ಆ್ಯಪ್ನಗರ

ಋುಣಮುಕ್ತ ಪರಿಹಾರ ಅರ್ಜಿಗೆ ನೂಕುನುಗ್ಗಲು

ತಾಲೂಕು ಕಚೇರಿಯಲ್ಲಿಋುಣ ಮುಕ್ತ ಪರಿಹಾರದ ಅರ್ಜಿ ಪಡೆಯಲು ಜನರು ನೂಕುನುಗ್ಗಲಿನಲ್ಲಿಉಂಟಾಗಿ ಸಿಬ್ಬಂದಿ ಹರಸಾಹಸದಿಂದ ಶಾಂತಿಯುತವಾಗಿ ಅರ್ಜಿ ವಿತರಿಸಲಾಯಿತು.

Vijaya Karnataka 1 Sep 2019, 3:38 pm
ಚನ್ನಪಟ್ಟಣ: ತಾಲೂಕು ಕಚೇರಿಯಲ್ಲಿಋುಣ ಮುಕ್ತ ಪರಿಹಾರದ ಅರ್ಜಿ ಪಡೆಯಲು ಜನರು ನೂಕುನುಗ್ಗಲಿನಲ್ಲಿಉಂಟಾಗಿ ಸಿಬ್ಬಂದಿ ಹರಸಾಹಸದಿಂದ ಶಾಂತಿಯುತವಾಗಿ ಅರ್ಜಿ ವಿತರಿಸಲಾಯಿತು.
Vijaya Karnataka Web to mitigate the debt relief application
ಋುಣಮುಕ್ತ ಪರಿಹಾರ ಅರ್ಜಿಗೆ ನೂಕುನುಗ್ಗಲು


ಅರ್ಜಿ ಪಡೆಯಲು ಕಚೇರಿಗೆ ಆಗಮಿಸಿದ ಜನ ಸರತಿ ಸಾಲಿನಲ್ಲಿನಿಲ್ಲುವಾಗ ಒಬ್ಬರ ಮೇಲೆ ಒಬ್ಬರು ಬೀಳುತ್ತಿದ್ದನ್ನು ಗಮನಿಸಿ ಸಿಬ್ಬಂದಿ ವರ್ಗ ಎಲ್ಲರಿಗೂ ಅರ್ಜಿ ನೀಡಲಾಗುತ್ತದೆ. ಯಾವುದೇ ಗೊಂದಲ ಬೇಡ ಸಾಲು ನಿಲುವಂತೆ ಸೂಚಿಸಿದರು. ಕೆಲವರು ತಾವು ಮೊದಲು ಅರ್ಜಿ ಪಡೆಯಬೇಕು ಎಂಬ ಹಠದಿಂದ ಮಧ್ಯ ಹೋಗುತ್ತಿದ್ದವರು ಸಾಲಿನಲ್ಲಿಕಳುಹಿಸಿ ನಿಲ್ಲಿಸುತ್ತಿದ್ದರು.

ಬಳಿಕ ಎರಡು ಕೌಂಟರ್‌ ಮಾಡಿ ಸರತಿ ಸಾಲಿನಲ್ಲಿನಿಲ್ಲಿಸಿ, ಮಹಿಳೆಯರು ಮತ್ತು ಪುರುಷರು ವಿಭಾಗ ಮಾಡಿ ಅರ್ಜಿ ನೀಡಿದರು. ಅರ್ಜಿ ವಿತರಣೆ ಮೊದಲ ದಿನವಾದ ಕಾರಣ ಹೆಚ್ಚು ಪ್ರಚಾರವಿರಲಿಲ್ಲ. ಪಟ್ಟಣಕ್ಕೆ ಹಬ್ಬದ ಸಾಮಾನು ತರಲು ಬಂದಿದ್ದ ಜನರಿಗೆ ವಿಷಯ ತಿಳಿದು ಕಚೇರಿಗೆ ಆಗಮಿಸಿದಾಗ ಜನ ಜಾತ್ರೆ ಉಂಟಾಯಿತು. ಬಳಿಕ ಜನರನ್ನು ನಿಯಂತ್ರಿಸಲು ಪೊಲೀಸರನ್ನು ನಿಯೋಜಿಸಲಾಯಿತು. ಪಕ್ಕದ ತಾಪಂ ಕಚೇರಿಗೆ ಬಂದ ಜನರಿಗೆ ವಿಷಯ ತಿಳಿದು ಎಲ್ಲೆಡೆ ಇದೇ ಮಾತು ಆರಂಭವಾಗಿ ತಾವು ಅರ್ಜಿ ಪಡೆಯಲು ಮುಂದಾಗಿ ಯಾವ ದಾಖಲೆ ಬೇಕು. ಯಾವ

ಯಾವ ಬ್ಯಾಂಕ್‌ನಲ್ಲಿಸಾಲ ವಜಾ ಆಗುತ್ತದೆ ಎಂದು ಸಿಕ್ಕವರನ್ನು ಪ್ರಶ್ನೆ ಮೇಲೆ ಪ್ರಶ್ನೆ ಮಾಡಲಾರಂಭಿಸಿದರು. ಕೆಲವರಿಗೆ ಉತ್ತರ ಹೇಳಿ ಸಾಕಾಗಿದ್ದರೆ, ಸೌಲಭ್ಯ ಸಿಗದವರು ಇದು ಬೇಕಿತ್ತಾ ಮುಂದೆ ಸಾಲ ನೀಡುವವರು ಒಂದು ನಯಾ ಪೈಸೆ ನೀಡುವುದಿಲ್ಲಎಂಬ ಮಾತು ತಾಲೂಕು ಭಾವನದ ಸುತ್ತ ಕೇಳಿ ಬಂತು.

ಋುಣಮುಕ್ತ ಅರ್ಜಿ ಪಡೆಯಲು ಆಧಾರ್‌ ಅಡವಿಟ್ಟು ರಸೀದಿ ಬೇಕು. ಅವುಗಳನ್ನು ಪರಿಶೀಲಿಸಿ ಅಂತಹವರಿಗೆ ಅರ್ಜಿ ನೀಡಲಾಗುತ್ತಿದೆ ಎಂದು ಕಂದಾಯ ಇಲಾಖೆ ಸಿಬ್ಬಂದಿ ಹೇಳುತ್ತಿದ್ದರು. ಒಂದೇ ದಿನದಲ್ಲಿನಾಲ್ಕೂವರೆ ಸಾವಿರ ಅರ್ಜಿ ನೀಡಲಾಗಿದೆ ಎಂದು ಕಂದಾಯ ಇಲಾಖೆ ಅಧಿಕಾರಿ ಮಾಹಿತಿ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ