಐಶಾರಾಮಿ ಬಂಗಲೆ ಮಾಲೀಕ ರಂಗಧಾಮಯ್ಯ ನಿರಾಕರಿಸಿದ್ದಾರೆ. ಘಟನೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ, ಸ್ಥಳಕ್ಕೆ ಗ್ರಾಮಾಂತರ ಪೊಲೀಸ್‌ಠಾಣೆ ಅಧಿಕಾರಿಗಳು ಆಗಮಿಸಿ ನೆರೆದಿದ್ದ ಜನರನ್ನು ಹತೋಟಿಗೆ ತರವಲ್ಲಿ ಹರಸಾಹಸ ಪಟ್ಟರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ