ಆ್ಯಪ್ನಗರ

ಹಳ್ಳಕ್ಕೆ ಉರುಳಿದ ಟೆಂಪೊ: 18 ಮಂದಿಗೆ ಗಾಯ

ಬೆಂಗಳೂರು-ಮೈಸೂರು ಹೆದ್ದಾರಿಯ ಮಾಯಗಾನಹಳ್ಳಿ ಬಳಿ ಟಾಟಾ ಏಸ್‌ ಟೆಂಪೊವೊಂದು ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿಬಿದ್ದ ಪರಿಣಾಮ 18 ಮಂದಿ ...

Vijaya Karnataka 9 Mar 2019, 5:00 am
ರಾಮನಗರ: ಬೆಂಗಳೂರು-ಮೈಸೂರು ಹೆದ್ದಾರಿಯ ಮಾಯಗಾನಹಳ್ಳಿ ಬಳಿ ಟಾಟಾ ಏಸ್‌ ಟೆಂಪೊವೊಂದು ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿಬಿದ್ದ ಪರಿಣಾಮ 18 ಮಂದಿ ಗಾಯಗೊಂಡಿದ್ದಾರೆ.
Vijaya Karnataka Web tempo 18 injured
ಹಳ್ಳಕ್ಕೆ ಉರುಳಿದ ಟೆಂಪೊ: 18 ಮಂದಿಗೆ ಗಾಯ


ರಾಮನಗರದ ಕೊತ್ತೀಪುರ ಗ್ರಾಮದಿಂದ ಹಾರೋಹಳ್ಳಿ ಬಳಿಯ ಕಗ್ಗಲಹಳ್ಳಿಗೆ ಮಗುವಿನ ಹುಟ್ಟುಹಬ್ಬದ ಅಂಗವಾಗಿ ಟಾಟಾ ಏಸ್‌ ಸರಕು ಸಾಗಣೆ ವಾಹನದಲ್ಲಿ ಸುಮಾರು 30 ಮಂದಿ ಪ್ರಯಾಣಿಸಿದ್ದರು. ಶುಕ್ರವಾರ ಬೆಳಗ್ಗೆ ಮಾಯಗಾನಹಳ್ಳಿ ಹತ್ತಿರದ ಹೆದ್ದಾರಿ ಇಳಿಮುಖ ರಸ್ತೆಯಲ್ಲಿ ವಾಹನ ಚಾಲಕನ ನಿಯಂತ್ರಣ ತಪ್ಪಿದ್ದು, ಪಕ್ಕದಲ್ಲಿದ್ದ ಸುಮಾರು 20 ಅಡಿ ಆಳದ ಹಳ್ಳಕ್ಕೆ ಬಿದ್ದಿದೆ. ಪ್ರಯಾಣಿಕರ ಕಿರುಚಾಟ ಕೇಳಿ ಅಕ್ಕ ಪಕ್ಕದ ಸ್ಥಳೀಯರು, ಹೆದ್ದಾರಿ ವಾಹನ ಸವಾರರು ತಕ್ಷಣ ನೆರವಿಗೆ ಬಂದಿದ್ದಾರೆ.

ಇದೇ ಮಾರ್ಗದಲ್ಲಿ ಸಾಗುತ್ತಿದ್ದ ರಾಮನಗರ ತಾಲೂಕು ಪಂಚಾಯತಿ ಅಧ್ಯಕ್ಷ ಗಾಣಕಲ್‌ ನಟರಾಜು ಅವರು ಮಾನವೀಯತೆ ಮೆರೆದಿದ್ದು, ತಮ್ಮ ಕಾರಿನಲಿ ಹಲವು ಗಾಯಳುಗಳನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿ ತುರ್ತು ಚಿಕಿತ್ಸೆಗೆ ಸಹಕರಿಸಿದರು. ಉಳಿದರವರನ್ನು ಮತ್ತೊಂದು ಟಾಟಾ ಏಸ್‌ ವಾಹದಲ್ಲಿ ಸಾರ್ವಜನಿಕರ ಸಹಕಾರದೊಂದಿಗೆ ಜಿಲ್ಲಾಸ್ಪತ್ರೆಗೆ ರವಾನಿಸಲಾಯಿತು.

ಘಟನೆಯಲ್ಲಿ ರಾಮನಗರ, ಕೊತ್ತೀಪುರ, ಹುಣನಸಹಳ್ಳಿ, ಹೊಸೂರು ಸೇರಿದಂತೆ ಸುತ್ತಮುತ್ತಲಿನ ನಿವಾಸಿಗಳಾದ ಮಂಜುಳಾ, ದುರ್ಗೇಶ್‌, ಪ್ರೇಮಕುಮಾರಿ, ಜಯಮ್ಮ, ಉಮಾ, ಪುಟ್ಟತಾಯಮ್ಮ, ತೇಜಸ್ವಿನಿ, ಸವಿತಾ, ಶ್ರೀಕಂಠರಾಜು, ಸೇವಂತ್‌, ಜಯಲಕ್ಷ್ಮೀ, ಚಾಲಕ ಜಗದೀಶ್‌ ಗಾಯಾಳುಗಳಾಗಿದ್ದು, ಈ ಪೈಕಿ ರುದ್ರಮ್ಮ, ಭಾಗ್ಯಮ್ಮ, ಸವಿತಾ, ಮಂಜಮ್ಮ, ತಾಯಕ್ಕ ಸೇರಿದಂತೆ ಮತ್ತಿಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ಯಲಾಗಿದೆ. ಅದೃಷ್ಟವಶಾತ್‌ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಮಳೆಯರೇ ಹೆಚ್ಚು ಗಾಯಾಳುಗಳಾಗಿದ್ದು, ಇಬ್ಬರು ಮಕ್ಕಳೂ ಇದ್ದಾರೆ.

ಸ್ಥಳ ಪರಿಶೀಲಿಸಿದ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆಯಿಂದ ಹೆದ್ದಾರಿಯಲ್ಲಿ ಕೆಲ ಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಈ ಸಂಬಂಧ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ