ಆ್ಯಪ್ನಗರ

ರಾಮನಗರದ ಕೋಟೆ ಮಾರಮ್ಮನ ತಾಳಿ ಕದ್ದವರು ಅಂದರ್

ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ಕಳವು ಪ್ರಕರಣಗಳು‌ ಹೆಚ್ಚಾಗಿ, ಕಾನೂನು ಸುವ್ಯವಸ್ಥೆಯ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಕಳವು ಪ್ರಕರಣಗಳನ್ನು ಪತ್ತೆ ಹಚ್ಚಲು ವಿಶೇಷ ತಂಡ ರಚಿಸಿಕೊಂಡು ಕಾರ್ಯಪ್ರವೃತ್ತರಾದ ಪೊಲೀಸರು ಸದ್ಯ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

Vijaya Karnataka Web 13 Aug 2020, 3:49 pm
ರಾಮನಗರ: ವಿವಿಧ ದೇವಾಲಯಗಳ ಬೀಗ ಹೊಡೆದು ಕಳವು ಮಾಡುತ್ತಿದ್ದ ಆರೋಪಿಗಳನ್ನು ಚನ್ನಪಟ್ಟಣ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
Vijaya Karnataka Web Ramnagar


ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ಕಳವು ಪ್ರಕರಣಗಳು‌ ಹೆಚ್ಚಾಗಿ, ಕಾನೂನು ಸುವ್ಯವಸ್ಥೆಯ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಕಳವು ಪ್ರಕರಣಗಳನ್ನು ಪತ್ತೆ ಹಚ್ಚಲು ವಿಶೇಷ ತಂಡ ರಚಿಸಿಕೊಂಡು ಕಾರ್ಯಪ್ರವೃತ್ತರಾದ ಪೊಲೀಸರು ಸದ್ಯ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಅನ್‌ಲಾಕ್‌ ಬಳಿಕ ಹೆಚ್ಚಾಯ್ತು ನಿಧಿ ಶೋಧ..! ಪುರಾತನ ದೇವಾಲಯಗಳೇ ಟಾರ್ಗೆಟ್..!

ಚನ್ನಪಟ್ಟಣ ಕೂಡೂರು ಕಡೆಯಿಂದ ಬೈಕ್‌ನಲ್ಲಿ ಇಬ್ಬರು ವ್ಯಕ್ತಿಗಳು ಅನುಮಾನಾಸ್ಪದವಾಗಿ ಹೋಗುತ್ತಿದ್ದನ್ನು ಕಂಡು ಪೊಲೀಸರು ಇವನ್ನು ತಡೆದಿದ್ದಾರೆ. ಬೈಕ್ ನಂಬರ್ ಕಾಣದಂತೆ ನಂಬರ್ ಪ್ಲೇಟ್ ಮೇಲೆ ಗೀಚಿದ್ದು, ಈ ಬಗ್ಗೆ ವಿಚಾರಿಸಿದಾಗ ತಡಬಡಾಯಿಸಿದ್ದಾರೆ. ಒಬ್ಬನ ಹೆಸರು ಮಾರುತಿ ಬಿನ್ ಪುಟ್ಟಸ್ವಾಮಿ ಗೌಡ ದಾಸರಹಳ್ಳಿ ಬೆಂಗಳೂರು, ಮತ್ತೊಬ್ಬ ನಾಗೇಶ ಬಿನ್ ಲೇಟ್ ಗಂಗಾಧರಯ್ಯ ಅಂತ ತಿಳಿಸಿದ್ದಾರೆ. ಅವರ ಬೈಕ್ ಪರಿಶೀಲಿಸಿದಾಗ ದೇವಾಲಯದ ವಸ್ತುಗಳು ಹಾಗೂ ಚಿಲ್ಲರೆ ಕಾಸು, ಕಬ್ಬಿಣದ ಎರಡು ರಾಡುಗಳು ಕಂಡು ಬಂದಿವೆ. ಈ ಬಗ್ಗೆ ವಿಚಾರ ಮಾಡಿದ ವೇಳೆ ಮತ್ತಷ್ಟು ಅನುಮಾನ ವ್ಯಕ್ತವಾಗಿದೆ.

ರಾಮನಗರದಲ್ಲಿ ಲಾಕ್‌ಡೌನ್ ಬಳಿಕ ಹೆಚ್ಚಾಯ್ತು ಸರಗಳ್ಳತನ: ಸಿಕ್ಕಿಬಿದ್ದವರಿಗೆ ಧರ್ಮದೇಟು..!

ಕೂಡಲೆ ಅವರನ್ನು ವಶಕ್ಕೆ ತೆಗೆದುಕೊಂಡು ಪೊಲೀಸ್ ಭಾಷೆಯಲ್ಲಿ ವಿಚಾರಿಸಿದಾಗ ಕಳವು ಪ್ರಕರಣವನ್ನು ಬಾಯ್ಬಿಟ್ಟಿದ್ದಾರೆ. ಬಂಧಿತರು ಆಗಸ್ಟ್‌ 6ರಂದು ರಾಮನಗರ ಕನಕಪುರ ರಸ್ತೆಯಲ್ಲಿ ಇರುವ ಕೋಟಹಳ್ಳಿ ಗುಡ್ಡದಲ್ಲಿ ವೀರಭದ್ರಸ್ವಾಮಿ ದೇವಸ್ಥಾನದ ಬಾಗಿಲು ಹೊಡೆದು ಕಳವು ಮಾಡಿದ್ದರು. ಈ ವೇಳೆ ಬೆಳ್ಳಿಯ ಕರಡಿಕೆ, ಅದೇ ದಿನ ರಾಮನಗರ ತಾಲ್ಲೂಕು ಮೊಟ್ಟೆದೊಡ್ಡಿ ಗ್ರಾಮದ ರಸ್ತೆ ಪಕ್ಕದಲ್ಲಿ ಇರುವ ಕೋಟೆ ಮಾರಮ್ಮ ದೇವಸ್ಥಾನದಲ್ಲಿ ಕಳವು ಮಾಡಿದ್ದ, ದೇವರ ಮೈಮೇಲಿದ್ದ 2 ಚಿನ್ನದ ಚಿಕ್ಕ ತಾಳಿ, 2 ದೇವರ ಕಣ್ಣುಗಳು, 3 ಚಿನ್ನದಂತಹ ಮೂಗತಿ, 7 ಬೆಳ್ಳಿಯಂತಹ ಕಾಸುಗಳು, 2 ಚಿನ್ನದಂತಹ ಕಾಸುಗಳು ಮತ್ತು ಕಾಲು ಗೆಜ್ಜೆ ಮತ್ತು ಅಂದೇ ರಾಮನಗರ ತಾಲ್ಲೂಕು ಮಾಯಾಗಾನಹಳ್ಳಿ ಆಂಜನೇಯ ಸ್ವಾಮಿ ದೇವಸ್ಥಾನದ ಬಾಗಿಲು ಮುರಿದು, ಸಣ್ಣ ಹುಂಡಿಯನ್ನು ಹೊಡೆದು ಅದರಲ್ಲಿದ್ದ ಚಿಲ್ಲರೆ ಕಾಸನ್ನು ಇವರು ಕಳವು ಮಾಡಿದ್ದರು. ಪೊಲೀಸರು ಅದೆಲ್ಲವನ್ನು ವಶಕ್ಕೆ ಪಡೆದಿದ್ದಾರೆ.

ಸಂಗಮದಲ್ಲಿ ಅಪಾಯದ ಮಟ್ಟ ತಲುಪಿದ ಕಾವೇರಿ: ನದಿ ತಟದ ನಿವಾಸಿಗಳಲ್ಲಿ ಆತಂಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ