ಆ್ಯಪ್ನಗರ

ನರೇಗಾ ಕಾಮಗಾರಿ ಸಮಸ್ಯೆ ಬಗೆಹರಿಸಲು ಇಒ ಕಟ್ಟಾಜ್ಞೆ

ತಾಲೂಕಿನ ಗ್ರಾ.ಪಂ. ವ್ಯಾಪ್ತಿಯಲ್ಲಿ ನರೇಗಾ ಯೋಜನೆ ಜತೆಯಲ್ಲಿ ಸರಕಾರದ ಯೋಜನೆಗಳ ಕೆಲಸ ಕಾರ್ಯಗಳು ಹಿನ್ನಡೆಯಾಗಿವೆ ಎಂಬ ದೂರುಗಳು ಬರುತ್ತಿದ್ದು, ಕೂಡಲೇ ಯಾವುದೇ ದೂರುಗಳು ಬರದಂತೆ ಗ್ರಾ.ಪಂ. ಪಿಡಿಓ ಕಾರ್ಯ ನಿರ್ವಹಿಸಬೇಕಿದೆ ಎಂದು ತಾ.ಪಂ. ಇಓ ರಾಮಕೃಷ್ಣಪ್ಪ ಹೇಳಿದರು.

Vijaya Karnataka 8 Jun 2019, 5:00 am
ಚನ್ನಪಟ್ಟಣ:
Vijaya Karnataka Web taluk panchayath eo order to resolve the issue of narega work
ನರೇಗಾ ಕಾಮಗಾರಿ ಸಮಸ್ಯೆ ಬಗೆಹರಿಸಲು ಇಒ ಕಟ್ಟಾಜ್ಞೆ

ತಾಲೂಕಿನ ಗ್ರಾ.ಪಂ. ವ್ಯಾಪ್ತಿಯಲ್ಲಿ ನರೇಗಾ ಯೋಜನೆ ಜತೆಯಲ್ಲಿ ಸರಕಾರದ ಯೋಜನೆಗಳ ಕೆಲಸ ಕಾರ್ಯಗಳು ಹಿನ್ನಡೆಯಾಗಿವೆ ಎಂಬ ದೂರುಗಳು ಬರುತ್ತಿದ್ದು, ಕೂಡಲೇ ಯಾವುದೇ ದೂರುಗಳು ಬರದಂತೆ ಗ್ರಾ.ಪಂ. ಪಿಡಿಓ ಕಾರ್ಯ ನಿರ್ವಹಿಸಬೇಕಿದೆ ಎಂದು ತಾ.ಪಂ. ಇಓ ರಾಮಕೃಷ್ಣಪ್ಪ ಹೇಳಿದರು.
ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ಕ್ಷೇತ್ರ ಭೇಟಿ ಹಿನ್ನೆಲೆಯಲ್ಲಿ ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ಗ್ರಾ.ಪಂ. ಪಿಡಿಒ ಪೂರ್ವ ಭಾವಿ ಸಭೆ ಹಾಗೂ ಪ್ರಗತಿ ಪರೀಶೀಲನಾ ಸಭೆ ನಡೆಯಿತು.

ಸರಕಾರ ಸೌಲಭ್ಯ ತಲುಪಿಸಿ:
ಪ್ರತಿಯೊಂದು ಗ್ರಾಮಗಳಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಹಾಗೂ ಭವಿಷ್ಯದ ದೃಷ್ಟಿಯಿಂದ ಜಲಾಮೃತ, ವಿಶ್ವ ಪರಿಸರ ದಿನಚರಣೆ ಹಾಗೂ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಅಯೋಜಿಸಿ ಸರಕಾರದ ಸೌಲಭ್ಯಗಳನ್ನು ಒದಗಿಸಲು ಕಾರ್ಯಕ್ರಮ ರೂಪಿಸಬೇಕಾಗಿದೆ ಎಂದರು.

ಜನಸ್ಪಂದನ ಅರ್ಜಿ ಇತ್ಯರ್ಥಪಡಿಸಿ:
ಕ್ಷೇತ್ರದ ಅಭಿವೃದ್ಧಿಯ ಜನತೆಯ ಅಹವಾಲುಗಳನ್ನು ಸ್ವೀಕರಿಸಿ, ಯೋಜನೆಗಳನ್ನು ರೂಪಿಸುವ ಸಲುವಾಗಿ ಜೂ.17 ಮತ್ತು 18 ರಂದು ಸಿಎಂ ಆಗಮಿಸುತ್ತಿದ್ದಾರೆ. ಹಿಂದಿನ ಸಿಎಂ ಜನಸ್ಪಂದನ ಸಭೆಯಲ್ಲಿ ಸಲ್ಲಿಕೆಯಾದ 103 ಅರ್ಜಿಗಳ ವಿಲೇವಾರಿಗೆ ಮುತುವರ್ಜಿ ವಹಿಸಿ ಎಂದರು.

ಕಾನೂನು ಕ್ರಮದ ಎಚ್ಚರಿಕೆ:
ಅಭಿವೃದ್ಧಿ ಹಾಗೂ ಕಾಮಗಾರಿಗಳ ಬಗ್ಗೆ ಪಿಡಿಒಗಳು ಉದಾಸೀನ ತಾಳಿದ್ದಾರೆ ಎಂಬ ವ್ಯಾಪಕ ದೂರು ಬರುತ್ತಿದೆ. ಸರಕಾರ ನೀಡುವ ಅನುದಾನದ ಸದ್ಬಳಕೆಗೆ ಯೋಜನೆ ರೂಪಿಸಿ, ಜಾರಿಗೊಳಿಸಿ. ಇಲ್ಲವಾದಲ್ಲಿ ಕಾನೂನು ಕ್ರಮದ ಮೂಲಕ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನಿವೇಶನಗಳ ಖಾತೆ, ಸಾಲ ಸೌಲಭ್ಯಗಳು ಇನ್ನಿತರ ಸಾರ್ವಜನಿಕರಿಗೆ ಸವಲತ್ತು ದೊರಕಬೇಕಾದರೆ ಪಂಚಾಯಿತಿ ಪಿಡಿಒ, ಅಧ್ಯಕ್ಷ ರು ಹಾಗೂ ಸದಸ್ಯರು ಒಟ್ಟಾಗಿ ಕೆಲಸ ಮಾಡಬೇಕು. ಈ ಉದ್ಧೇಶದಿಂದ ಯೋಜನೆ ರೂಪಿಸಲು ಸೂಚನೆ ನೀಡಿದರು. ಇಲ್ಲಿಯವರೆಗೂ ನೂತನ ಯೋಜನೆ ರೂಪಿಸುವ ಬಗ್ಗೆ ಪಿಡಿಒಗಳು ಕಾರ‍್ಯಪ್ರವೃತ್ತರಾಗಿಲ್ಲ ಎಂದು ಈಗಾಗಲೇ ಮುಖ್ಯಮಂತ್ರಿಗಳಿಗೆ ದೂರು ಹೋಗಿವೆ ಎಂದು ಎಚ್ಚರಿಸಿದರು.
ಸಭೆಯಲ್ಲಿ ತಾ.ಪಂ ಸಹಾಯಕ ನಿರ್ದೇಶಕ ದೊಡ್ಡಪುಟ್ಟಯ್ಯ, ಪಿಡಿಓ ಯತೀಶ್‌, ಶೋಭ, ರಾಜೇಶ್ವರಿ, ಕಾವ್ಯ, ಶ್ರೀದೇವಿ, ಶ್ವೇತಾ, ಅಮಿತ್‌, ಜಗದೀಶ್‌, ಉಮೇಶ್‌, ಕೃಷ್ಣಪ್ಪ ಸೇರಿದಂತೆ ಹಲವರು ಪಿಡಿಓಗಳು ಪ್ರಗತಿ ಪರೀಶೀಲನಾ ಸಭೆಯಲ್ಲಿ ಹಾಜರಿದ್ದರು.

ಗೈರಾದವರಿಗೆ ನೋಟಿಸ್‌:
ಸಿಎಂ ಆಗಮಿಸುವ ಹಿನ್ನಲೆಯಲ್ಲಿ ಕರೆದಿದ್ದ ಪೂರ್ವ ಭಾವಿ ಸಭೆ ಹಾಗೂ ಪ್ರಗತಿ ಪರೀಶೀಲನಾ ಸಭೆಗೆ ಗೈರು ಹಾಜರಾಗಿದ್ದವರಿಗೆ ನೋಟಿಸ್‌ ನೀಡಿ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಇಒ ಎಚ್ಚರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ