ಆ್ಯಪ್ನಗರ

ಪಾರ್ಟಿಗೆ ಹೋದ ಯುವಕ ಶವವಾಗಿ ಪತ್ತೆ

ಕಣ್ವ ಜಲಾಶಯದಲ್ಲಿ ಯುವಕನೊಬ್ಬ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾನೆ ತಾಲೂಕಿನ ಕ್ಯಾಸಾಪುರ ಗ್ರಾಮದ ಲಿಂಗರಾಜು (32) ಮೃತ ಯುವಕ...

Vijaya Karnataka 29 Jan 2019, 5:00 am
ರಾಮನಗರ: ಕಣ್ವ ಜಲಾಶಯದಲ್ಲಿ ಯುವಕನೊಬ್ಬ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾನೆ. ತಾಲೂಕಿನ ಕ್ಯಾಸಾಪುರ ಗ್ರಾಮದ ಲಿಂಗರಾಜು (32) ಮೃತ ಯುವಕ.
Vijaya Karnataka Web the young man who went to the party was found dead
ಪಾರ್ಟಿಗೆ ಹೋದ ಯುವಕ ಶವವಾಗಿ ಪತ್ತೆ


ಶನಿವಾರ ರಾತ್ರಿ ಕಣ್ವ ಜಲಾಶಯದ ಬಳಿಗೆ ಸ್ನೇಹಿತರೊಂದಿಗೆ ತೆರಳಿದ್ದ ಲಿಂಗರಾಜು, ಸೋಮವಾರ ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾನೆ.

ಶನಿವಾರ ರಾತ್ರಿ ಸ್ನೇಹಿತರೆಲ್ಲಾ ಸೇರಿ ಕಣ್ವ ಜಲಾಶಯದ ಬಳಿ ಮೋಜು-ಮಸ್ತಿ ಮಾಡಿದ್ದರು. ಸ್ನೇಹಿತರಾದ ಸ್ವಾಮಿ, ರಘು, ಕೃಷ್ಣಪ್ಪ ಮನೆಗಳಿಗೆ ಮರಳಿದ್ದರೂ, ಲಿಂಗರಾಜು ಮಾತ್ರ ನಾಪತ್ತೆಯಾಗಿದ್ದ.

ಇದರಿಂದ ಅನುಮಾನಗೊಂಡ ಪೋಷಕರು ಎಲ್ಲೆಡೆ ಹುಡುಕಾಡಿದ್ದಾರೆ. ಲಿಂಗರಾಜು ಧರಿಸಿದ್ದ ಬಟ್ಟೆ, ಪಾರ್ಟಿಗೆ ಬಳಸಿದ್ದ ಪಾತ್ರೆಗಳು, ಆತನ ಚಪ್ಪಲಿಗಳ ಜಲಾಶಯದ ಪಕ್ಕದಲ್ಲೇ ಇದ್ದ ಕಾರಣ ಜಲಾಶಯದಲ್ಲಿ ಹುಡುಕಾಡಿದಾಗ ಶವ ಪತ್ತೆಯಾಗಿದೆ.

ಲಿಂಗರಾಜು ಮೊಬೈಲ್‌ ಭಾನುವಾರ ಮಧ್ಯಾಹ್ನದವರೆಗೆ ರಿಂಗ್‌ ಆಗಿದೆ. ನಂತರ ಸ್ವಿಚ್‌ ಆಫ್‌ ಆಗಿದೆ. ಲಿಂಗರಾಜು ಅತ್ಯುತ್ತಮ ಈಜುಗಾರನಾಗಿದ್ದ, ಅಲ್ಲದೇ, ಮೀನು ಹಿಡಿಯುವಲ್ಲಿ ನುರಿತನಾಗಿದ್ದ ಎನ್ನಲಾಗಿದೆ. ಹೀಗಾಗಿ ಸಾವಿನ ಬಗ್ಗೆ ಪೋಷಕರು ಶಂಕೆ ವ್ಯಕ್ತಪಡಿಸಿದ್ದು, ಸೂಕ್ತ ತನಿಖೆ ನಡೆಸುವಂತೆ ಮೃತನ ಪೋಷಕರಾದ ರಾಮಚಂದ್ರ ಮತ್ತು ಕುಸುಮ ದಂಪತಿ ಚನ್ನಪಟ್ಟಣದ ಎಂಕೆ ದೊಡ್ಡಿ ಪೊಲೀಸ್‌ ಠಾಣೆಗೆ ದೂರು ಸಲ್ಲಿಸಿದ್ದಾರೆ. ಮೃತರ ಅಂತ್ಯಕ್ರಿಯೆ ಸ್ವ ಗ್ರಾಮದಲ್ಲಿ ಸೋಮವಾರ ನಡೆಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ