ಆ್ಯಪ್ನಗರ

ರಾಜ್ಯದ ಜನರ ಸೇವೆ ಮಾಡಲು ಮತ್ತೆ ಹುಟ್ಟಿ ಬಂದಿದ್ದೇನೆ: ಎಚ್‌ಡಿಕೆ

ಮಾಗಡಿಯ ವಿಕಾಸ ಪರ್ವ ಕಾರ್ಯಕ್ರಮದಲ್ಲಿ ನೆರೆದಿರುವ ಜನರನ್ನು ನೋಡಿ ಏನು ಮಾತಾಡಬೇಕು ಎಂದು ತಿಳಿಯುತ್ತಿಲ್ಲ, ಅಷ್ಟು ಖುಷಿ ತಂದಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

Vijaya Karnataka Web 25 Mar 2018, 9:02 pm
ರಾಮನಗರ: ಮಾಗಡಿಯ ವಿಕಾಸ ಪರ್ವ ಕಾರ್ಯಕ್ರಮದಲ್ಲಿ ನೆರೆದಿರುವ ಜನರನ್ನು ನೋಡಿ ಏನು ಮಾತಾಡಬೇಕು ಎಂದು ತಿಳಿಯುತ್ತಿಲ್ಲ, ಅಷ್ಟು ಖುಷಿ ತಂದಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
Vijaya Karnataka Web hd-kumaraswamy-01


ಇದೇ ಪಕ್ಷದಲ್ಲಿ ಬೆಳೆದು ಬಿಟ್ಟು ಹೋಗಿರೋರಿಗೆ ತಕ್ಕ ಉತ್ತರ ಕೊಟ್ಟಿದ್ದೀರಾ. ವೈಯಕ್ತಿಕವಾಗಿ ಯಾರ ವಿಚಾರನೂ ಮಾತನಾಡೋದಿಲ್ಲ. ಕೆಸರು‌ ಮೇಲೆ ಕಲ್ಲು ಹಾಕಿ ಕೊಚ್ಚೆ ನಾನ್ಯಾಕೆ ಎಗರಿಸಿಕೊಳ್ಳಬೇಕು. ನಾನು ಎರಡನೇ ಜನ್ಮ ಹೊತ್ತು ಜನ ಸೇವೆ ಮಾಡಲು ಬಂದಿದ್ದೇನೆ. ರಾಜ್ಯದ ಜನರ ಸೇವೆ ಮಾಡಲು ಮತ್ತೆ ಹುಟ್ಟಿ ಬಂದಿದ್ದೇನೆ ಎಂದು ನುಡಿದರು.

ಕಾಂಗ್ರೆಸ್ ಸರ್ಕಾರ ನಮ್ಮ ಪಕ್ಷದ ಬಗ್ಗೆ ಟೀಕೆ ಮಾಡುತ್ತಿದೆ. ಯಾವುದೇ ಆಮಿಷಕ್ಕೂ ಒಳಗಾಗಬೇಡಿ. ನಮಗೆ ಮತ ಕೊಟ್ಟು ಆರ್ಶೀವಾದ ಮಾಡಿ. ಈ ಹಿಂದೆ ನಮ್ಮ ಪಕ್ಷದ ಕೆಲಸ ಮಾಡಿದ ಬಾಲಕೃಷ್ಣ ಹಣ ಕೊಟ್ಟು ಜನ ಸಂಪಾದನೆ ಮಾಡುತಿದ್ದಾರೆ.
ಆದರೆ ಎ.ಮಂಜು ಜನಶಕ್ತಿ ಹೊಂದಿದ್ದಾರೆ ಎಂದು ಹೇಳಿದರು.

ಚುನಾವಣೆಗೆ ಹಣ ಮುಖ್ಯ ಅಲ್ಲ. ನಾನು ನಮ್ಮ ಪಕ್ಷವನ್ನ ಬಲಿಷ್ಠಗೊಳಿಸಲು ರಾಜ್ಯದ ಮೂಲೆ ಮೂಲೆ ಓಡಾಡುತ್ತಿದ್ದೇನೆ.
ನನ್ನ ಆರೋಗ್ಯವನ್ನು ಲೆಕ್ಕಿಸದೆ ರಾಜ್ಯಕ್ಕಾಗಿ ಹೋರಾಡುತ್ತಿದ್ದೇನೆ. ನಾನು‌ ಮುಖ್ಯಮಂತ್ರಿಯಾದ್ರೆ ಮೊದಲು ರೈತರಿಗೆ ಆದ್ಯತೆ ಕೊಡುತ್ತೆನೆ. ರಾಜ್ಯದಲ್ಲಿ ರೈತರು ಹೆಚ್ಚು ಸಾಲ ಮಾಡಿಕೊಂಡಿದ್ದಾರೆ. ನಾನು ಸಂಪೂರ್ಣ ಸಾಲ ಮನ್ನಾ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಬಿಜೆಪಿ ಪಕ್ಷದವರು ಮೋದಿ ಮುಖ ನೋಡಿ ಮತ ಕೊಡಿ ಎಂದು ಕೇಂದ್ರ ಬಿಜೆಪಿಯವರು ಕೇಳುತ್ತಾರೆ. ಯಡಿಯೂರಪ್ಪ ಮುಖ ನೋಡಿ ಎಂದು ಎಲ್ಲೂ ಪ್ರಸ್ತಾಪ ಮಾಡಿಲ್ಲ ಎಂದು ಲೇವಡಿ ಮಾಡಿದರು.

ಸಿದ್ದರಾಮಯ್ಯ, ರಾಹುಲ್ ಗಾಂಧಿಯವರೇ ನೀವು ಜೆಡಿಎಸ್ ಭದ್ರ ಕೋಟೆಯನ್ನ‌ ಕೆಣಕ್ಕಿದ್ದೀರಿ. ಮೈಸೂರಿನಲ್ಲಿ‌ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ರಾಜ್ಯದಿಂದ ಮೂಲೆ‌ ಮೂಲೆಯಿಂದ ಕರೆದು ಜನ‌ ಸೇರಿಸಿದ್ದೀರಾ, ಮಾಗಡಿಯಲ್ಲಿ ನಮ್ಮ ಕಾರ್ಯಕ್ರಮದಲ್ಲಿ ಎಷ್ಟು ಜನ ಸೇರಿದ್ದಾರೆ ಬಂದು ನೋಡಿ ಎಂದು ರಾಹುಲ್‌ಗೆ ಟೀಕೆ ಮಾಡಿದರು.

ಜೆಡಿಎಸ್‌ಗೆ ಸೇರ್ಪಡೆ...
ಮಾಗಡಿಯ ವಿಕಾಸ‌ಪರ್ವ ಕಾರ್ಯಕ್ರಮದಲ್ಲಿ ಜೇಡರಹಳ್ಳಿ ಕೃಷ್ಣಪ್ಪ ಅವರು ದೇವೇಗೌಡ ಹಾಗೂ ಕುಮಾರ ಸ್ವಾಮಿ ಸಮ್ಮುಖದಲ್ಲಿ ಕಾಂಗ್ರೆಸ್‌ನಿಂದ ಜೆಡಿಎಸ್ ಸೇರ್ಪಡೆಗೊಂಡರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ