ಆ್ಯಪ್ನಗರ

ಬೈಕ್‌ನಲ್ಲಿ ಬರುತ್ತಿದ್ದ ಚನ್ನಪಟ್ಟಣದ ದಂಪತಿಯನ್ನು ಅಡ್ಡಗಟ್ಟಿ ಸುಲಿಗೆ ಮಾಡಿದ ದರೋಡೆಕೋರರು!

ಚನ್ನಪಟ್ಟಣ ತಾಲೂಕಿನ ನೀಲಕಂಠನಹಳ್ಳಿ ಪ್ರಗತಿ ಸ್ಪೋರ್ಟ್ಸ್ ಕ್ಲಬ್ ಬಳಿ ಘಟನೆ ನಡೆದಿದ್ದು, ತಾಲೂಕಿನ ಎ.ವಿ ಹಳ್ಳಿಯ ಕೃಷ್ಣೇಗೌಡ ಮತ್ತು ಅವರ ಪತ್ನಿ ದರೋಡೆಗೆ ಒಳಗಾದವರು. ಸದ್ಯ ಚನ್ನಪಟ್ಟಣದಲ್ಲಿ ವಾಸವಿರುವ ಕೃಷ್ಣೇಗೌಡ ದಂಪತಿ ತಮ್ಮ ಸ್ವಗ್ರಾಮ ಎ.ವಿ.ಹಳ್ಳಿಗೆ ಹೋಗಿ ಅಲ್ಲಿ ಕೃಷಿ ಮುಗಿಸಿ ವಾಪಸ್ ಆಗುವ ವೇಳೆ ಪಲ್ಸರ್ ಬೈಕ್‌ನಲ್ಲಿ‌ ಬಂದ ಮೂರು ಮಂದಿ‌ ವಿಳಾಸ ಕೇಳುವ ನೆಪದಲ್ಲಿ ಬೈಕ್ ಅಡ್ಡಗಟ್ಟಿದ್ದಾರೆ.

Vijaya Karnataka Web 20 Jan 2022, 2:15 pm
ರಾಮನಗರ: ಬೈಕ್‌ನಲ್ಲಿ ಬಂದ ಮೂರು ಮಂದಿ ದರೋಡೆಕೋರ ಯುವಕರು ಬೈಕ್‌ನಲ್ಲಿ‌ ಬರುತ್ತಿದ್ದ ದಂಪತಿಯನ್ನು ಬೆದರಿಸಿ, ದರೋಡೆ ಮಾಡಿರುವ ಘಟನೆ ಚನ್ನಪಟ್ಟಣ ತಾಲೂಕಿನ ನೀಲಕಂಠನಹಳ್ಳಿಯಲ್ಲಿ ನಡೆದಿದೆ.
Vijaya Karnataka Web crime news


ಚನ್ನಪಟ್ಟಣ ತಾಲೂಕಿನ ನೀಲಕಂಠನಹಳ್ಳಿ ಪ್ರಗತಿ ಸ್ಪೋರ್ಟ್ಸ್ ಕ್ಲಬ್ ಬಳಿ ಘಟನೆ ನಡೆದಿದ್ದು, ತಾಲೂಕಿನ ಎ.ವಿ ಹಳ್ಳಿಯ ಕೃಷ್ಣೇಗೌಡ ಮತ್ತು ಅವರ ಪತ್ನಿ ದರೋಡೆಗೆ ಒಳಗಾದವರು. ಸದ್ಯ ಚನ್ನಪಟ್ಟಣದಲ್ಲಿ ವಾಸವಿರುವ ಕೃಷ್ಣೇಗೌಡ ದಂಪತಿ ತಮ್ಮ ಸ್ವಗ್ರಾಮ ಎ.ವಿ.ಹಳ್ಳಿಗೆ ಹೋಗಿ ಅಲ್ಲಿ ಕೃಷಿ ಮುಗಿಸಿ ವಾಪಸ್ ಆಗುವ ವೇಳೆ ಪಲ್ಸರ್ ಬೈಕ್‌ನಲ್ಲಿ‌ ಬಂದ ಮೂರು ಮಂದಿ‌ ವಿಳಾಸ ಕೇಳುವ ನೆಪದಲ್ಲಿ ಬೈಕ್ ಅಡ್ಡಗಟ್ಟಿದ್ದಾರೆ. ನಂತರ ಕೃಷ್ಙೇಗೌಡರ ಕೊರಳಿಗೆ ಲಾಂಗ್ ಇಟ್ಟು, ಹಣ ನೀಡುವಂತೆ ಒತ್ತಾಯಿಸಿದ್ದಾರೆ.
ಸುಲಿಗೆ ಪ್ರಕರಣದಲ್ಲಿ ಕುಖ್ಯಾತ ರೌಡಿ ಆಕಾಶಭವನ ಶರಣ್‌ ಸಹಿತ ಐವರನ್ನು ಬಂಧಿಸಿದ ಮಂಗಳೂರು ಸಿಸಿಬಿ
ಈ ವೇಳೆ ಕೃಷ್ಣೇಗೌಡ ತಮ್ಮ ಬಳಿ ಹಣವಿಲ್ಲ, ಕೃಷಿ‌ ಕೆಲಸ ಮುಗಿಸಿ ಬರುತ್ತಿದ್ದೇನೆ ಎಂದು ಹೇಳಿದ್ದಾರೆ. ಹಾಗಿದ್ದರೆ ನಿಮ್ಮ ಪತ್ನಿಯ ಕೊರಳಲ್ಲಿನ ಮಾಂಗಲ್ಯ ಸರವನ್ನು ತೆಗೆದುಕೊಡುವಂತೆ ಕೇಳಿದ್ದಾರೆ. ಇದಕ್ಕೆ ಕೃಷ್ಣೇಗೌಡರ ಪತ್ನಿ ಶೃತಿ ಒಪ್ಪದಿದ್ದಾಗ ಕೊರಳಿಗೆ ಕೈ ಹಾಕಿ‌ ಮಂಗಲ್ಯ ಸರ ಕಸಿಯುವ ವೇಳೆ ಸರ ತುಂಡಾಗಿ ಒಂದು ಭಾಗ ದರೋಡೆಕೋರರಿಗೂ ಮತ್ತೊಂದು ಭಾಗ ಶೃತಿ ಕೈಯಲ್ಲಿ ಉಳಿದಿದೆ. ಈ ವೇಳೆ ಯಾರೋ ಬರುತ್ತಿರುವುದನ್ನು ಗಮನಿಸಿ ದರೋಡೆಕೋರರು ಪರಾರಿಯಾಗಿದ್ದಾರೆ.

ಈ ಬಗ್ಗೆ ಚನ್ನಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಿತ್ಯವೂ ಒಂದಿಲ್ಲೊಂದು ಕಡೆ ದರೋಡೆ, ಸರಗಳ್ಳತನ, ಮನೆ ಕಳವು ಪ್ರಕರಣ ಹೆಚ್ಚುತ್ತಿರುವುದು ತಾಲೂಕಿನ ನಾಗರಿಕರನ್ನು ಬೆಚ್ಚಿ ಬೀಳಿಸಿದೆ. ಪ್ರಮುಖ ರಸ್ತೆಗಳು, ಮತ್ತು ಅವುಗಳ ತಿರುವುಗಳಲ್ಲಿ ಉತ್ತಮ ಮಟ್ಟದ ಸಿಸಿ ಟಿವಿಗಳನ್ನು ಅಳವಡಿಸಿ, ಇಂತಹ ಕೃತ್ಯಗಳಿಗೆ ಪೊಲೀಸ್ ಇಲಾಖೆ ಕಡಿವಾಣ ಹಾಕಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ