ಆ್ಯಪ್ನಗರ

ನಾವು ಹಾಕಿದ ಗಾಳಕ್ಕೆ ಅವರೇ ಸಿಲುಕಿದರು: ಡಿಕೆಶಿ

ಬಿಡದಿಯನ್ನು ಬೆಂಗಳೂರು ನಗರಕ್ಕೆ ಪರಾರ‍ಯಯವಾಗಿ ಸ್ಮಾರ್ಟ್‌ ಸಿಟಿ ಮಾಡುವುದು ಹಾಗೂ ಬಿಡದಿವರೆಗೆ ಮೆಟ್ರೋ ವಿಸ್ತರಣೆಗೆ ಪಕ್ಷ ದ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಲಾಗಿದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ತಿಳಿಸಿದರು.

Vijaya Karnataka 10 May 2018, 3:21 pm
ಬಿಡದಿ: ಬಿಡದಿಯನ್ನು ಬೆಂಗಳೂರು ನಗರಕ್ಕೆ ಪರಾರ‍ಯಯವಾಗಿ ಸ್ಮಾರ್ಟ್‌ ಸಿಟಿ ಮಾಡುವುದು ಹಾಗೂ ಬಿಡದಿವರೆಗೆ ಮೆಟ್ರೋ ವಿಸ್ತರಣೆಗೆ ಪಕ್ಷ ದ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಲಾಗಿದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ತಿಳಿಸಿದರು.
Vijaya Karnataka Web they got into the trap we put dk
ನಾವು ಹಾಕಿದ ಗಾಳಕ್ಕೆ ಅವರೇ ಸಿಲುಕಿದರು: ಡಿಕೆಶಿ


ಬಿಡದಿಯ ಬಿಜಿಎಸ್‌ ವೃತ್ತದಲ್ಲಿ ಬುಧವಾರ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು,'ಬಿಡದಿ ಮತ್ತು ಹಾರೋಹಳ್ಳಿ ಕೈಗಾರಿಕೆ ಪ್ರದೇಶಗಳು ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿರುವುದರಿಂದ ಕೈಗಾರಿಕಾ ವಲಯಕ್ಕೆ ಇನ್ನಷ್ಟು ಉತ್ತೇಜನ ನೀಡಲು, ಬೆಂಗಳೂರಿನ ಒತ್ತಡವನ್ನು ತಡೆಯಲು ಬಿಡದಿಯನ್ನು ಪರಾರ‍ಯಯ ಸಿಟಿಯಾಗಿ ಅಭಿವೃದ್ಧಿ ಪಡಿಸಲು ಕಾಂಗ್ರೆಸ್‌ ಸರಕಾರ ಚಿಂತನೆ ನಡೆಸಿದೆ,'ಎಂದು ಪುನರುಚ್ಚರಿಸಿದರು.

ಪಲ್ಟಿ ಹೊಸಡೆಸುತ್ತಿದ್ದೆವು : 'ಮಾಜಿ ಶಾಸಕ ಬಾಲಕೃಷ್ಣ ಅವರಿಗೆ ಮಾಗಡಿ ರಂಗನಾಥ ಸ್ವಾಮಿ ಜ್ಞಾನೋದಯ ನೀಡಿ ಕಾಂಗ್ರೆಸ್‌ ಸೇರುವಂತೆ ಮಾಡಿದ್ದಾನೆ. ಇಲ್ಲದೆ ಹೋಗಿದ್ದರೆ ನಾವೇ ಅವರನ್ನು ಪಲ್ಟಿ ಹೊಡೆಸಲು ತೀರ್ಮಾನಿಸಿದ್ದೆವು. ಆದರೆ, ನಾವು ಹಾಕಿದ ಗಾಳಕ್ಕೆ ಅವರೇ ಸಿಲುಕಿದರು. ಬಾಲಕೃಷ್ಣ ಕಾಂಗ್ರೆಸ್‌ದಲ್ಲಿ ಗುರುತಿಸಿಕೊಂಡ ನಂತರ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳ ಮೂಲಕ ಜನರ ಋುಣ ತೀರಿಸುವ ಕೆಲಸ ಮಾಡಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಅವರನ್ನು ಆಶೀರ್ವದಿಸಿದರೆ ಕ್ಷೇತ್ರದಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಲಿವೆ,' ಎಂದು ತಿಳಿಸಿದರು.

ಅಟ್ಟ ಹತ್ತಿದ ಮೇಲೆ..: ಸಾರಿಗೆ ಸಚಿವ ಎಚ್‌.ಎಂ.ರೇವಣ್ಣ ಮಾತನಾಡಿ,'ರಾಜಕಾರಣಿಯಾದವನು ಜನರ ಮಧ್ಯೆ ಇರಬೇಕು. ಉಪಕಾರ ಮಾಡಿದವರನ್ನು ನೆನೆಯಬೇಕು. ಆದರೆ, ಎ.ಮಂಜು ಅಟ್ಟ ಹತ್ತಿದ ಮೇಲೆ ಎಣಿ ಒದೆಯುವ ಬುದ್ಧಿ ಉಳ್ಳವರು,' ಎಂದು ಟೀಕಿಸಿದರು.

ಕಾಂಗ್ರೆಸ್‌ ಅಭ್ಯರ್ಥಿ ಎಚ್‌.ಸಿ.ಬಾಲಕೃಷ್ಣ ಮಾತನಾಡಿ, 'ಹೈನುಗಾರರಿಗೆ ಸರಕಾರ ನೀಡುತ್ತಿರುವ ಹಾಲಿನ ಪ್ರೋತ್ಸಾಹಧನ ತಮ್ಮ ಸಾಧನೆ ಎಂಬಂತೆ ಕೆಎಂಎಫ್‌ ಅಧ್ಯP್ಷÜ ಪಿ.ನಾಗರಾಜು ಬಿಂಬಿಸಿಕೊಳ್ಳುತ್ತಿದ್ದಾರೆ. ಪ್ರೋತ್ಸಾಹಧನದ ಹಣ ಸರಕಾರದ ಖಜಾನೆಯಿಂದ ರೈತರಿಗೆ ತಲುಪುತ್ತಿದೆಯೇ ಹೊರತು ನಾಗರಾಜುರವರ ಖಜಾನೆಯಿಂದಲ್ಲ. ಚುನಾವಣೆ ನಂತರ ಇಂತಹವರು ಕಾಲು ಹಿಡಿಯಲು ಬರುತ್ತಾರೆ. ಯಾವ ಕಾರಣಕ್ಕೂ ಅಂತಹವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳಬಾರದು,' ಎಂದು ವೇದಿಕೆಯಲ್ಲಿದ್ದ ಸಚಿವ ಡಿ.ಕೆ.ಶಿವಕುಮಾರ್‌ರವರಿಗೆ ಮನವಿ ಮಾಡಿದರು. ಸಂಸದ ಡಿ.ಕೆ.ಸುರೇಶ್‌, ವಿಧಾನ ಪರಿಷತ್‌ ಸದಸ್ಯ ಸಿ.ಎಂ.ಲಿಂಗಪ್ಪ, ಜಯಕರ್ನಾಟಕ ಸಂಘಟನೆ ರಾಜ್ಯ ಕಾರ್ಯಾಧ್ಯಕ್ಷ ಪ್ರಕಾಶ್‌ ರೈ ಮಾತನಾಡಿದರು. ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡ ಕೆಂಚನಕುಪ್ಪೆ ಲೋಕೇಶ್‌ ಹಾಗೂ ಇತರರು ಸಚಿವ ಡಿ.ಕೆ.ಶಿವಕುಮಾರ್‌ ಸಮ್ಮುಖದಲ್ಲಿ ಕಾಂಗ್ರೆಸ್‌ ಸೇರ್ಪಡೆಗೊಂಡರು, ಕೆಪಿಸಿಸಿ ಸದಸ್ಯ ಚಿಕ್ಕಬ್ಯಾಟಪ್ಪ, ಜಿಲ್ಲಾ ಕಾಂಗ್ರೆಸ್‌ ಸಮಿತಿ ಉಪಾಧ್ಯಕ್ಷ ಎಲ್‌.ಚಂದ್ರಶೇಖರ್‌, ತಾಪಂ ಸದಸ್ಯ ಗಾಣಕಲ್‌ ನಟರಾಜು, ಮುಖಂಡರಾದ ವೈ.ರಮೇಶ್‌, ಉಮಾಶಂಕರ್‌, ಸ್ವಾಮಿ, ಅಬ್ಬನಕುಪ್ಪೆ ರಮೇಶ್‌ ಮತ್ತಿತರರು ಉಪಸ್ಥಿತರಿದ್ದರು.

ಮಂಜು ಅವರನ್ನು ಗಂಡು ಮಾಡಿದ್ದು ನಾವು: ಸಚಿವ

ಎಂಎಲ್‌ಸಿ ಲಿಂಗಪ್ಪನವರು ಎ.ಮಂಜು ಅವರನ್ನು ನಮ್ಮ ಬಳಿ ಕರೆತಂದು ಬಿಟ್ಟರು. ಅವರನ್ನು ರಾಜಕೀಯ ಕ್ಷೇತ್ರಕ್ಕೆ ಒಬ್ಬ ಗಂಡಾಗಿ ತಯಾರು ಮಾಡಿದ್ದೆವು. ಕಳೆದ ಚುನಾವಣೆಯಲ್ಲಿ ಮಾಗಡಿ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯನ್ನಾಗಿಸಿದ್ದೆವು. ಚುನಾವಣೆಯಲ್ಲಿ ಸೋಲುಂಡ ಎ.ಮಂಜು ಅವಿತುಕೊಳ್ಳುತ್ತಿದ್ದರು. ಅವರಿಗೆ ಧೈರ್ಯ ತುಂಬಿ ಜಿ.ಪಂ. ಸದಸ್ಯನಾಗಿ ಮಾಡಿದ್ದೆವು. ಆದರೆ ಈಗ ಆ ಗಂಡು ಕುಮಾರಸ್ವಾಮಿ ಹಿಂದೆ ಹೋಗಿದೆ. ನಮಗೆ ರೆಡಿಮೇಡ್‌ ಗಂಡು (ಬಾಲಕೃಷ್ಣ) ಸಿಕ್ಕಿದ್ದು, ಇವರು ಕೊಟ್ಟ ಮಾತನ್ನು ಉಳಿಸಿಕೊಂಡು ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ ಎಂದು ಶಿವಕುಮಾರ್‌ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ