ಆ್ಯಪ್ನಗರ

ದೇವಾಲಯದ ಹುಂಡಿ ಒಡೆದು ಹಣ ದೋಚಿದ ಕಳ್ಳರು

ಪಟ್ಟಣದ ಕೋದಂಡರಾಮ ಬಡಾವಣೆಯಲ್ಲಿದೇವಾಲಯದ ಬಾಗಿಲು ಮುರಿದು ಒಳ ನುಗ್ಗಿರುವ ಕಳ್ಳರು, ಹುಂಡಿ ಒಡೆದು ಸಾವಿರಾರು ರೂ, ಹಣ ದೋಚಿದ ಘಟನೆ ಗುರುವಾರ ರಾತ್ರಿ ನಡೆದಿದೆ...

Vijaya Karnataka 31 Aug 2019, 5:00 am
ಚನ್ನಪಟ್ಟಣ: ಪಟ್ಟಣದ ಕೋದಂಡರಾಮ ಬಡಾವಣೆಯಲ್ಲಿದೇವಾಲಯದ ಬಾಗಿಲು ಮುರಿದು ಒಳ ನುಗ್ಗಿರುವ ಕಳ್ಳರು, ಹುಂಡಿ ಒಡೆದು ಸಾವಿರಾರು ರೂ, ಹಣ ದೋಚಿದ ಘಟನೆ ಗುರುವಾರ ರಾತ್ರಿ ನಡೆದಿದೆ.
Vijaya Karnataka Web thieves who break the temple hooligan and grab the money
ದೇವಾಲಯದ ಹುಂಡಿ ಒಡೆದು ಹಣ ದೋಚಿದ ಕಳ್ಳರು


ಇಲ್ಲಿನ ಚರ್ಚ್ ರಸ್ತೆಯಲ್ಲಿರುವ ಕೋದಂಡರಾಮ ಬಡಾವಣೆಯ ಶ್ರೀರಾಮಮಂದಿರ ಹಾಗೂ ಶ್ರೀಅಂಜನೇಯಸ್ವಾಮಿ ದೇವಾಲಯದಲ್ಲಿಕಳ್ಳತನ ನಡೆದಿದ್ದು, ದೇವಾಲಯದ ಬಾಗಿಲು ಮುರಿದು ನುಗ್ಗಿರುವ ಕಳ್ಳರು, ಕಬ್ಬಿಣದ ಹುಂಡಿಯನ್ನು ಒಡೆದು ಭಕ್ತಾದಿಗಳಿಂದ ಸಂಗ್ರಹಣೆಯಾಗಿದ್ದ, ಸುಮಾರು 40 ಸಾವಿರಕ್ಕೂ ಹೆಚ್ಚು ಹಣವನ್ನು ಹೊತ್ತೊಯ್ದಿದ್ದಾರೆ.

ದೇವಾಲಯದಲ್ಲಿಕಳವು ಆಗಿರುವುದರ ಬಗ್ಗೆ ಭಕ್ತಾದಿಗಳು ಮುಂಜಾನೆ ದೇವಾಲಯದ ಅರ್ಚಕರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಅರ್ಚಕರು ದೇವಾಲಯವನ್ನು ವೀಕ್ಷಣೆ ಮಾಡಿ, ದೇವರ ಮಂದಿರದಲ್ಲಿದ್ದ ಹುಂಡಿಯನ್ನು ಒಡೆದಿರುವುದನ್ನು ಖಾತ್ರಿ ಪಡಿಸಿ, ಕಳ್ಳರು 40 ಸಾವಿರ ರೂ,ಗೂ ಹೆಚ್ಚು ಹಣ ದೋಚಿರುವ ಸಾಧ್ಯತೆ ಇದೆ ಎಂದು ದೇವಾಲಯದ ಪುರೋಹಿತ ಚಂದ್ರಶೇಖರ ಆರಾಧ್ಯ ದೂರು ನೀಡಿದ್ದಾರೆ.

ಕಳೆದ ಬಾರಿಯು ಕೂಡ ದೇವಾಲಯದ ಬಾಗಿಲು ಒಡೆದಿದ್ದ ಕಳ್ಳರ ತಂಡ, ಹುಂಡಿ ಒಡೆಯಲು ಯತ್ನಿಸಿ ವಿಫಲರಾಗಿದ್ದರು. ಆದರೆ ಈ ಬಾರಿ ಪೂರ್ವಭಾವಿಯಂತೆ ಕಬ್ಬಿಣದ ಸಲಾಕೆಗಳನ್ನು ಬಳಸಿ, ಹುಂಡಿ ಒಡೆದು ಹಣ ದೋಚಿದ್ದಾರೆ. ಈ ಪ್ರಕರಣದ ಬಗ್ಗೆ ನಗರ ಪೊಲೀಸ್‌ ಠಾಣೆಯಲ್ಲಿದೂರು ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ