ಆ್ಯಪ್ನಗರ

ಪ್ರೀತಿಯ ವಿಚಾರಕ್ಕೆ ಯುವಕನ ಕಗ್ಗೊಲೆ

ಪ್ರೀತಿಯ ವಿಚಾರವಾಗಿ ಯುವಕನೊಬ್ಬನನ್ನು ಭಾನುವಾರ ರಾತ್ರಿ ಹಾಕಿ ಸ್ಟೀಕ್‌ನಿಂದ ಥಳಿಸಿ, ಕತ್ತು ಕೊಯ್ದು ಹತ್ಯೆ ಮಾಡಿರುವ ಘಟನೆ ಮಾಗಡಿ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.

Vijaya Karnataka 2 Jul 2019, 5:00 am
ಮಾಗಡಿ : ಪ್ರೀತಿಯ ವಿಚಾರವಾಗಿ ಯುವಕನೊಬ್ಬನನ್ನು ಭಾನುವಾರ ರಾತ್ರಿ ಹಾಕಿ ಸ್ಟೀಕ್‌ನಿಂದ ಥಳಿಸಿ, ಕತ್ತು ಕೊಯ್ದು ಹತ್ಯೆ ಮಾಡಿರುವ ಘಟನೆ ಮಾಗಡಿ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
Vijaya Karnataka Web the carnage of a young man for loves sake
ಪ್ರೀತಿಯ ವಿಚಾರಕ್ಕೆ ಯುವಕನ ಕಗ್ಗೊಲೆ


ತಾಲೂಕಿನ ಮಾನಗಲ್‌ ಗ್ರಾಮದ ನಿವಾಸಿ ರವಿ(25) ಎಂಬ ಹತ್ಯೆಗೀಡಾದವನು. ಸೆಂಟ್ರಿಂಗ್‌ ಕೆಲಸ ನಿರ್ವಹಿಸುತ್ತಿದ್ದು, ರವಿ ತನ್ನ ಸಂಬಂಧಿಕರೇ ಆದ ಬೈಚಾಪುರದ ನಿವಾಸಿ ನಾಗೇಶ್‌ ಎಂಬುವವರ ಮಗಳನ್ನು ಪ್ರೀತಿಸುತ್ತಿದ್ದನು. ತನ್ನ ಮಗಳು ರವಿಯನ್ನು ಪ್ರೀತಿಸುತ್ತಿದ್ದಾಳೆ ಎಂಬುದನ್ನು ತಿಳಿದ ನಾಗೇಶ್‌ ತನ್ನ ಸಂಬಂಧಿಕನೇ ಆದ ಹೊಸಪೇಟೆ ಬಳಿಯ ಗುಮ್ಮಸಂದ್ರ ರಸ್ತೆಯಲ್ಲಿ ವಾಸವಾಗಿರುವ ಲೋಕೇಶ್‌ಗೆ ವಿಷಯವನ್ನು ತಿಳಿಸಿ ರವಿಗೆ ಬುದ್ಧಿ ಹೇಳು ಎಂದು ಕೇಳಿಕೊಂಡಿದ್ದ ಎನ್ನಲಾಗಿದೆ.

ಲೋಕೇಶ್‌ ಭಾನುವಾರ ರಾತ್ರಿ ಸುಮಾರು 8 ಗಂಟೆ ಸಮಯದಲ್ಲಿ ರವಿಯನ್ನು ತನ್ನ ಬಳಿಗೆ ಕರೆಸಿಕೊಂಡು ಪಟ್ಟಣದ ತಿರುಮಲೆ ರಸ್ತೆಯ ಬಳಿ ಇರುವ ಲೋಕೋಪಯೋಗಿ ಕಚೇರಿಯ ಮುಂಭಾಗ ಹಾಕಿ ಬ್ಯಾಟ್‌ನಿಂದ ರವಿಯನ್ನು ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಈ ದೃಶ್ಯವನ್ನು ಸಾರ್ವಜನಿಕರು ರಸ್ತೆಯಲ್ಲಿ ನಿಂತು ಗಮನಿಸಿದ್ದಾರೆ. ಆನಂತರ ರವಿಯನ್ನು ಆಟೋದಲ್ಲಿ ಬಾಲಾಜಿ ಚಿತ್ರಮಂದಿರದ ಬಳಿಗೆ ಕರೆದೊಯ್ದು ಅಲ್ಲಿಯೂ ಸಹ ಥಳಿಸುತ್ತಿರುವುದನ್ನು ನೋಡಿದ್ದಾರೆ. ಆನಂತರ ರವಿಯ ಕತ್ತನ್ನು ಕೊಯ್ದು ಮಾಗಡಿ ಗುಡೇಮಾರನಹಳ್ಳಿ ರಸ್ತೆಯ ಪಾರಂಗ ಶಾಲೆಯ ಬಳಿ ಇರುವ ಸೇತುವೆ ಕೆಳಕ್ಕೆ ರವಿಯ ಶವವನ್ನು ಎಸೆದು ಹುಡುಗಿಯ ತಂದೆ ನಾಗೇಶ್‌ಗೆ ಕರೆ ಮಾಡಿ ಲೋಕೇಶನನ್ನು ಮುಗಿಸಿ ಶವವನ್ನು ಸೇತುವೆಗೆ ಎಸೆದಿರುವುದಾಗಿ ತಿಳಿಸಿ ಲೋಕೇಶ್‌ ಪರಾರಿಯಾಗಿದ್ದಾನೆ. ಈ ದುಷ್ಕೃತ್ಯಕ್ಕೆ ಲೋಕೇಶ್‌ನ ಸ್ನೇಹಿತರಿಬ್ಬರು ಸಾಥ್‌ ನೀಡಿದ್ದಾರೆ ಎನ್ನಲಾಗಿದೆ.

ಮಾಗಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸೋಮವಾರ ಮಧ್ಯಾಹ್ನ ಪೊಲೀಸರು ಸೇತುವೆ ಕೆಳಗಿನಿಂದ ರವಿಯ ಶವವನ್ನು ಮೇಲಕ್ಕೆ ತೆಗೆದು ಮರಣೊತ್ತರ ಪರೀಕ್ಷೆಗಾಗಿ ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಮಾಗಡಿ ಪೊಲೀಸ್‌ ಠಾಣೆಯ ಬಳಿ ಆಗಮಿಸಿದ್ದ ರವಿಯ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ