ಆ್ಯಪ್ನಗರ

ಚೀಲದಲ್ಲಿ ಮರಳು ಸಾಗಿಸಿದ ಹುಡುಗನ ಬಂಧಿಸಿದ ಸಾಹಸಿ ಪೊಲೀಸರು!

ಮನೆಯಲ್ಲಿ ಶೌಚಾಲಯ ನಿರ್ಮಿಸಿಕೊಳ್ಳಲು ಗೋಣಿಚೀಲದಲ್ಲಿ ಮರಳು ತುಂಬಿಸಿ ಹೊತ್ತುಕೊಂಡು ಹೋಗುತ್ತಿದ್ದ ಹುಡುಗನನ್ನು ಅಕ್ರಮ ಮರಳು ಸಾಗಣೆ ಆರೋಪದಲ್ಲಿ ಪೊಲೀಸರು ಬಂಧಿಸಿದ್ದಾರೆ...

Vijaya Karnataka 12 Feb 2019, 5:00 am
ಕೋಡಿಹಳ್ಳಿ(ಕನಕಪುರ ತಾ) : ಮನೆಯಲ್ಲಿ ಶೌಚಾಲಯ ನಿರ್ಮಿಸಿಕೊಳ್ಳಲು ಗೋಣಿಚೀಲದಲ್ಲಿ ಮರಳು ತುಂಬಿಸಿ ಹೊತ್ತುಕೊಂಡು ಹೋಗುತ್ತಿದ್ದ ಹುಡುಗನನ್ನು ಅಕ್ರಮ ಮರಳು ಸಾಗಣೆ ಆರೋಪದಲ್ಲಿ ಪೊಲೀಸರು ಬಂಧಿಸಿದ್ದಾರೆ.
Vijaya Karnataka Web the captive adventurer police arrested a boy carrying sand in the bag
ಚೀಲದಲ್ಲಿ ಮರಳು ಸಾಗಿಸಿದ ಹುಡುಗನ ಬಂಧಿಸಿದ ಸಾಹಸಿ ಪೊಲೀಸರು!


ಬಲಾಢ್ಯರು ಹಗಲು-ರಾತ್ರಿಯೆನ್ನದೇ ಲಾರಿಗಳು, ಟ್ರಾಕ್ಟರ್‌ಗಳಲ್ಲಿ ಮರಳನ್ನು ಕೊಳ್ಳೆ ಹೊಡೆಯುತ್ತಿದ್ದರೂ, ಕಣ್ಣು ಮುಚ್ಚಿ ಕುಳಿತ ಪೊಲೀಸರು, ಹುಡುಗನ ಮೇಲೆ ಪೌರುಷ ತೋರಿಸಿರುವುದು ಗ್ರಾಮಸ್ಥರನ್ನು ಕೆರಳಿಸಿದೆ. ಕೋಡಿಹಳ್ಳಿ ಪೊಲೀಸ್‌ ಠಾಣೆ ಮುಂದೆ ಸೋಮವಾರ ಪ್ರತಿಭಟನೆ ನಡೆಸಿ ಹುಡುಗನ ಬಿಡುಗಡೆಗೆ ಆಗ್ರಹಿಸಿದ್ದಾರೆ.

ಏನಿದು ಘಟನೆ?: ಕೋಡಿಹಳ್ಳಿ ನಿವಾಸಿ ನಾರಾಯಣ ಸ್ವಾಮಿ ಅವರಿಗೆ ಗ್ರಾಪಂವತಿಯಿಂದ ಶೌಚಾಲಯ ಮಂಜೂರಾಗಿದ್ದು, ಅದರ ನಿರ್ಮಾಣಕ್ಕೆ ಅವರ ಮಗ ಅರುಣ, ಕೋಡಿಹಳ್ಳಿ ಸರ್ವೆ ನಂಬರ್‌ 385ರ ಸರಕಾರಿ ಜಮೀನಿನಲ್ಲಿ ಒಂದು ಚೀಲ ಮರಳು ತುಂಬಿ ಕೊಳ್ಳುತ್ತಿದ್ದಾಗ ಪೊಲೀಸರು ದಾಳಿ ನಡೆಸಿ ಬಂಧಿಸಿ ಠಾಣೆಯಲ್ಲಿ ಅಕ್ರಮವಾಗಿ ಬಂಧನದಲ್ಲಿರಿಸಿಕೊಂಡಿರುವುದು ಪ್ರಜ್ಞಾವಂತರನ್ನು ಅಚ್ಚರಿಗೀಡು ಮಾಡಿದೆ. ಒಂದು ಚೀಲ ಮರಳು ತಂದ ಹುಡುಗನ ಸೆರೆಗೆ ಹಿರಿಯ ಅಧಿಕಾರಿಗಳಿಂದ ಆದೇಶ ಬಂದಿದೆ, ಅವನನ್ನು ಬಿಡುಗಡೆಗೊಳಿಸಲು ಸಾಧ್ಯವಿಲ್ಲ ಎಂದು ಅವರು ಹೇಳುತ್ತಿರುವುದು ದಿಗ್ಭ್ರಮೆಗೀಡು ಮಾಡಿದೆ. ಪೊಲೀಸರ ಪ್ರಕಾರ ಗ್ರಾಮಸ್ಥರ ಪ್ರತಿಭಟನೆಗೂ ಜಗ್ಗದಿರುವಂತಹ ಘನಘೋರ ಅಪರಾಧ ಅವನದಂತೆ. ಕಾಲ ಎಲ್ಲಿಗೆ ಬಂತಪ್ಪಾ ಎಂಬ ಉದ್ಗಾರ ಹಿರಿಯರದ್ದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ