ಆ್ಯಪ್ನಗರ

ಕಲುಷಿತ ವಾತಾವರಣ, ಜೀವ ಸಂಕುಲಕ್ಕೆ ಅಪಾಯ

ವಾತಾವರಣ ಸಂಪೂರ್ಣವಾಗಿ ಕಲುಷಿತಗೊಂಡಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಜೀವ ಸಂಕುಲಕ್ಕೆ ಅಪಾಯ ತಪ್ಪಿದ್ದಲ್ಲ ಎಂದು ರೋಟರಿ ಸಿಲ್ಕ್‌ ಸಿಟಿ ಅಧ್ಯಕ್ಷ ರಾಘವೇಂದ್ರ ವಿಷಾದ ವ್ಯಕ್ತಪಡಿಸಿದರು.

Vijaya Karnataka 9 Jun 2019, 5:00 am
ರಾಮನಗರ : ವಾತಾವರಣ ಸಂಪೂರ್ಣವಾಗಿ ಕಲುಷಿತಗೊಂಡಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಜೀವ ಸಂಕುಲಕ್ಕೆ ಅಪಾಯ ತಪ್ಪಿದ್ದಲ್ಲ ಎಂದು ರೋಟರಿ ಸಿಲ್ಕ್‌ ಸಿಟಿ ಅಧ್ಯಕ್ಷ ರಾಘವೇಂದ್ರ ವಿಷಾದ ವ್ಯಕ್ತಪಡಿಸಿದರು.
Vijaya Karnataka Web the contaminated atmosphere the risk of health life
ಕಲುಷಿತ ವಾತಾವರಣ, ಜೀವ ಸಂಕುಲಕ್ಕೆ ಅಪಾಯ


ತಾಲೂಕಿನ ಅರೇಹಳ್ಳಿ ಗ್ರಾಮದ ಸರಕಾರಿ ಶಾಲೆಯಲ್ಲಿ ರೋಟರಿ ಸಿಲ್ಕ್‌ ಸಿಟಿ ಮತ್ತು ವಾಸವಿ ವಿದ್ಯಾನಿಕೇತನ ಕಿಂಡರಾಕ್ಟ್ ಕ್ಲಬ್‌ ಸಂಯುಕ್ತವಾಗಿ ವಿಶ್ವ ಪರಿಸರ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿ, ''ಮಾಲಿನ್ಯ ತಡೆಗಟ್ಟುವುದು ಮನುಷ್ಯನ ಹೊಣೆಗಾರಿಕೆ. ಪ್ಲಾಸ್ಟಿಕ್‌ ಹಾಗೂ ನೀರಿನನ್ನು ಹಿತಮಿತವಾಗಿ ಬಳಸಿ,'' ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಇದೇ ವೇಳೆ ಅರೇಹಳ್ಳಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ರೋಟರಿ ಸಿಲ್ಕ್‌ ಸಿಟಿ ಪದಾಧಿಕಾರಿಗಳು ಶಾಲೆಯ ಆವರಣದಲ್ಲೇ ಸಸಿಗಳನ್ನು ನೆಟ್ಟರು. ವಿದ್ಯಾರ್ಥಿಗಳಿಗೆ ನಿಘಂಟು ಮತ್ತು ಲೇಖನ ಸಾಮಗ್ರಿಗಳನ್ನು ವಿತರಣೆ ಮಾಡಿದರು.

ಇದೇ ವೇಳೆ ಪರಿಸರ ಪ್ರೇಮಿ ಸಾಲು ಮರದ ನಿಂಗಣ್ಣ ಅವರನ್ನು ಸನ್ಮಾನಿಸಲಾಯಿತು. ರೋಟರಿ ಸಿಲ್ಕ್‌ ಸಿಟಿ ಕಾರ್ಯದರ್ಶಿ ಅನುರಾಧ, ನಿರ್ದೇಶಕ ಅಮಿತ್‌ ರಾಜ್‌ ಶಿವ, ಅರೇಹಳ್ಳೀ ಡೇರಿಯ ಕಾರ್ಯದರ್ಶಿ ಕಿಶೋರ್‌ ಗೌಡ, ಶಾಲೆಯ ಮುಖ್ಯ ಶಿಕ್ಷಕಿ ಪುಷ್ಪಗೌರಮ್ಮ, ಸಹಶಿಕ್ಷಕರಾದ ಕೆ.ಎಸ್‌.ಸುಧಾಮಣಿ, ಎಚ್‌.ಆರ್‌.ರಂಗನಾಥ್‌ ಮತ್ತು ಎಸ್‌.ಹೇಮಾವತಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ