ಆ್ಯಪ್ನಗರ

ಡಿಕೆ ಸಹೋದರರಂತಹ ಭ್ರಷ್ಟರು ಮತ್ತೊಬ್ಬರಿಲ್ಲ: ಬಿಜೆಪಿ

ಡಿಕೆ ಸಹೋದರರು ದೇಶ ಕಂಡ ಅತ್ಯಂತ ಭ್ರಷ್ಟ ರಾಜಕಾರಣಿಗಳು...

Vijaya Karnataka 6 Apr 2019, 5:00 am
ಹಾರೋಹಳ್ಳಿ (ಕನಕಪುರ ತಾ.): ಡಿಕೆ ಸಹೋದರರು ದೇಶ ಕಂಡ ಅತ್ಯಂತ ಭ್ರಷ್ಟ ರಾಜಕಾರಣಿಗಳು. ಅವರಿಬ್ಬರೂ ರಾಜ್ಯದ ಅಭಿವೃದ್ಧಿ ಮರೆತು ಉಡಾಫೆಯಿಂದ ವರ್ತಿಸುತ್ತಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಅಶ್ವತ್ಥ್‌ ನಾರಾಯಣ್‌ ಕಿಡಿಕಾರಿದರು.
Vijaya Karnataka Web there are no other corrupt people like dk brothers bjp
ಡಿಕೆ ಸಹೋದರರಂತಹ ಭ್ರಷ್ಟರು ಮತ್ತೊಬ್ಬರಿಲ್ಲ: ಬಿಜೆಪಿ


ಹಾರೋಹಳ್ಳಿಯಲ್ಲಿ ಬಿಜೆಪಿ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮೇಕೆದಾಟುವಿನಲ್ಲಿ ಕುಡಿಯುವ ನೀರು ಮತ್ತು ವಿದ್ಯುತ್‌ ಉತ್ಪಾದನೆ ಯೋಜನೆಗೆ ಕೇಂದ್ರ ಸರಕಾರ ಒಪ್ಪಿಗೆ ನೀಡಿದ್ದರೂ, ಕಾಮಗಾರಿ ಮುಂದುವರಿಸಲು ಬೇಕಾದ ಕೆಲಸವನ್ನು ರಾಜ್ಯ ಸರಕಾರ ಮಾಡಿಲ್ಲ. ಅದು ಬಿಟ್ಟು ಕೇಂದ್ರದ ವಿರುದ್ಧ ವೃಥಾರೋಪ ಮಾಡುತ್ತಾ ಕಾಲಹರಣ ಮಾಡುತ್ತಿದ್ದಾರೆ ಎಂದು ದೂರಿದರು.

ಕೇಂದ್ರದಿಂದ ಭರಪೂರ ನೆರವು: ಬೆಂಗಳೂರು-ಮೈಸೂರು ನಡುವೆ ಷಟ್ಪಥ ನಿರ್ಮಾಣಕ್ಕೆ ಕೇಂದ್ರ 580 ಕೋಟಿ ರೂ. ಬಿಡುಗಡೆ ಮಾಡಿದೆ. ಹನಿ ನೀರಾವರಿ ಅಭಿವೃದ್ಧಿಗೆ 12 ಸಾವಿರ ಕೋಟಿ ನೀಡಿದೆ. ರಾಜ್ಯಕ್ಕೆ ಬೇಕಾದ ಹೆಚ್ಚುವರಿ ಅನುದಾನಗಳು ಮತ್ತು ಅಭಿವೃದ್ಧಿ ಕುರಿತು ಸಂಸತ್ತಿನಲ್ಲಿ ಬಾಯಿ ಬಿಚ್ಚದ ಡಿಕೆಸು, ಕ್ಷೇತ್ರದಲ್ಲಿ ಜಂಭಕೊಚ್ಚಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಸೌರ ಘಟಕದಲ್ಲೂ ಅವ್ಯವಹಾರ: ಜಿಲ್ಲೆಯ ಕಟುಕನಪಾಳ್ಯದ ಬಳಿ ನಿರ್ಮಾಣ ಮಾಡಲಾಗಿರುವ ಸೋಲಾರ್‌ ಪ್ಲಾಂಟ್‌ನಲ್ಲಿ ಭಾರಿ ಅವ್ಯವಹಾರ ನಡೆದಿದೆ. ಇದರಿಂದ ಯೋಜನೆ ನನೆಗುದಿಗೆ ಬಿದ್ದಿದೆ. ಈ ಬಗ್ಗೆ ಸಮಗ್ರ ತನಿಖೆಗೆ ಆಗ್ರಹಿಸಲಾಗುತ್ತದೆ ಎಂದು ಅವರು ಹೇಳಿದರು.

ಕೋರ್ಟ್‌ಗೆ ಅಲೆದಾಟ: ಅಮಾಯಕ ಜನರ ಮುಂದೆ ಅಭಿವೃದ್ಧಿ ಮಂತ್ರಪಠಿಸಿ ಮೂರ್ಖರನ್ನಾಗಿಸುತ್ತಿರುವ ಡಿಕೆ ಸಹೋದರರು, ಅಕ್ರಮ ಗಣಿಗಾರಿಕೆ, ಅರಣ್ಯ ಕಾಯ್ದೆ ಉಲ್ಲಂಘನೆ, ಅಕ್ರಮ ಡಿ ನೋಟಿಫಿಕೇಷನ್‌, ಪರಿಸರ ನಾಶ, ಬೇನಾಮಿ ಆಸ್ತಿ, ಅಕ್ರಮ ಸಂಪತ್ತು ಸೇರಿದಂತೆ ಹಲವು ಪ್ರಕರಣಗಳನ್ನು ಎದುರಿಸುತ್ತಿದ್ದು, ನಿತ್ಯ ಕೋರ್ಟ್‌ಗಳಿಗೆ ಅಲೆದಾಡುತ್ತಿದ್ದಾರೆ. ತಮ್ಮ ಮೈತುಂಬಾ ಹಗರಣದ ಕಳಂಕ ಹೊತ್ತಿರುವ ಇವರು, ಮೋದಿ ಅವರ ಮೇಲೆ ವೃಥಾರೋಪ ನಡೆಸುತ್ತಿರುವುದು ಹಾಸ್ಯಾಸ್ಪದ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ರುದ್ರೇಶ್‌, ಪ್ರಧಾನ ಕಾರ್ಯದರ್ಶಿ ಮುರಳೀಧರ್‌, ಹಿಂದುಳಿದ ವರ್ಗದ ಅಧ್ಯಕ್ಷ ಜಿ.ನಾಗರಾಜು ಹಲವು ಮುಖಂಡರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ