ಆ್ಯಪ್ನಗರ

ತಪ್ಪದ ಕೋಳಿ ತ್ಯಾಜ್ಯದ ವಾಸನೆ, ಗ್ರಾಪಂ ಆದೇಶಕ್ಕೂ ಬೆಲೆಯಿಲ್ಲ

ಕುದೂರು ಬೈಪಾಸ್‌ ರಸ್ತೆಯಲ್ಲಿ ಕೋಳಿಕಸವನ್ನು ಪದೇಪದೆ ವಿಲೇವಾರಿ ಮಾಡುತ್ತಿದ್ದು ಗ್ರಾಪಂ ಎರಡು ಬಾರಿ ಸ್ವಚ್ಛಗೊಳಿಸಿ ಎಚ್ಚರಿಸಿದ್ದರೂ ಗ್ರಾಪಂ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲದಂತಾಗಿದೆ. ಹೀಗಾಗಿ ರಸ್ತೆಯಲ್ಲಿ ಮೂಗು ಮುಚ್ಚಿಕೊಂಡು ಓಡಾಡಬೇಕಾದ ಪರಿಸ್ಥಿತಿ ಸಾರ್ವಜನಿಕರಿಗೆ ಉಂಟಾಗಿದೆ.

Vijaya Karnataka 15 Mar 2019, 5:00 am
ಕುದೂರು: ಕುದೂರು ಬೈಪಾಸ್‌ ರಸ್ತೆಯಲ್ಲಿ ಕೋಳಿಕಸವನ್ನು ಪದೇಪದೆ ವಿಲೇವಾರಿ ಮಾಡುತ್ತಿದ್ದು ಗ್ರಾಪಂ ಎರಡು ಬಾರಿ ಸ್ವಚ್ಛಗೊಳಿಸಿ ಎಚ್ಚರಿಸಿದ್ದರೂ ಗ್ರಾಪಂ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲದಂತಾಗಿದೆ. ಹೀಗಾಗಿ ರಸ್ತೆಯಲ್ಲಿ ಮೂಗು ಮುಚ್ಚಿಕೊಂಡು ಓಡಾಡಬೇಕಾದ ಪರಿಸ್ಥಿತಿ ಸಾರ್ವಜನಿಕರಿಗೆ ಉಂಟಾಗಿದೆ.
Vijaya Karnataka Web the odor of chicken waste irritate to people
ತಪ್ಪದ ಕೋಳಿ ತ್ಯಾಜ್ಯದ ವಾಸನೆ, ಗ್ರಾಪಂ ಆದೇಶಕ್ಕೂ ಬೆಲೆಯಿಲ್ಲ


ರಸ್ತೆಯ ಅಲ್ಲಲ್ಲಿ ಪದೇಪದೆ ರಾಶಿ ರಾಶಿ ಕೋಳಿಕಸವನ್ನು ಎಸೆಯುತ್ತಿದ್ದು, ಇದರ ದುರ್ವಾಸನೆಗೆ ರಸ್ತೆಯ ಅಕ್ಕಪಕ್ಕದ ನಿವಾಸಿಗಳ ಪಾಡು ಹೇಳತೀರದಾಗಿದೆ. ಕೋಳಿ ಕಸದ ವಾಸನೆಗೆ ನಾಯಿಗಳ ಹಾವಳಿ ಕೂಡ ಹೆಚ್ಚಾಗಿದ್ದು, ವಾಹನಸವಾರರು ಪರದಾಡುವಂತಾಗಿದೆ. ಇದರಿಂದ ಕೂಗಳತೆಯ ದೂರಲ್ಲಿ ಶಾಲೆಯಿದ್ದು, ನಿತ್ಯ ನೂರಾರು ಮಕ್ಕಳು ಹಾಗೂ ಪೋಷಕರು ಈ ರಸ್ತೆಯ ಮೂಲಕ ಓಡಾಡುತ್ತಿರುತ್ತಾರೆ. ಕಸದ ವಾಸನೆ ಹಾಗೂ ನಾಯಿ ಹಾವಳಿಯಿಂದ ಮಾರ್ಗ ಬದಲಿಸಿ ಓಡಾಡಬೇಕಾದ ಅನಿವಾರ್ಯತೆ ಉಂಟಾಗಿದೆ.

ಗ್ರಾಪಂ ಆದೇಶಕ್ಕೆ ಕಿಮ್ಮತ್ತಿಲ್ಲ: ಗ್ರಾಪಂ ವತಿಯಿಂದ ಬೈಪಾಸ್‌ ರಸ್ತೆಯನ್ನು ಇದೇ ಕಾರಣಕ್ಕಾಗಿ ಎರಡು ಮೂರು ಬಾರಿ ಸ್ವಚ್ಛಗೊಳಿಸಿ ಸಾರ್ವಜನಿಕರಿಗೆ ಅನೂಕೂಲ ಕಲ್ಪಿಸಲಾಗಿದೆ. ಅಲ್ಲದೇ ಇಲ್ಲಿ ಕಸ ವಿಲೇವಾರಿ ಮಾಡದಂತೆ ಎಚ್ಚರಿಕೆ ನೀಡಿದರೂ ಗ್ರಾಪಂ ಮಾತಿಗೆ ಮನ್ನಿಸದೇ ಸ್ವಚ್ಛಗೊಳಿಸಿ ಒಂದೆರಡುವಾರ ಸುಮ್ಮನಿದ್ದು, ನಂತರ ಅದೇ ಚಾಳಿಯನ್ನು ಮುಂದುವರಿಸಿಕೊಂಡು ಬರಲಾಗುತ್ತಿದೆ. ರಾತ್ರಿ ವೇಳೆಯಲ್ಲಿ ಕಸ ತಂದು ಸುರಿಯುತ್ತಿದ್ದು ಗ್ರಾಪಂ ವತಿಯಿಂದ ಆರಕ್ಷ ಕ ಠಾಣೆಗೆ ದೂರು ನೀಡಿ ಎಲ್ಲೆಂದರಲ್ಲಿ ಕಸ ವಿಲೇವಾರಿ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ಗ್ರಾಪಂ ಮುಂದಾಗಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಓಡಾಡುವುದೇ ಕಷ್ಟ: ವಾಹನ ಸವಾರರಿಗೆ ಒಂದು ರೀತಿಯ ಹಿಂಸೆಯಾದರೆ ಇನ್ನೂ ನಡೆದು ಕೊಂಡು ಓಡಾಡುವವರಿಗೆ ಈ ರಸ್ತೆ ನರಕಯಾತನೆಯನ್ನು ತೋರಿಸುತ್ತದೆ. ಕೋಳಿ ಕಸದ ದುರ್ವಾಸನೆಯ ನಡುವೆ ಮೂಗು ಮುಚ್ಚಿಕೊಂಡು ಹೋಗೋಣವೆಂದರೆ ಹಿಂಡು ಹಿಂಡಾಗಿ ಇರುವ ನಾಯಿಗಳ ಹಾವಳಿಯಿಂದ ತಪ್ಪಿಸಿಕೊಳ್ಳುವುದು ಯಮಯಾತನೆಯೇ ಸರಿ. ಅಲ್ಲದೇ ಕಸ ರಸ್ತೆಯಲ್ಲಿ ಹರಡಿರುವುದರಿಂದ ಚಪ್ಪಲಿಗೆ ಸಿಲುಕಿ ಮನೆಯವರೆಗೂ ಬರುತ್ತದೆ. ಮನೆಗೆ ಬಂದರೂ ಈ ಕಸದ ವಾಸನೆ ನಮ್ಮಿಂದ ದೂರವಾಗುವುದಿಲ್ಲ.

ನಿವಾಸಿಗಳ ಪಾಡು ಹೇಳತೀರದು: ಪಾದಚಾರಿಗಳು ಹಾಗೂ ವಾಹನ ಸವಾರರ ಪಾಡು ಒಂದುರೀತಿಯಾದರೆ ಇನ್ನೂ ರಸ್ತೆಯ ಅಕ್ಕಪಕ್ಕದಲ್ಲಿರುವ ಸ್ಥಳೀಯ ನಿವಾಸಿಗಳು ಇದರ ದುರ್ವಾಸನೆಗೆ ಸದಾ ಬಾಗಿಲು ಕಿಟಕಿಗಳನ್ನು ಬಂದ್‌ ಮಾಡಿಕೊಂಡು ಇರಬೇಕಾದ ಪರಿಸ್ಥಿತಿ ತಲೆದೋರಿದೆ. ಅಲ್ಲದೇ ನಾಯಿಗಳ ಹಾವಳಿಯಿಂದ ಸಾಕು ಪ್ರಾಣಿಗಳು ಹಾಗೂ ಮಕ್ಕಳನ್ನು ನೋಡಿಕೊಳ್ಳುವುದೇ ದೊಡ್ಡ ಕೆಲಸ ಪೋಷಕರಿಗೆ ಆಗಿದೆ. ಆದ್ದರಿಂದ ಕೂಡಲೇ ಗ್ರಾಪಂ ರಸ್ತೆಯಲ್ಲಿ ಕೋಳಿ ಕಸ ವಿಲೇವಾರಿ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ