ಆ್ಯಪ್ನಗರ

ಸಾಲುಮರದ ತಿಮ್ಮಕ್ಕ ಅವರ ಪರಿಸರ ಸೇವೆಗೆ ಮಿಗಿಲಾದುದಿಲ್ಲ

ಸಾಲುಮರದ ತಿಮ್ಮಕ್ಕ ಅವರ ಪರಿಸರ ಸೇವೆಗೆ ಮಿಗಿಲಾದುದಿಲ್ಲ. ಇವರ ಸೇವೆ ಸಾಧನೆ ಯುವ ಪೀಳಿಗೆಗೆ ಮಾದರಿಯಾಗಬೇಕು ಎಂದು ಕೈಮಗ್ಗ ಸಹಕಾರ ಸಂಘದ ಮಾಜಿ ಅಧ್ಯಕ್ಷ ಕೆ ಆರ್‌ ಜಯರಾಮು ಹೇಳಿದರು.

Vijaya Karnataka 14 May 2019, 5:00 am
ಕುದೂರು: ಸಾಲುಮರದ ತಿಮ್ಮಕ್ಕ ಅವರ ಪರಿಸರ ಸೇವೆಗೆ ಮಿಗಿಲಾದುದಿಲ್ಲ. ಇವರ ಸೇವೆ ಸಾಧನೆ ಯುವ ಪೀಳಿಗೆಗೆ ಮಾದರಿಯಾಗಬೇಕು ಎಂದು ಕೈಮಗ್ಗ ಸಹಕಾರ ಸಂಘದ ಮಾಜಿ ಅಧ್ಯಕ್ಷ ಕೆ ಆರ್‌ ಜಯರಾಮು ಹೇಳಿದರು.
Vijaya Karnataka Web the linear timackas environmental service does not exclude
ಸಾಲುಮರದ ತಿಮ್ಮಕ್ಕ ಅವರ ಪರಿಸರ ಸೇವೆಗೆ ಮಿಗಿಲಾದುದಿಲ್ಲ


ಕುದೂರು ವಾಸವಿ ಕಲ್ಯಾಣಮಂಟಪದಲ್ಲಿ ಕರ್ನಾಟಕ ಆರ್ಯವೈಶ್ಯ ಮಹಾಸಭೆ ಯುವ ಪರಿಷತ್‌ ವತಿಯಿಂದ ಸಾಲುಮರದ ತಿಮ್ಮಕ್ಕ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.

ಬಡತನದಲ್ಲೂ ಸಮಾಜಸೇವೆ: ಸಾಲುಮರದ ತಿಮ್ಮಕ್ಕ ಶ್ರೀಮಂತರೇನಲ್ಲ, ಕಡುಬಡತನದಲ್ಲೂ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ಉದ್ದೇಶದಿಂದ ಪರಿಸರ ಸೇವೆಗೆ ನಿಂತರು. ನಾವೆಲ್ಲರೂ ನಮ್ಮ ಸ್ವಂತ ಜಮೀನಿನಲ್ಲಿ ಮರ ಬೆಳೆಸುವುದು ಕಷ್ಟ. ಹೀಗಿರುವಾಗ ಸಾಲುಮರದ ತಿಮ್ಮಕ್ಕ ಅವರು ನಿಸ್ವಾರ್ಥತೆಯಿಂದ ರಸ್ತೆ ಬದಿಯಲ್ಲಿ ನೂರಾರು ಸಸಿಗಳನ್ನು ನೆಟ್ಟು ಅವುಗಳನ್ನು ಪೋಷಣೆ ಮಾಡಿ ಹೆಮ್ಮರವನ್ನಾಗಿಸಿರುವ ಅವರ ಶ್ರಮ ವರ್ಣಿಸಲು ಸಾಧ್ಯವಿಲ್ಲ ಎಂದರು.

ಯುವ ಜನಾಂಗ ಎಚ್ಚೆತ್ತುಕೊಳ್ಳಬೇಕು: ಸಾಲುಮರದ ತಿಮ್ಮಕ್ಕರವರು ಮಾತನಾಡಿ, ಪರಿಸರ ಉಳಿದರೆ ಮಾತ್ರ ನಮ್ಮ ಮುಂದಿನ ಪೀಳಿಗೆಯು ನೆಮ್ಮದಿಯಿಂದ ಬದುಕಲು ಸಾಧ್ಯ, ನಾನು ನನ್ನ ಕೈಲಾದ ಕರ್ತವ್ಯವನ್ನು ನಿರ್ವಹಿಸಿದ್ದೇನೆ. ವಿಶೇಷವಾಗಿ ಯುವಜನಾಂಗವು ಎಚ್ಚೆತ್ತು, ಪರಿಸರ ಸಂರಕ್ಷ ಣೆಗೆ ಮುಂದಾಗಬೇಕೆಂದು ಕರೆ ನೀಡಿದರು.

ಸನ್ಮಾನ: ಬಳಿಕ ನಾಡಿನ ಮಹಾನ್‌ ಸಾಧಕರು ಪದ್ಮಶ್ರೀ ಪುರಸ್ಕೃತರಾದ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕರವರನ್ನು ಕರ್ನಾಟಕ ಆರ್ಯವೈಶ್ಯ ಮಹಾಸಭೆ ಯುವ ಪರಿಷತ್‌ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಕುದೂರು ಲೋಕೇಶ್‌, ರವಿಕುಮಾರ್‌, ಯುವ ಪರಿಷತ್ತಿನ ಛೇರ್ಮನ್‌ ಹೆಚ್‌.ಎಂ.ಸಂದೀಪ್‌, ಕೋ-ಛೇರ್ಮನ್‌ರಾದ ಎಂ.ವಿ.ಅಜಯ್‌ ಕುಮಾರ್‌ ಹಾಗೂ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು.

ತಿಮ್ಮಕ್ಕನ ಸೇವೆ: ಪರಿಸರದ ಸಂರಕ್ಷ ಣೆಯ ದಂತಕಥೆಯಾದ ಸಾಲುಮರದ ತಿಮ್ಮಕ್ಕರವರು ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಕುದೂರಿನಿಂದ ಹುಲಿಕಲ್‌ ಗ್ರಾಮದವರೆಗೆ ನಾಲ್ಕು ಕಿ.ಮೀ.ಗಳ ವರೆಗೆ ಆಲದ ಸಸಿಗಳನ್ನು ನೆಟ್ಟು, ಪೋಷಿಸಿ ಮಕ್ಕಳಂತೆ ಸಾಕಿದ್ದಾರೆ. ಇವರ ಪರಿಸರ ಕಾಳಜಿಯು ಇಂದಿನ ಯುವಪೀಳಿಗೆಗೆ ಪ್ರೇರಣೆಯಾಗಿದೆ. ಇವರಿಗೆ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಇಂತಹ ಆದರ್ಶಪ್ರಾಯ ಮಹನೀಯರಿಗೆ ಗೌರವ ಸಮರ್ಪಣೆಯನ್ನು ಸಲ್ಲಿಸಲಾಯಿತು.

ಸಸಿ ನೆಡುವ ಯೋಜನೆ: ಕರ್ನಾಟಕ ಆರ್ಯವೈಶ್ಯ ಮಹಾಸಭೆಯು ವಾಸವಿ ಜಯಂತಿಯ ಅಂಗವಾಗಿ ಕರ್ನಾಟಕ ರಾಜ್ಯದಾದ್ಯಂತ ಒಂದು ಲಕ್ಷ ಸಸಿ ನೆಡುವ ಕಾರ್ಯಯೋಜನೆಯನ್ನು ಹಮ್ಮಿಕೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ಕರ್ನಾಟಕವನ್ನು ಹಸಿರು ನಾಡನ್ನಾಗಿ ಪರಿವರ್ತಿಸಲು ಸಸಿ ನೆಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು. ಇದರ ಮೂಲಕ ಪರಿಸರ ಸಂರಕ್ಷ ಣೆಗಾಗಿ ಪಣತೊಡಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ