ಆ್ಯಪ್ನಗರ

ಆಧುನಿಕತೆ ಭರಾಟೆಯಲ್ಲಿ ಕಳೆದ ರಂಗ ಕಲೆ : ಮಂಜುನಾಥ್‌

ಮರೆಯಾಗುತ್ತಿರುವ ರಂಗಕಲೆಗೆ ಪ್ರೊತ್ಸಾಹ ಅಗತ್ಯವಿದೆ ಎಂದು ಡಾ. ರಾಜ್‌ ಕಲಾ ಬಳಗದ ಅಧ್ಯಕ್ಷ ಮಂಜುನಾಥ್‌ ಹೇಳಿದರು.

Vijaya Karnataka 8 Jun 2018, 5:00 am
ಚನ್ನಪಟ್ಟಣ: ಮರೆಯಾಗುತ್ತಿರುವ ರಂಗಕಲೆಗೆ ಪ್ರೊತ್ಸಾಹ ಅಗತ್ಯವಿದೆ ಎಂದು ಡಾ. ರಾಜ್‌ ಕಲಾ ಬಳಗದ ಅಧ್ಯಕ್ಷ ಮಂಜುನಾಥ್‌ ಹೇಳಿದರು.
Vijaya Karnataka Web the last stage art in modernity rush manjunath
ಆಧುನಿಕತೆ ಭರಾಟೆಯಲ್ಲಿ ಕಳೆದ ರಂಗ ಕಲೆ : ಮಂಜುನಾಥ್‌


ಪಟ್ಟಣದ ಶ್ರೀಕೊಲ್ಲಾಪುರದಮ್ಮ ದೇವಸ್ಥಾನದ ಆವರಣದಲ್ಲಿ ನೂತನವಾಗಿ ಶ್ರೀಕೆಂಗಲ್‌ ಆಂಜನೇಯ ಸಾಂಸ್ಕೃತಿಕ ಕಲಾ ಟ್ರಸ್ಟ್‌® ಉದ್ಘಾಟನೆ ನೆರವೇರಿಸಿ ಕುರುಕ್ಷೇತ್ರ ಅಥವಾ ಧರ್ಮರಾಜ್ಯ ಸ್ಥಾಪನೆಯೆಂಬ ಪೌರಾಣಿಕ ನಾಟಕವನ್ನು ಬೆಳ್ಳಿ ಕಿರೀಟ ಪುರಸ್ಕೃತ ಕಲಾ ಕುಸುಮ ಧರ್ಮೇಂದ್ರ ಕುಮಾರ್‌ ನಿರ್ದೇಶನದಲ್ಲಿ ಪ್ರದರ್ಶನ ಮಾಡಲಾಯಿತು.

ಕಲಾ ಪ್ರತಿಭೆ:
ಸಂಘ ಉದ್ಘಾಟಿಸಿ ಮಾತನಾಡಿದ ಅವರು,'ಆಧುನಿಕತೆ ಭರಾಟೆಯಲ್ಲಿ ಯುವ ಸಮುದಾಯ ಮೂಲ ರಂಗ ಕಲೆ ಮರೆಯುತ್ತಿದೆ. ಅದನ್ನು ಉಳಿಸಿ, ಬೆಳೆಸಬೇಕಾದ ಹೊಣೆ ಸಂಘ ಸಂಸ್ಥೆ ಮೇಲಿದೆ. ಶ್ರೀಕೆಂಗಲ್‌ ಆಂಜನೇಯ ಸಾಂಸ್ಕೃತಿಕ ಕಲಾ ಟ್ರಸ್ಟ್‌ ನಮ್ಮ ಸಹೋದರ ಟ್ರಸ್ಟ್‌ ಆಗಿರುತ್ತದೆ. ಪದಾಧಿಕಾರಿಗಳು ಟ್ರಸ್ಟ್‌ನ್ನು ತಾಲೂಕು ಹಂತದಿಂದ ಜಿಲ್ಲಾ-ರಾಜ್ಯ ಅಂತರರಾಜ್ಯ ಮಟ್ಟದವರೆಗೂ ಕಲೆಯನ್ನು ಪ್ರದರ್ಶನ ಮಾಡುವಂತಾಗಲಿ ಹಾಗೂ ಟ್ರಸ್ಟ್‌ನಲ್ಲಿರುವ ಸದಸ್ಯರೆಲ್ಲರೂ ಉತ್ತಮ ಕಲಾವಿದರಾಗಿದ್ದು, ಒಂದಲ್ಲಾ ಒಂದು ಪ್ರತಿಭೆವುಳ್ಳವರು ಆಗಿರುತ್ತಾರೆ,'ಎಂದು ನುಡಿದರು.

ಅಭಿನಂದನೆ: ಇದೇ ಸಂದರ್ಭದಲ್ಲಿ ಶ್ರೀಕೆಂಗಲ್‌ ಆಂಜನೇಯ ಸಾಂಸ್ಕೃತಿಕ ಕಲಾ ಟ್ರಸ್ಟ್‌ವತಿಯಿಂದ ತಾಲೂಕಿನ ಹಿರಿಯ ಕಲಾವಿದರಿಗೆ 2018ನೇ ಸಾಲಿನ ನೀಡಲಿರುವ ಬೊಂಬೆ ನಾಡು ಕಲಾ ರತ್ನ ಪ್ರಶಸ್ತಿಯನ್ನು ಗೋಪಾಲಗೌಡರಿಗೆ ನೀಡಲಾಯಿತು. ಪ್ರಶಸ್ತಿಯ ಜತೆಗೆ ಭಿನ್ನವತ್ತಳೆ 5000 ರೂ. ನಗದು , ಫಲತಾಂಬೂಲ ಶಾಲು ಹೊದಿಸಿ, ಕಲಾವಿದ ದಯಾನಂದ್‌ ನೀಡಿರುವ ಬೆಳ್ಳಿ ಕಡಗವನ್ನು ಕೈಗೆ ತೊಡಿಸಿ ಅಭಿನಂದಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಡಾ. ರಾಜ್‌ ಕಲಾ ಬಳಗದ ಮಂಜುನಾಥ್‌, ಮಹೇಶ್‌, ರವೀಶ್‌, ಕೂಡ್ಲೂರು ಜಿ. ವೆಂಕಟೇಶ್‌, ಸಿದ್ದಲಿಂಗಯ್ಯ, ಕಲಾವಿದರಾದ ಕೃಷ್ಣಪ್ಪ, ಅಂಬರೀಷ್‌, ವಸಂತಕುಮಾರ್‌, ಅಶೋಕ್‌ ಪ್ರಭು, ಶಿವಲಿಂಗಯ್ಯ, ರಂಗನಾಥ್‌, ನಟರಾಜ್‌, ಬಿ.ಎನ್‌.ಕಾಡಯ್ಯ, ಗೋವಿಂದಪ್ಪ, ಸಿಂ.ಲಿಂ.ನಾಗರಾಜು, ವಿಜಯ್‌ ಕುಮಾರ್‌, ಎಂ.ಎನ್‌.ರವಿಕುಮಾರ್‌, ನರಸಿಂಹಯ್ಯ, ಸಿದ್ದರಾಜು, ಶಿವಕುಮಾರ್‌ ತಾಲೂಕಿನ ಕಲಾವಿದರು ಸಮಾರಂಭದಲ್ಲಿ ಭಾಗವಹಿಸಿದ್ದರು. ಟ್ರಸ್ಟ್‌ನ ಪದಾಧಿಕಾರಿ ಪಿ.ಗುರುಮಾದಯ್ಯ ಗೌರವಾಧ್ಯಕ್ಷ ರು, ಪಿ.ವಿಜೇಂದ್ರ ಅಧ್ಯಕ್ಷ ರು, ಬಿ.ಕೆ. ತೇಜಸ್ಸು ಉಪಾಧ್ಯಕ್ಷ ರು, ಹೆಚ್‌.ಎಂ. ರಾಜು ಕಾರ್ಯದರ್ಶಿ, ರವೀಶ್‌, ಸಂಘನಾ ಕಾರ್ಯದರ್ಶಿ, ದಯಾನಂದ್‌ ಖಜಾಂಚಿ, ಕಿರಣ್‌ ಕುಮಾರ್‌, ಪ್ರಕಾಶ್‌, ಸಿ.ಎಂ. ರವಿಕುಮಾರ್‌, ಹೆಚ್‌.ಆರ್‌. ರಾಮಣ್ಣ, ಅನಿಲ್‌ ಕುಮಾರ್‌, ಜಿ.ಸಿ. ಭಾಗ್ಯಮ್ಮ ಮತ್ತು ಆರ್‌. ಲಕ್ಷ್ಮೀ, ಸಿದ್ದಲಿಂಗು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ