ಆ್ಯಪ್ನಗರ

ಸೋಮಾರಿ ಕಟ್ಟೆಯಾದ ಬಿಡದಿ ಬಸ್‌ ನಿಲ್ದಾಣ

ಸಾರಿಗೆ ಸಂಸ್ಥೆ ಬಸ್‌ಗಳ ನಿಲುಗಡೆಗಾಗಿ ಬಿಡದಿಯಲ್ಲಿ ನಿರ್ಮಿಸಿರುವ ತಂಗುದಾಣವು ಸೋಮಾರಿ ಕಟ್ಟೆಯಾಗಿರುವ ಜತೆಗೆ ದ್ವಿಚಕ್ರ ವಾಹನಗಳ ಪಾರ್ಕಿಂಗ್‌ ತಾಣವಾಗಿದೆ. ಇಲ್ಲೇ ಇರುವ ಸರ್ವಿಸ್‌ ರಸ್ತೆ ಕೂಡ ಖಾಸಗಿ ವಾಹನಗಳಿಗೆ ಆಶ್ರಯವಾಗಿದ್ದು, ಇದರಿಂದ ಪ್ರಯಾಣಿಕರು ನಿತ್ಯ ಅನುಭವಿಸುತ್ತಿರುವ ಕಿರಿಕಿರಿ ಅಷ್ಟಿಷ್ಟಲ್ಲ.

Vijaya Karnataka 14 May 2019, 5:00 am
ಬಿಡದಿ: ಸಾರಿಗೆ ಸಂಸ್ಥೆ ಬಸ್‌ಗಳ ನಿಲುಗಡೆಗಾಗಿ ಬಿಡದಿಯಲ್ಲಿ ನಿರ್ಮಿಸಿರುವ ತಂಗುದಾಣವು ಸೋಮಾರಿ ಕಟ್ಟೆಯಾಗಿರುವ ಜತೆಗೆ ದ್ವಿಚಕ್ರ ವಾಹನಗಳ ಪಾರ್ಕಿಂಗ್‌ ತಾಣವಾಗಿದೆ. ಇಲ್ಲೇ ಇರುವ ಸರ್ವಿಸ್‌ ರಸ್ತೆ ಕೂಡ ಖಾಸಗಿ ವಾಹನಗಳಿಗೆ ಆಶ್ರಯವಾಗಿದ್ದು, ಇದರಿಂದ ಪ್ರಯಾಣಿಕರು ನಿತ್ಯ ಅನುಭವಿಸುತ್ತಿರುವ ಕಿರಿಕಿರಿ ಅಷ್ಟಿಷ್ಟಲ್ಲ.
Vijaya Karnataka Web the lazy bus luggage bus stand
ಸೋಮಾರಿ ಕಟ್ಟೆಯಾದ ಬಿಡದಿ ಬಸ್‌ ನಿಲ್ದಾಣ


ಸವೀರ್‍ಸ್‌ ರಸ್ತೆಯಲ್ಲೇ ಕಾರುಗಳ ನಿಲುಗಡೆ

ಸಾರಿಗೆ ಸಂಸ್ಥೆ ಬಸ್‌ಗಳ ಓಡಾಟಕ್ಕೆ ಮೀಸಲಿರುವ ಸರ್ವಿಸ್‌ ರಸ್ತೆಯು ಖಾಸಗಿ ಕಾರುಗಳ ನಿಲುಗಡೆಗೆ ಸೀಮಿತವಾಗಿದೆ, ಸದಾ ಖಾಸಗಿ ವಾಹನಗಳೇ ತುಂಬಿ ತುಳುಕುವುದರಿಂದ ಬಸ್‌ಗಳು ತಂಗುದಾಣದ ಹತ್ತಿರ ಸುಳಿಯದಂತಾಗಿವೆ, ಸರ್ವಿಸ್‌ ರಸ್ತೆಯಲ್ಲಿ ಬಸ್‌ಗಳು ಸುಳಿಯದ ಕಾರಣ ಪ್ರಯಾಣಿಕರು ರಣ ಬಿಸಿಲಿನಲ್ಲಿ ರಸ್ತೆಯಲ್ಲೇ ನಿಂತು ಕೈ ಅಡ್ಡ ಹಿಡಿದು ಬಸ್‌ ಏರಬೇಕಾದ ಪರಿಸ್ಥಿತಿ ಇದೆ.

ಬೆಂಗಳೂರಿಗೆ ಸಮೀಪದಲ್ಲಿ ವೇಗವಾಗಿ ಅಭಿವೃದ್ಧಿ ಕಾಣುತ್ತಿರುವ ಬಿಡದಿ ಪಟ್ಟಣದಲ್ಲಿ ವಾಹನ ನಿಲುಗಡೆಯೇ ದೊಡ್ಡ ಸಮಸ್ಯೆಯಾಗಿದೆ. ಸೂಕ್ತ ಸ್ಥಳಾವಕಾಶದ ಕೊರತೆಯಿಂದ ಸಂಚಾರ ಆಗಾಗ ಅಸ್ಯವ್ಯಸ್ತವಾಗುತ್ತದೆ, ಹೆದ್ದಾರಿ ಪಕ್ಕದ ಸರ್ವಿಸ್‌ ರಸ್ತೆ ಬದಿಯಲ್ಲಿರುವ ತಟ್ಟೆ ಇಡ್ಲಿ ಹೋಟೆಲ್‌ಗಳಿಗೆ ಬರುವ ವಾಹನಗಳು ಇಡೀ ರಸ್ತೆಯನ್ನು ಆಕ್ರಮಿಸಿಕೊಳ್ಳುತ್ತವೆ, ಇನ್ನು ಪ್ರಯಾಣಿಕರ ತಂಗುದಾಣದಲ್ಲಿ ಖಾಸಗಿಯವರು ಬೈಕ್‌ಗಳನ್ನು ನಿಲ್ಲಿಸುವುದರಿಂದ ಸಾರಿಗೆ ಸಂಸ್ಥೆ ಬಸ್‌ಗಳು ತಂಗುದಾಣದ ಸಮೀಪ ಬರುವುದನ್ನು ನಿಲ್ಲಿಸಿವೆ.

ಹರಟೆ ಕಟ್ಟೆಯಾದ ಬಸ್‌ ನಿಲ್ದಾಣ

ಪ್ರಯಾಣಿಕರಿಗಾಗಿ ರಸ್ತೆ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು-ಮೈಸೂರು ಹೆದ್ದಾರಿಯ ಇಕ್ಕೆಲಗಳ ಆಯಾಕಟ್ಟಿನ ಜಾಗದಲ್ಲಿ ತಂಗುದಾಣಗಳನ್ನು ಸ್ಥಾಪಿಸಿದೆ. ಹಾಗೆಯೇ ಬಿಡದಿ ಪಟ್ಟಣದಲ್ಲೂ ತಂಗುದಾಣವಿದೆ. ಬಸ್‌ ನಿಲ್ದಾಣಕ್ಕೆ ಬಸ್‌ಗಳು ಬರದಂತೆ ಕಾರುಗಳು ಅಡ್ಡ ನಿಂತಿರುವುದರಿಂದ ಇತ್ತ ಬಸ್‌ಗಳು ಸುಳಿಯುವುದಿಲ್ಲ. ಹಾಗಾಗಿ ಅವುಗಳಿಗಾಗಿ ಕಾಯುವ ಪ್ರಯಾಣಿಕರು ಹೆದ್ದಾರಿಯಲ್ಲಿ ನಿಲ್ಲುವುದು ಅನಿವಾರ‍್ಯ. ಇದರ ಲಾಭ ಪಡೆದ ದ್ವಿಚಕ್ರ ವಾಹನ ಸವಾರರು ಬಸ್‌ ನಿಲ್ದಾಣದಲ್ಲೇ ತಮ್ಮ ವಾಹನ ನಿಲ್ಲಿಸಿಕೊಂಡು ಹರಟೆ ಕಟ್ಟೆ ಮಾಡಿಕೊಂಡಿದ್ದಾರೆ. ಸೋಮಾರಿಗಳು ಇಲ್ಲೇ ಮಲಗಿ ಗಡದ್ದು ನಿದ್ದೆ ಹೊಡೆಯುವುದರಿಂದ ಮರಾರ‍ಯದಸ್ಥರು ಈ ಕಡೆ ಸುಳಿಯದಂತಾಗಿದೆ.

ಕಣ್ಣು ಮುಚ್ಚಿ ಕುಳಿತ ಪೊಲೀಸರು

ಬಸ್‌ ತಂಗುದಾಣ ಬಿಡದಿ ಪೊಲೀಸ್‌ ಠಾಣೆ ಸಮೀಪದಲ್ಲೇ ಇದೆ. ಸವೀರ್‍ಸ್‌ ರಸ್ತೆಯಲ್ಲಿ ವಾಹನಗಳ ಬೇಕಾಬಿಟ್ಟಿ ನಿಲುಗಡೆ, ತಂಗುದಾಣದಲ್ಲಿ ದ್ವಿಚಕ್ರ ವಾಹನಗಳ ಪಾರ್ಕಿಂಗ್‌ ಮಾಡಿಕೊಂಡು ಯುವಕರು ಹರಟೆ ಹೊಡೆಯುತ್ತಾ ಕುಳಿತು ಬಸ್‌ ಪ್ರಯಾಣಿಕರಿಗೆ ತೊಂದರೆ ಮಾಡುತ್ತಿದ್ದರೂ, ಪೊಲೀಸರು ಏನೊಂದೂ ಕಾಣದಂತೆ ಸುಮ್ಮನೆ ಇರುವುದು ಅಚ್ಚರಿ ಮೂಡಿಸಿದೆ.

ತಟ್ಟೆ ಇಡ್ಲಿ ಹೋಟೆಲ್‌ಗಳ ಪಾರ್ಕಿಂಗ್‌ ಲಾಟ್‌

ಬಿಡದಿ ಪಟ್ಟಣದಿಂದ ನಿತ್ಯ ಸಹಸ್ರಾರು ಸಂಖ್ಯೆಯಲ್ಲಿ ವಾಹನಗಳು ಹಾಗೂ ಪ್ರಯಾಣಿಕರು ಬೆಂಗಳೂರು ಕಡೆಗೆ ಪ್ರಯಾಣಿಸುವುದುಂಟು, ಬಿಡದಿಯ ಕೆಲವು ತಟ್ಟೆ ಇಡ್ಲಿ ಹೋಟೆಲ್‌ಗಳಿಗೆ ತಿಂಡಿ ತಿನ್ನಲು ಬರುವ ವಾಹನಗಳು ಸವೀರ್‍ಸ್‌ ರಸ್ತೆಯನ್ನು ಪಾರ್ಕಿಂಕ್‌ ಲಾಟ್‌ ಮಾಡಿಕೊಂಡಿವೆ. ಬೆಳಗಿನ ಸಮಯದಲ್ಲಿ ಇಡೀ ಸರ್ವಿಸ್‌ ರಸ್ತೆ ಖಾಸಗಿ ವಾಹನಗಳ ಪಾಲಾಗುತ್ತದೆ, ಹೀಗಾಗಿ ಸಾರಿಗೆ ಸಂಸ್ಥೆ ಬಸ್‌ಗಳು ಸರ್ವಿಸ್‌ ರಸ್ತೆಯನ್ನು ಬಳಕೆ ಮಾಡಲು ಸಾಧ್ಯವಾಗುತ್ತಿಲ್ಲ, ಅನಧಿಕೃತ ಪಾರ್ಕಿಂಗ್‌ ವ್ಯವಸ್ಥೆಯನ್ನು ತೆರವುಗೊಳಿಸಿ ಬಸ್‌ಗಳ ನಿಲುಗಡೆಗೆ ಅವಕಾಶ ಮಾಡಿಕೊಡಬೇಕು ಎನ್ನವುದು ಪ್ರಯಾಣಿಕರು ಮತ್ತು ಸಾರ್ವಜನಿಕರ ಆಗ್ರಹವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ