ಒಕ್ಕಲಿಗ ಸಮುದಾಯಕ್ಕೆ ಅಧಿಕಾರ ಪೂರೈಸಲಾಗದ ಶಾಪ ಇದೆ; ಎಚ್ಡಿ ಕುಮಾರಸ್ವಾಮಿ
ಎರಡು ಬಾರಿ ಸಿಎಂ ಆದರೂ, ಪೂರ್ಣಾವಧಿ ಅಧಿಕಾರ ನಡೆಸಲು ಸಾಧ್ಯವಾಗದೇ ಇರುವುದಕ್ಕೆ ದೇವರ ಶಾಪ ಕಾರಣ. ಸಂಕ್ರಾಂತಿ ಬಳಿಕ ದೇವರಿಗೆ ತಪ್ಪು ಕಾಣಿಕೆ ಕಟ್ಟಿ, ದೇವರ ಆಶೀರ್ವಾದ ಪಡೆದು ಹೊಸ ರಾಜಕೀಯ ಪರ್ವ ಆರಂಭಿಸುವುದಾಗಿ ಎಚ್ಡಿಕೆ ಕೆಲವು ದಿನಗಳ ಹಿಂದೆ ಹೇಳಿದ್ದರು. ಅದರಂತೆ ಶುಕ್ರವಾರ ರಾಮನಗರ ಚಾಮುಂಡೇಶ್ವರಿ ಹಾಗೂ ಜಾಲಮಂಗಲದ ಲಕ್ಷ್ಮೀನಾರಾಯಣ ದೇಗುಲಗಳಿಗೆ ಕುಟುಂಬ ಸಮೇತರಾಗಿ ತೆರಳಿ ದೇವರಿಗೆ ₹101 ರೂ. ತಪ್ಪು ಕಾಣಿಕೆ ಕಟ್ಟಿ, ಎಲ್ಲಾ ಅಪರಾಧಗಳನ್ನೂ ಮನ್ನಿಸುವಂತೆ ಬೇಡಿಕೊಂಡರು.
Vijaya Karnataka Web 16 Jan 2021, 7:52 am
ರಾಮನಗರ: ರಾಜ್ಯದ ಮುಖ್ಯಮಂತ್ರಿಯಾಗಿ ಪೂರ್ಣವಾಗಿ 5 ವರ್ಷ ಆಡಳಿತ ನಡೆಸಲಾಗದ ಅಂಟು ಶಾಪ ಒಕ್ಕಲಿಗ ಸಮುದಾಯಕ್ಕಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾಸ್ವಾಮಿ ಹೇಳಿದ್ದಾರೆ.
ರಾಮನಗರ ತಾಲೂಕಿನ ಜಾಲಮಂಗಲ ಗ್ರಾಮದಲ್ಲಿ ಲಕ್ಷ್ಮೀ ನಾರಾಯಣ ಸ್ವಾಮಿಗೆ 101 ರೂ.ಗಳ ತಪ್ಪು ಕಾಣಿಕೆ ಅರ್ಪಿಸಿದ ಬಳಿಕದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ವಿಧಾನಸೌಧ ಕಟ್ಟಿದ ಕೆಂಗಲ್ ಹನುಮಂತಯ್ಯ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸೇರಿದಂತೆ ಒಕ್ಕಲಿಗ ನಾಯಕರು ಯಾರೂ ಪೂರ್ಣಾವಧಿ ಅಧಿಕಾರ ನಡೆಸಿಲ್ಲ ಎಂದರು. 2023ರ ಚುನಾವಣೆಯಲ್ಲಿ ಕೊನೆಯದಾಗಿ ಒಮ್ಮೆ ಪಕ್ಷಕ್ಕೆ ಬಹುಮತ ನೀಡಿ. ವಿಧಾನಸಭೆಗೆ ಈ ಕ್ಷಣವೇ ಚುನಾವಣೆ ನಡೆದರೂ ಎದುರಿಸಲು ನಾವು ಸಿದ್ಧರಿದ್ದೇವೆ ಎಂದರು.
₹101 ತಪ್ಪು ಕಾಣಿಕೆ: ಎರಡು ಬಾರಿ ಸಿಎಂ ಆದರೂ, ಪೂರ್ಣಾವಧಿ ಅಧಿಕಾರ ನಡೆಸಲು ಸಾಧ್ಯವಾಗದೇ ಇರುವುದಕ್ಕೆ ದೇವರ ಶಾಪ ಕಾರಣ. ಸಂಕ್ರಾಂತಿ ಬಳಿಕ ದೇವರಿಗೆ ತಪ್ಪು ಕಾಣಿಕೆ ಕಟ್ಟಿ, ದೇವರ ಆಶೀರ್ವಾದ ಪಡೆದು ಹೊಸ ರಾಜಕೀಯ ಪರ್ವ ಆರಂಭಿಸುವುದಾಗಿ ಎಚ್ಡಿಕೆ ಕೆಲವು ದಿನಗಳ ಹಿಂದೆ ಹೇಳಿದ್ದರು. ಅದರಂತೆ ಶುಕ್ರವಾರ ರಾಮನಗರ ಚಾಮುಂಡೇಶ್ವರಿ ಹಾಗೂ ಜಾಲಮಂಗಲದ ಲಕ್ಷ್ಮೀನಾರಾಯಣ ದೇಗುಲಗಳಿಗೆ ಕುಟುಂಬ ಸಮೇತರಾಗಿ ತೆರಳಿ ದೇವರಿಗೆ ₹101 ರೂ. ತಪ್ಪು ಕಾಣಿಕೆ ಕಟ್ಟಿ, ಎಲ್ಲಾ ಅಪರಾಧಗಳನ್ನೂ ಮನ್ನಿಸುವಂತೆ ಬೇಡಿಕೊಂಡರು.
ಎಚ್ಡಿಕೆ ಜತೆ ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್, ಸೊಸೆ ರೇವತಿ ಇದ್ದರು. ರಾಮನಗರ ಗೆದ್ದವರು ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ ಎಂಬ ಪ್ರತೀತಿ ಇದೆ. ಈ ಕ್ಷೇತ್ರದ ಮಹತ್ವ ಏನೆಂಬುದು ಅರಿವಿಗೆ ಬರುತ್ತಲೇ ದೇವೇಗೌಡರು ತಮ್ಮ ಪುತ್ರ ಎಚ್ಡಿಕೆ ಅವರಿಗೆ 2004ರ ವಿಧಾನಸಭೆ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ಸ್ಪರ್ಧಿಸಲು ಸೂಚಿಸಿದ್ದರು. ತಂದೆಯ ಅಣತಿಯಂತೆ ಲಕ್ಷ್ಮೀ ನರಸಿಂಹಸ್ವಾಮಿಗೆ ಪೂಜೆ ಸಲ್ಲಿಸಿದ್ದರು. ಸಿಎಂ ಸಹ ಆಗಿದ್ದರು. ಕ್ಷೇತ್ರ ಮರು ವಿಂಗಡನೆಯಲ್ಲಿ ಜಾಲಮಂಗಲ ಗ್ರಾಮ ಮಾಗಡಿ ಕ್ಷೇತ್ರಕ್ಕೆ ಸೇರಿತು. ಎಚ್ಡಿಕೆ ದೇಗುಲಕ್ಕೆ ತೆರಳಿ ದೇವರಿಗೆ ಪೂಜೆ ಸಲ್ಲಿಸಲು ಸಾಧ್ಯವಾಗಿರಲಿಲ್ಲ. ದೇವರ ಸನ್ನಿಧಿಯಲ್ಲಿ ನೀಡಿದ ಭರವಸೆ ಈಡೇರಿಸದ ಹಾಗೂ ದೇಗುಲಕ್ಕೆ ತೆರಳದೇ ಅಪಚಾರವಾಗಿದೆ ಎಂಬ ಅಳಕಿತ್ತು. ಅದನ್ನು ನಿವಾರಿಸುವ ಉದ್ದೇಶದಿಂದ ಎಚ್ಡಿಕೆ ಯಾತ್ರೆ ಕೈಗೊಂಡಿದ್ದಾರೆ.
ರಾಮನಗರ ತಾಲೂಕಿನ ಜಾಲಮಂಗಲ ಗ್ರಾಮದಲ್ಲಿ ಲಕ್ಷ್ಮೀ ನಾರಾಯಣ ಸ್ವಾಮಿಗೆ 101 ರೂ.ಗಳ ತಪ್ಪು ಕಾಣಿಕೆ ಅರ್ಪಿಸಿದ ಬಳಿಕದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ವಿಧಾನಸೌಧ ಕಟ್ಟಿದ ಕೆಂಗಲ್ ಹನುಮಂತಯ್ಯ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸೇರಿದಂತೆ ಒಕ್ಕಲಿಗ ನಾಯಕರು ಯಾರೂ ಪೂರ್ಣಾವಧಿ ಅಧಿಕಾರ ನಡೆಸಿಲ್ಲ ಎಂದರು. 2023ರ ಚುನಾವಣೆಯಲ್ಲಿ ಕೊನೆಯದಾಗಿ ಒಮ್ಮೆ ಪಕ್ಷಕ್ಕೆ ಬಹುಮತ ನೀಡಿ. ವಿಧಾನಸಭೆಗೆ ಈ ಕ್ಷಣವೇ ಚುನಾವಣೆ ನಡೆದರೂ ಎದುರಿಸಲು ನಾವು ಸಿದ್ಧರಿದ್ದೇವೆ ಎಂದರು.
₹101 ತಪ್ಪು ಕಾಣಿಕೆ: ಎರಡು ಬಾರಿ ಸಿಎಂ ಆದರೂ, ಪೂರ್ಣಾವಧಿ ಅಧಿಕಾರ ನಡೆಸಲು ಸಾಧ್ಯವಾಗದೇ ಇರುವುದಕ್ಕೆ ದೇವರ ಶಾಪ ಕಾರಣ. ಸಂಕ್ರಾಂತಿ ಬಳಿಕ ದೇವರಿಗೆ ತಪ್ಪು ಕಾಣಿಕೆ ಕಟ್ಟಿ, ದೇವರ ಆಶೀರ್ವಾದ ಪಡೆದು ಹೊಸ ರಾಜಕೀಯ ಪರ್ವ ಆರಂಭಿಸುವುದಾಗಿ ಎಚ್ಡಿಕೆ ಕೆಲವು ದಿನಗಳ ಹಿಂದೆ ಹೇಳಿದ್ದರು. ಅದರಂತೆ ಶುಕ್ರವಾರ ರಾಮನಗರ ಚಾಮುಂಡೇಶ್ವರಿ ಹಾಗೂ ಜಾಲಮಂಗಲದ ಲಕ್ಷ್ಮೀನಾರಾಯಣ ದೇಗುಲಗಳಿಗೆ ಕುಟುಂಬ ಸಮೇತರಾಗಿ ತೆರಳಿ ದೇವರಿಗೆ ₹101 ರೂ. ತಪ್ಪು ಕಾಣಿಕೆ ಕಟ್ಟಿ, ಎಲ್ಲಾ ಅಪರಾಧಗಳನ್ನೂ ಮನ್ನಿಸುವಂತೆ ಬೇಡಿಕೊಂಡರು.
ಎಚ್ಡಿಕೆ ಜತೆ ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್, ಸೊಸೆ ರೇವತಿ ಇದ್ದರು. ರಾಮನಗರ ಗೆದ್ದವರು ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ ಎಂಬ ಪ್ರತೀತಿ ಇದೆ. ಈ ಕ್ಷೇತ್ರದ ಮಹತ್ವ ಏನೆಂಬುದು ಅರಿವಿಗೆ ಬರುತ್ತಲೇ ದೇವೇಗೌಡರು ತಮ್ಮ ಪುತ್ರ ಎಚ್ಡಿಕೆ ಅವರಿಗೆ 2004ರ ವಿಧಾನಸಭೆ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ಸ್ಪರ್ಧಿಸಲು ಸೂಚಿಸಿದ್ದರು. ತಂದೆಯ ಅಣತಿಯಂತೆ ಲಕ್ಷ್ಮೀ ನರಸಿಂಹಸ್ವಾಮಿಗೆ ಪೂಜೆ ಸಲ್ಲಿಸಿದ್ದರು. ಸಿಎಂ ಸಹ ಆಗಿದ್ದರು. ಕ್ಷೇತ್ರ ಮರು ವಿಂಗಡನೆಯಲ್ಲಿ ಜಾಲಮಂಗಲ ಗ್ರಾಮ ಮಾಗಡಿ ಕ್ಷೇತ್ರಕ್ಕೆ ಸೇರಿತು. ಎಚ್ಡಿಕೆ ದೇಗುಲಕ್ಕೆ ತೆರಳಿ ದೇವರಿಗೆ ಪೂಜೆ ಸಲ್ಲಿಸಲು ಸಾಧ್ಯವಾಗಿರಲಿಲ್ಲ. ದೇವರ ಸನ್ನಿಧಿಯಲ್ಲಿ ನೀಡಿದ ಭರವಸೆ ಈಡೇರಿಸದ ಹಾಗೂ ದೇಗುಲಕ್ಕೆ ತೆರಳದೇ ಅಪಚಾರವಾಗಿದೆ ಎಂಬ ಅಳಕಿತ್ತು. ಅದನ್ನು ನಿವಾರಿಸುವ ಉದ್ದೇಶದಿಂದ ಎಚ್ಡಿಕೆ ಯಾತ್ರೆ ಕೈಗೊಂಡಿದ್ದಾರೆ.