ಆ್ಯಪ್ನಗರ

ರೈಲ್ವೆ ಎಂಜಿನ್‌ನಲ್ಲಿ ತಾಂತ್ರಿಕ ದೋಷ: ಪರದಾಡಿದ ಪ್ರಯಾಣಿಕರು

ಬೆಂಗಳೂರು-ಮೈಸೂರು ನಡುವೆ ಸಂಚರಿಸುತ್ತಿದ್ದ ರೈಲ್ವೆ ಪ್ರಯಾಣಿಕರು ಚನ್ನಪಟ್ಟಣದ ಬಳಿ 1 ಗಂಟೆಗಳಿಗೂ ಹೆಚ್ಚು ಕಾಲ ಪರದಾಟ ನಡೆಸಿದ ಘಟನೆ ಮಂಗಳವಾರ ಸಂಜೆ ನಡೆದಿದೆ.

Vijaya Karnataka 5 Dec 2018, 5:00 am
ರಾಮನಗರ: ಬೆಂಗಳೂರು-ಮೈಸೂರು ನಡುವೆ ಸಂಚರಿಸುತ್ತಿದ್ದ ರೈಲ್ವೆ ಪ್ರಯಾಣಿಕರು ಚನ್ನಪಟ್ಟಣದ ಬಳಿ 1 ಗಂಟೆಗಳಿಗೂ ಹೆಚ್ಚು ಕಾಲ ಪರದಾಟ ನಡೆಸಿದ ಘಟನೆ ಮಂಗಳವಾರ ಸಂಜೆ ನಡೆದಿದೆ.
Vijaya Karnataka Web technical error in railway engine passengers traveling
ರೈಲ್ವೆ ಎಂಜಿನ್‌ನಲ್ಲಿ ತಾಂತ್ರಿಕ ದೋಷ: ಪರದಾಡಿದ ಪ್ರಯಾಣಿಕರು


ಬೆಂಗಳೂರಿನಿಂದ ಮೈಸೂರು ಕಡೆಗೆ ಹೊರಟ್ಟಿದ್ದ ಟಿಪ್ಪು ಎಕ್ಸ್‌ಪ್ರೆಸ್‌ ರೈಲಿನ ಎಂಜಿನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ರೈಲು ಚನ್ನಪಟ್ಟಣ ಸಮೀಪದ ಶೆಟ್ಟಿಹಳ್ಳಿ ನಿಲ್ದಾಣದಲ್ಲಿ ಒಂದು ಗಂಟೆ ಕಾಲ ನಿಂತಿದೆ. ಮಂಗಳವಾರ ಸಂಜೆ 4.15ರ ಸುಮಾರಿಗೆ ರೈಲು ಶೆಟ್ಟಿಹಳ್ಳಿ ನಿಲ್ದಾಣ ತಲುಪುತ್ತಲೇ ಎಂಜಿನ್‌ನಲ್ಲಿನ ತಾಂತ್ರಿಕ ದೋಷದಿಂದಾಗಿ ಸಂಚಾರ ನಿಲ್ಲಿಸಿತು.

5.15ರವರೆಗೂ ರೈಲು ನಿಲ್ದಾಣದಲ್ಲಿಯೇ ನಿಂತಿದ್ದರಿಂದ ಪ್ರಯಾಣಿಕರು ಪರದಾಡಿದರು. ಎಂಜಿನ್‌ ದುರಸ್ತಿ ಬಳಿಕ ಪ್ರಯಾಣ ಮುಂದುವರಿಸಿತು ಎಂದು ರೈಲ್ವೆ ಇಲಾಖೆ ಸಿಬ್ಬಂದಿ ಮಾಹಿತಿ ನೀಡಿದರು. ನಿಲ್ದಾಣದಲ್ಲಿ ನಿಂತ ಕಾರಣ ಉಳಿದ ರೈಲುಗಳ ಸಂಚಾರಕ್ಕೆ ಅಡಚಣೆ ಆಗಲಿಲ್ಲ. ಆದರೆ ಟಿಪ್ಪು ಎಕ್ಸ್‌ಪ್ರೆಸ್‌ನಲ್ಲಿದ್ದ ಪ್ರಯಾಣಿಕರು ಒಂದು ಗಂಟೆ ಕಾಲ ಪರದಾಡುವಂತಾಯಿತು.

ಬಸ್‌ ಹತ್ತಿದ ಪ್ರಯಾಣಿಕರು: ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಾಹನ ದಟ್ಟಣೆಯಿಂದಾಗಿ ಬೆಂಗಳೂರು-ಮೈಸೂರು ಕಡೆಗೆ ಸಂಚರಿಸುವ ಬಹುತೇಕರು ಬಸ್‌ ಬಿಟ್ಟು ರೈಲಿನಲ್ಲಿ ಸಂಚರಿಸುತ್ತಾರೆ. ಇದರ ನಡುವೆ ರೈಲು ಸಹ ಒಂದು ಗಂಟೆಗಳ ಕಾಲ ನಿಂತಿದ್ದವರಿಂದ ಪ್ರಯಾಣಿಕರು ಪರದಾಡಿದರು. ಕೆಲವರು ಸಾಹಸ ಮಾಡಿ, ಹೆದ್ದಾರಿ ತಲುಪಿ ಬಸ್‌ ಮೂಲಕ ಪ್ರಯಾಣ ಬೆಳೆಸಿದರು. ಇದರಿಂದಾಗಿ ರೈಲುಗಳ ಸಂಚಾರದಲ್ಲಿ ವೆತ್ಯಾಯ ಉಂಟಾಗಿದ್ದು, ಸಂಜೆ ಬಳಿಕ ಎಲ್ಲ ರೈಲುಗಳ ವೇಳಾ ಪಟ್ಟಿ ತಡವಾಗಿಯೇ ಇತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ