ಆ್ಯಪ್ನಗರ

ದೇಶದಲ್ಲಿ ಬಿಜೆಪಿ ಅಂತ್ಯ ಆರಂಭ, ಜಾರ್ಖಂಡ್‌ ಫಲಿತಾಂಶಕ್ಕೆ ಡಿಕೆಶಿ ವ್ಯಾಖ್ಯಾನ

“ಜಾರ್ಖಂಡ್‌ನಲ್ಲಿ ಜನ ತಮ್ಮ ತೀರ್ಪನ್ನು ತೋರಿಸಿದ್ದಾರೆ. ದೇಶದಲ್ಲಿ ಬದಲಾವಣೆಯಾಗುತ್ತಿದೆ. ಕೇಂದ್ರ ಸರಕಾರ ತರುತ್ತಿರುವ ಕಾನೂನುಗಳು ದೇಶಕ್ಕೆ ಹೇಗೆ ಮಾರಕ ಎನ್ನುವುದು ಗೊತ್ತಾಗಿದೆ. ಇದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು,” ಎಂದು ಶಿವಕುಮಾರ್ ಹೇಳಿದರು.

Vijaya Karnataka 23 Dec 2019, 8:20 pm

ಕನಕಪುರ (ರಾಮನಗರ): ಜಾರ್ಖಂಡ್‌ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಎಂಎಂ-ಆರ್‌ಜೆಡಿ ಮೈತ್ರಿಕೂಟ ಮೇಲುಗೈ ಸಾಧಿಸಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್‌ ಹಿರಿಯ ನಾಯಕ ಡಿಕೆ ಶಿವಕುಮಾರ್‌, 'ಇದು ದೇಶದಲ್ಲಿ ಬಿಜೆಪಿ ಅಂತ್ಯಕ್ಕೆ ಪ್ರಾರಂಭ' ಎಂದು ವ್ಯಾಖ್ಯಾನಿಸಿದ್ದಾರೆ.
Vijaya Karnataka Web DK Shivakumar


“ಜಾರ್ಖಂಡ್‌ನಲ್ಲಿ ಜನ ತಮ್ಮ ತೀರ್ಪನ್ನು ತೋರಿಸಿದ್ದಾರೆ. ದೇಶದಲ್ಲಿ ಬದಲಾವಣೆಯಾಗುತ್ತಿದೆ. ಕೇಂದ್ರ ಸರಕಾರ ತರುತ್ತಿರುವ ಕಾನೂನುಗಳು ದೇಶಕ್ಕೆ ಹೇಗೆ ಮಾರಕ ಎನ್ನುವುದು ಗೊತ್ತಾಗಿದೆ. ಇದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು,” ಎಂದು ಹೇಳಿದರು.

“ಇದು ದೇಶದಲ್ಲಿ ಬಿಜೆಪಿ ಅಂತ್ಯಕ್ಕೆ ಪ್ರಾರಂಭ ಎಂದು ಬಿಜೆಪಿ ಸ್ನೇಹಿತರಿಗೆ ಹೇಳ್ತೇನೆ,” ಎಂದು ಅವರು ತಿಳಿಸಿದರು. ಜಾರ್ಖಂಡ್‌ನಲ್ಲಿ ಮೈತ್ರಿಕೂಟ ಬಹುಮತ ಗಳಿಸಿದ್ದು 80 ಸದಸ್ಯ ಬಲದ ವಿಧಾನಸಭೆಯಲ್ಲಿ 47 ಸ್ಥಾನ ಗೆದ್ದುಕೊಂಡಿದೆ. ಅಧಿಕಾರದಲ್ಲಿದ್ದ ಬಿಜೆಪಿ ಕೇವಲ 25 ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ.

'ಅಧಿಕಾರವಿದೆ ಎಂದು ನೀವು ಮಾಡಿದ್ದನ್ನೆಲ್ಲಾ ಸಹಿಸೋದಿಲ್ಲ'! ಮೋದಿ, ಶಾಗೆ ಡಿಕೆಶಿ ವಾರ್ನಿಂಗ್

ಇದೇ ಸಂದರ್ಭದಲ್ಲಿ ಸಿಎಎ, ಎನ್‌ಆರ್‌ಸಿ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ನಾನು ಯಾವುದೇ ಪೌರತ್ವ ದಾಖಲೆಗಳನ್ನು ಕೇಳಿದರೆ ಕೊಡುವುದಿಲ್ಲ. ನನ್ನ ಮೇಲೆ ಯಾವುದೇ ಕ್ರಮ‌ ಬೇಕಾದರೂ ಜರುಗಿಸಲಿ,” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ