ಆ್ಯಪ್ನಗರ

ಆಯತಪ್ಪಿ ಟ್ರಾಕ್ಟರ್‌ನಿಂದ ಕೆಳಗೆ ಬಿದ್ದು ಯುವಕ ಸಾವು

ತಾಲೂಕಿನ ಕೂಡ್ಲೂರು - ಹೊಟ್ಟಿಗಾನ ಹೊಸಹಳ್ಳಿ ರಸ್ತೆಯಲ್ಲಿ ಚಲಿಸುತ್ತಿದ್ದ ಟ್ರಾಕ್ಟರ್‌ನಿಂದ ಆಯತಪ್ಪಿ ಕೆಳಗೆಬಿದ್ದ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ...

Vijaya Karnataka 17 Mar 2019, 5:00 am
ಚನ್ನಪಟ್ಟಣ: ತಾಲೂಕಿನ ಕೂಡ್ಲೂರು - ಹೊಟ್ಟಿಗಾನ ಹೊಸಹಳ್ಳಿ ರಸ್ತೆಯಲ್ಲಿ ಚಲಿಸುತ್ತಿದ್ದ ಟ್ರಾಕ್ಟರ್‌ನಿಂದ ಆಯತಪ್ಪಿ ಕೆಳಗೆಬಿದ್ದ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
Vijaya Karnataka Web the death of a young man fell down by a tractor
ಆಯತಪ್ಪಿ ಟ್ರಾಕ್ಟರ್‌ನಿಂದ ಕೆಳಗೆ ಬಿದ್ದು ಯುವಕ ಸಾವು


ತಾಲೂಕಿನ ದೇವರಹಳ್ಳಿ ಗ್ರಾಮದ ಮೀಸೆಭೈರಣ್ಣ ಎಂಬವರ ಪುತ್ರನಾದ ಶಿವಪ್ರಸಾದ್‌(25) ಮೃತಪಟ್ಟ ದುರ್ದೈವಿ.

ಮಣ್ಣು ಸಾಗಿಸುತ್ತಿದ್ದ ಟ್ರಾಕ್ಟರ್‌ನಲ್ಲಿ ಚಾಲಕನ ಪಕ್ಕ ಕುಳಿತಿದ್ದ ಶಿವಪ್ರಸಾದ್‌, ಟ್ರಾಕ್ಟರ್‌ ಚಕ್ರ ಹಳ್ಳಕ್ಕೆ ಇಳಿದಿದ್ದರಿಂದ ಆಯತಪ್ಪಿ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ. ಎದೆ ಹಾಗೂ ತಲೆಗೆ ತೀವ್ರವಾಗಿ ಪೆಟ್ಟು ಬಿದ್ದಿದ್ದರಿಂದ ಶಿವಪ್ರಸಾದ್‌ ಸ್ಥಳದಲ್ಲೇ ಅಸುನೀಗಿದ. ದುರದೃಷ್ಟಕರ ಸಂಗತಿ ಎಂದರೆ ಮೀಸೆಭೈರಣ್ಣ ಅವರಿಗೆ ಒಂದು ಹೆಣ್ಣು ಹಾಗೂ ಒಂದು ಗಂಡು ಮಕ್ಕಳಿದ್ದು, ಮಗಳು ಕೆಲವೇ ತಿಂಗಳ ಹಿಂದೆ ಸಾವನ್ನಪ್ಪಿದ್ದಳು. ಈಗ ಇದ್ದೊಬ್ಬ ಮಗನನ್ನೂ ಕಳೆದುಕೊಂಡ ದಂಪತಿ ಅನಾಥರಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ