ಆ್ಯಪ್ನಗರ

ಚಿಕ್ಕದೇವರಹಳ್ಳಿಯಲ್ಲಿ 28 ಕುರಿ ಕಳ್ಳತನ: ಬೀದಿಗೆ ಬಿದ್ದ ಬಡ ಕುರಿಗಾಹಿ ಕುಟುಂಬ!

ಚಿಕ್ಕದೇವರಹಳ್ಳಿಯ ಎಲ್ಲಾ ಮನೆಗಳ ಬಾಗಿಲಿಗೆ ಚಿಲಕ ಹಾಕಿ, ರಾತ್ರಿ ಬೆಳಗ್ಗೆ ಆಗುವುದರೊಳಗೆ 28 ಕುರಿಗಳನ್ನು ಕಳ್ಳರು ಹೊತ್ತೊಯ್ದ ಘಟನೆ ನಡೆದಿದೆ. ಬದುಕಿಗೆ ಇದುವೆ ಆಧಾರವಾಗಿದ್ದ ಕುರಿಗಾಹಿ ಕುಟುಂಬಗಳು ಈಗ ಬೀದಿಗೆ ಬಂದಿವೆ.

Vijaya Karnataka Web 13 Nov 2020, 12:16 pm
ಹಾರೋಹಳ್ಳಿ: ಎರಡು ಕುರಿಗಾಹಿ ಕುಟುಂಬಗಳು ಸಾಕಿದ್ದ 28 ಕುರಿಗಳನ್ನು ಕಳ್ಳರ ತಂಡವೊಂದು ಕದ್ದಿದೆ. ಜೀವನೋಪಾಯಕ್ಕಾಗಿ ಸಾಕಿದ್ದ ಅಷ್ಟೂ ಕುರಿಗಳನ್ನು ಕಳೆದುಕೊಂಡು ಕುಟುಂಬಗಳು ಬೀದಿ ಪಾಲಾಗಿವೆ.
Vijaya Karnataka Web ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ


ಕನಕಪುರ ತಾಲೂಕಿನ ಮರಳವಾಡಿ ಹೋಬಳಿಯ ಚಿಕ್ಕದೇವರಹಳ್ಳಿ ಗ್ರಾಮದ ಸಿದ್ದಯ್ಯ ಹಾಗೂ ಟಿ.ಹೊಸಳ್ಳಿ ಗ್ರಾಮದ ವಿಜಯ್‌ ಅವರ ಕುಟುಂಬಗಳು ಸಾಕಿದ್ದ ಕುರಿಗಳನ್ನು ಕಳ್ಳರು ಹೊತ್ತೊಯ್ದಿದ್ದಾರೆ.
ಚನ್ನಮ್ಮನ ಕಿತ್ತೂರು ಪಟ್ಟಣದ ಶ್ರೀ ಸಾಯಿಬಾಬಾ ದೇವಸ್ಥಾನದಲ್ಲಿ ಕಳವು

ರಾತ್ರಿ ಬೆಳಗಾಗುವುದರೊಳಗೆ ಮಂಗಮಾಯ

ಬುಧವಾರ ರಾತ್ರಿ ಎಲ್ಲರೂ ಮಲಗಿದ್ದಾಗ ಗ್ರಾಮದ ಎಲ್ಲ ಮನೆಗಳ ಚಿಲಕಗಳನ್ನು ಹೊರಗಡೆಯಿಂದ ಲಾಕ್‌ ಮಾಡಿದ ಕಳ್ಳರು, ಸುಮಾರು 1.5 ಲಕ್ಷ ಬೆಲೆಬಾಳುವ ಅಷ್ಟೂ ಕುರಿಗಳನ್ನು ಸಾಗಿಸಿದ್ದಾರೆ.
ಕ್ರೈಮ್‌ ಬ್ರಾಂಚ್‌ ಪೊಲೀಸರೆಂದು ಬಂಗಾರ ದೋಚಿದ ಪ್ರಕರಣ: ಆರೋಪಿಗಳಿಗೆ ನ್ಯಾಯಾಂಗ ಬಂಧನ!

ಮಿತಿಮೀರಿದ ಕಳ್ಳರ ಉಪಟಳ

ಹಾರೋಹಳ್ಳಿ ಮತ್ತು ಮರಳವಾಡಿ ಹೋಬಳಿಯಾದ್ಯಂತ ಕಳ್ಳರ ಉಪಟಳ ಹೆಚ್ಚಿದ್ದು, ಕುರಿ, ಕೋಳಿಗಳ ಕಳ್ಳತನ ಮಾಮೂಲಿಯಾಗಿದೆ. ಪೊಲೀಸರು ಎಷ್ಟೇ ಪ್ರಯತ್ನಪಟ್ಟರೂ ಕಳ್ಳತನ ನಿಯಂತ್ರಿಸಲು ಸಾಧ್ಯವಾಗಿಲ್ಲ. ಕಳ್ಳರ ಕುರಿತು ಸುಳಿವು ಸಿಕ್ಕವರು ಪೊಲೀಸರಿಗೆ ತಿಳಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ