* ಆರ್.ಶ್ರೀಧರ್ ರಾಮನಗರ
ಸ್ವಚ್ಛ ಸರ್ವೇಕ್ಷಣೆ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು ಮೈಸೂರು ಜಿಲ್ಲೆ ಬೀಗುತ್ತಿದ್ದರೆ, ಮುಖ್ಯಮಂತ್ರಿಗಳ ಸ್ವ ಕ್ಷೇತ್ರವಾದ ರಾಮನಗರ ಜಿಲ್ಲೆಯಲ್ಲಿನ ಅಧಿಕಾರಿಗಳಿಗೆ ಸರ್ವೇಕ್ಷಣೆ ಪ್ರಶಸ್ತಿ ಬಗ್ಗೆ ಕನಿಷ್ಟ ಜ್ಞಾನವು ಇಲ್ಲದಿರುವುದುಇಡೀ ವ್ಯವಸ್ಥೆಯನ್ನೇ ಅಣಕಿಸುವಂತಿದೆ.
ಜನರಿಗೆ ಹೇಗೆ ತಿಳಿಸುತ್ತಾರೆ?
ದೇಶದ ಎಲ್ಲ ಸ್ಥಳೀಯ ಸಂಸ್ಥೆಗಳು ಈ ಸರ್ವೇಕ್ಷಣೆಯಲ್ಲಿ ಭಾಗವಹಿಸಬಹುದು. ಜನರು ಕೂಡ ತಮ್ಮ ಊರು ಹಾಗೂ ಜಿಲ್ಲೆಯ ಪರ ಮತ ಚಲಾಯಿಸಬಹುದು. ಆದರೆ, ರಾಮನಗರದ ದುರ್ದೈವ ಹೇಗಿದೆ ಎಂದರೆ, ಸ್ವಚ್ಛ ಸರ್ವೇಕ್ಷಣೆ ಬಗ್ಗೆ ಸ್ಥಳೀಯ ಸಂಸ್ಥೆಗಳು ಮಾಹಿತಿಯನ್ನೇ ಕಲೆ ಹಾಕಿಲ್ಲ. ಜಿಲ್ಲೆಯ ಅಧಿಕಾರಿಗಳ ಅಜ್ಞಾನ ಮತ್ತು ನಿರ್ಲಕ್ಷ್ಯದ ಬಗ್ಗೆ ಜ.31ರಂದು ವಿಜಯ ಕರ್ನಾಟಕ ವಿಶೇಷ ವರದಿ ಪ್ರಕಟಿಸಿತ್ತು. ಆದರೆ, ಇದೀಗ ಪ್ರಶಸ್ತಿಯ ಪಟ್ಟಿ ಇರಲಿ, ಟಾಪ್ 100ರ ಪಟ್ಟಿಯಲ್ಲಿಯು ಜಿಲ್ಲೆಯ ಉಲ್ಲೇಖವೇ ಇಲ್ಲದಿರುವುದು ಸ್ಥಳೀಯ ಸಂಸ್ಥೆಗಳ ಆಡಳಿತ ವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ.
5 ವಿಧದಲ್ಲಿ ಪ್ರಶಸ್ತಿ
ಭಾರತದ ಮಧ್ಯಮ ಸ್ವಚ್ಛತಾ ನಗರ, ಅತ್ಯಂತ ವೇಗವಾಗಿ ಬದಲಾಗುವ ಮಧ್ಯಮ ನಗರ, ಸಾರ್ವಜನಿಕರ ಮತಗಳ ಆಧಾರದ ಮೇಲೆ ಉತ್ತಮ ನಗರಿ, ಹೊಸ ತಂತ್ರಜ್ಞಾನ ಅಳವಡಿಕೆಯಲ್ಲಿಮಧ್ಯಮ ನಗರ ಹಾಗೂ ಕಸ ವಿಲೇವಾರಿಯನ್ನು ಉತ್ತಮವಾಗಿ ಅಳವಡಿಸಿಕೊಂಡಿರುವ ಮಧ್ಯಮ ನಗರ.ಹೀಗೆ 5 ವಿಧದಲ್ಲೂ ಕ್ರೂಢಿಕರಿಸಿ ಪಡೆಯುವ ಸ್ವಚ್ಛ ಸರ್ವೇಕ್ಷಣೆ ಪ್ರಶಸ್ತಿಯಲ್ಲಿ ಮಧ್ಯಪ್ರದೇಶದ ಇಂಧೋರ್ ಮೊದಲ ಸ್ಥಾನ ಪಡೆದರೆ, ಅಬಿಂಕಾಪುರ ಎರಡನೇ ಸ್ಥಾನ ಹಾಗೂ ಕರ್ನಾಟಕದ ಮೈಸೂರು ಮಹಾನಗರ ಪಾಲಿಗೆ ಮೂರನೇ ಸ್ಥಾನ ಪಡೆದುಕೊಂಡಿದೆ.
ಸ್ವಚ್ಛ ಸರ್ವೇಕ್ಷಣೆ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು ಮೈಸೂರು ಜಿಲ್ಲೆ ಬೀಗುತ್ತಿದ್ದರೆ, ಮುಖ್ಯಮಂತ್ರಿಗಳ ಸ್ವ ಕ್ಷೇತ್ರವಾದ ರಾಮನಗರ ಜಿಲ್ಲೆಯಲ್ಲಿನ ಅಧಿಕಾರಿಗಳಿಗೆ ಸರ್ವೇಕ್ಷಣೆ ಪ್ರಶಸ್ತಿ ಬಗ್ಗೆ ಕನಿಷ್ಟ ಜ್ಞಾನವು ಇಲ್ಲದಿರುವುದುಇಡೀ ವ್ಯವಸ್ಥೆಯನ್ನೇ ಅಣಕಿಸುವಂತಿದೆ.
ಜನರಿಗೆ ಹೇಗೆ ತಿಳಿಸುತ್ತಾರೆ?
ದೇಶದ ಎಲ್ಲ ಸ್ಥಳೀಯ ಸಂಸ್ಥೆಗಳು ಈ ಸರ್ವೇಕ್ಷಣೆಯಲ್ಲಿ ಭಾಗವಹಿಸಬಹುದು. ಜನರು ಕೂಡ ತಮ್ಮ ಊರು ಹಾಗೂ ಜಿಲ್ಲೆಯ ಪರ ಮತ ಚಲಾಯಿಸಬಹುದು. ಆದರೆ, ರಾಮನಗರದ ದುರ್ದೈವ ಹೇಗಿದೆ ಎಂದರೆ, ಸ್ವಚ್ಛ ಸರ್ವೇಕ್ಷಣೆ ಬಗ್ಗೆ ಸ್ಥಳೀಯ ಸಂಸ್ಥೆಗಳು ಮಾಹಿತಿಯನ್ನೇ ಕಲೆ ಹಾಕಿಲ್ಲ. ಜಿಲ್ಲೆಯ ಅಧಿಕಾರಿಗಳ ಅಜ್ಞಾನ ಮತ್ತು ನಿರ್ಲಕ್ಷ್ಯದ ಬಗ್ಗೆ ಜ.31ರಂದು ವಿಜಯ ಕರ್ನಾಟಕ ವಿಶೇಷ ವರದಿ ಪ್ರಕಟಿಸಿತ್ತು. ಆದರೆ, ಇದೀಗ ಪ್ರಶಸ್ತಿಯ ಪಟ್ಟಿ ಇರಲಿ, ಟಾಪ್ 100ರ ಪಟ್ಟಿಯಲ್ಲಿಯು ಜಿಲ್ಲೆಯ ಉಲ್ಲೇಖವೇ ಇಲ್ಲದಿರುವುದು ಸ್ಥಳೀಯ ಸಂಸ್ಥೆಗಳ ಆಡಳಿತ ವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ.
5 ವಿಧದಲ್ಲಿ ಪ್ರಶಸ್ತಿ
ಭಾರತದ ಮಧ್ಯಮ ಸ್ವಚ್ಛತಾ ನಗರ, ಅತ್ಯಂತ ವೇಗವಾಗಿ ಬದಲಾಗುವ ಮಧ್ಯಮ ನಗರ, ಸಾರ್ವಜನಿಕರ ಮತಗಳ ಆಧಾರದ ಮೇಲೆ ಉತ್ತಮ ನಗರಿ, ಹೊಸ ತಂತ್ರಜ್ಞಾನ ಅಳವಡಿಕೆಯಲ್ಲಿಮಧ್ಯಮ ನಗರ ಹಾಗೂ ಕಸ ವಿಲೇವಾರಿಯನ್ನು ಉತ್ತಮವಾಗಿ ಅಳವಡಿಸಿಕೊಂಡಿರುವ ಮಧ್ಯಮ ನಗರ.ಹೀಗೆ 5 ವಿಧದಲ್ಲೂ ಕ್ರೂಢಿಕರಿಸಿ ಪಡೆಯುವ ಸ್ವಚ್ಛ ಸರ್ವೇಕ್ಷಣೆ ಪ್ರಶಸ್ತಿಯಲ್ಲಿ ಮಧ್ಯಪ್ರದೇಶದ ಇಂಧೋರ್ ಮೊದಲ ಸ್ಥಾನ ಪಡೆದರೆ, ಅಬಿಂಕಾಪುರ ಎರಡನೇ ಸ್ಥಾನ ಹಾಗೂ ಕರ್ನಾಟಕದ ಮೈಸೂರು ಮಹಾನಗರ ಪಾಲಿಗೆ ಮೂರನೇ ಸ್ಥಾನ ಪಡೆದುಕೊಂಡಿದೆ.