ಆ್ಯಪ್ನಗರ

ಪತಿ-ಪತ್ನಿ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯ

ಪತ್ನಿಯಿಂದ ಕುಡಿಯಲು ಹಣ ಕೊಡುವಂತೆ ಪೀಡಿಸುತ್ತಿದ್ದ ಪತಿರಾಯನೊಬ್ಬ ಜಗಳ ಮಾಡಿಕೊಂಡು ಪತ್ನಿಯನ್ನು ಹೊಡೆದು ಕೊಲೆಮಾಡಿರುವ ಘಟನೆ ಕಗ್ಗಲಿಪುರ ಪೊಲೀಸ್‌ ಠಾಣಾ ವ್ಯಾಪ್ತಿಯ ಸೋಮನಹಳ್ಳಿ ...

Vijaya Karnataka 21 Jul 2019, 5:00 am
ಹಾರೋಹಳ್ಳಿ (ಕನಕಪುರ ತಾ.): ಪತ್ನಿಯಿಂದ ಕುಡಿಯಲು ಹಣ ಕೊಡುವಂತೆ ಪೀಡಿಸುತ್ತಿದ್ದ ಪತಿರಾಯನೊಬ್ಬ ಜಗಳ ಮಾಡಿಕೊಂಡು ಪತ್ನಿಯನ್ನು ಹೊಡೆದು ಕೊಲೆಮಾಡಿರುವ ಘಟನೆ ಕಗ್ಗಲಿಪುರ ಪೊಲೀಸ್‌ ಠಾಣಾ ವ್ಯಾಪ್ತಿಯ ಸೋಮನಹಳ್ಳಿ ಗ್ರಾಮದಲ್ಲಿ ನಡೆದಿದೆ.
Vijaya Karnataka Web the culmination of a quarrel between husband and wife
ಪತಿ-ಪತ್ನಿ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯ


ಬೆಂಗಳೂರಿನ ಇಂದಿರಾನಗರದ ವಾಸಿ ಸುಧಾ (27) ಹತ್ಯೆಯಾದ ಮಹಿಳೆ. ಮದುವೆಯಾಗಿ ಹತ್ತು ವರ್ಷದಿಂದ ಬಾಳು ಕಟ್ಟಿಕೊಂಡಿದ್ದ ಗಂಡ ತನ್ನ ಪ್ರೇಯಸಿಯೊಂದಿಗೆ ಮದುವೆ ಮಾಡಿಕೊಳ್ಳುವ ಹುನ್ನಾರ ಹೊಂದಿದ್ದನೆಂಬ ಅನುಮಾನದ ಮೇಲೆ ಪತಿ-ಪತ್ನಿ ಇಬ್ಬರಲ್ಲೂ ಆಗಾಗ ಜಗಳವಾಗುತ್ತಿತ್ತು. ಶನಿವಾರ ಬೆಳಗ್ಗೆ ಪತ್ನಿಯ ಕೊಲೆ ಮಾಡಿ ಪರಾರಿಯಾಗಿದ್ದ ಪತಿ ಉಮೇಶನನ್ನು ಸಂಜೆಯ ವೇಳೆಗೆ ಕಗ್ಗಲಿಪುರ ಪೊಲೀಸರು ಬಂಧಿಸಿದ್ದಾರೆ.

ದುಡ್ಡಿಗಾಗಿ ಪೀಡಿಸುತ್ತಿದ್ದ ಗಂಡ: ತನ್ನ ಸೋದರ ಅತ್ತೆಯ ಮಗಳಾದ ಸುಧಾಳನ್ನು ಕಳೆದ ಹತ್ತು ವರ್ಷಗಳ ಹಿಂದೆ ಮದುವೆಯಾಗಿದ್ದ ಉಮೇಶ್‌ ಇತ್ತೀಚೆಗಷ್ಟೇ ನಗರದಿಂದ ಸೋಮನಹಳ್ಳಿ ಗ್ರಾಮಕ್ಕೆ ಬಂದು ನೆಲೆಸಿದ್ದರು.ಒಬ್ಬ ಪುತ್ರ ಮತ್ತು ಪುತ್ರಿಯನ್ನು ಹೊಂದಿದ್ದ ಈ ಕುಟುಂಬದಲ್ಲಿ ಕೊಲೆಯಾದ ಪತ್ನಿ ಬೇರೊಬ್ಬರ ಮನೆಯಲ್ಲಿ ಅಡುಗೆ ಕೆಲಸ ನಿರ್ವಹಿಸುತ್ತಿದ್ದರು. ಆದರೆ ಗಂಡ ಯಾವುದೇ ಕೆಲಸ ಕಾರ್ಯಗಳನ್ನು ಮಾಡದೇ ಹೆಂಡತಿ ತರುವ ಸಂಬಳದ ದುಡ್ಡನ್ನೇ ಅವಲಂಬಿಸಿ ಆಗಾಗ ದುಡ್ಡು ನೀಡುವಂತೆ ಪೀಡಿಸುತ್ತಿದ್ದ ಎಂದು ಮೃತಳ ಸಂಬಂಧಿಕರು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಪ್ರೇಯಸಿ ಜತೆ ವಿವಾಹವಾಗುವ ಹುನ್ನಾರ: ಹಣಕ್ಕಾಗಿ ಹೆಂಡತಿಯನ್ನು ಪೀಡಿಸುತ್ತಿದ್ದ ಆರೋಪಿ ಇತ್ತೀಚೆಗೆ ಪ್ರೇಯಸಿಯೊಂದಿಗೆ ವಿವಾಹವಾಗಲು ನಿಶ್ಚಯ ಮಾಡಿದ್ದ. ಇದರಿಂದ ಅನುಮಾನಗೊಂಡಿದ್ದ ಪತ್ನಿ ಆಗಾಗ ಗಂಡನೊಂದಿಗೆ ಜಗಳವಾಡುತ್ತಿದ್ದರು. ಜಗಳದ ನಂತರ ಇಬ್ಬರೂ ಸುಮ್ಮನಾಗುತ್ತಿದ್ದರು. ಶನಿವಾರ ಬೆಳಗ್ಗೆ ಹೆಂಡತಿಯೊಂದಿಗೆ ಜಗಳ ತೆಗೆದ ಆರೋಪಿ ಕಪಾಳಕ್ಕೆ ಹೊಡೆದು ಕತ್ತು ಹಿಸುಕಿ ಸಾಯಿಸಿ ಪರಾರಿಯಾಗಿದ್ದ ಎಂದು ಮೃತಳ ತಾಯಿ ಲಲಿತಮ್ಮ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಕಗ್ಗಲಿಪುರ ಸಬ್‌ಇನ್ಸ್‌ಪೆಕ್ಟರ್‌ ಗೋವಿಂದ ಮಧ್ಯಾಹ್ನದ ವೇಳೆಗೆ ಆರೋಪಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಕೈಗೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ