ಆ್ಯಪ್ನಗರ

ಕಾರ್ಮಿಕರ ವಜಾ ಖಂಡಿಸಿ ಮೌನ ಪ್ರತಿಭಟನೆ

ಟೊಯೋಟಾ ಕಿರ್ಲೋಸ್ಕರ್‌ ಕಂಪೆನಿಯ ಆಡಳಿತ ಮಂಡಳಿಯು 17 ಜನ ನೌಕರರನ್ನು ಅಕ್ರಮವಾಗಿ ವಜಾಗೊಳಿಸಿದೆ ಎಂದು ಆರೋಪಿಸಿ ಟೊಯೋಟಾ ಕಿರ್ಲೊಸ್ಕರ್‌ ಮೋಟಾರ್ಸ್‌ ಕಾರ್ಮಿಕ ಸಂಘಟನೆ (ಟಿಕೆಎಂಇಯು) ಪದಾಧಿಕಾರಿಗಳು ಹಾಗೂ ನೌಕರರು ಸೋಮವಾರ ಬಾಯಿಗೆ ಕಪ್ಪುಬಟ್ಟೆ ಕಟ್ಟಿಕೊಂಡು ಮೌನ ಪ್ರತಿಭಟನೆ ನಡೆಸಿದರು.

Vijaya Karnataka 18 Dec 2018, 5:00 am
ಬಿಡದಿ: ಟೊಯೋಟಾ ಕಿರ್ಲೋಸ್ಕರ್‌ ಕಂಪೆನಿಯ ಆಡಳಿತ ಮಂಡಳಿಯು 17 ಜನ ನೌಕರರನ್ನು ಅಕ್ರಮವಾಗಿ ವಜಾಗೊಳಿಸಿದೆ ಎಂದು ಆರೋಪಿಸಿ ಟೊಯೋಟಾ ಕಿರ್ಲೊಸ್ಕರ್‌ ಮೋಟಾರ್ಸ್‌ ಕಾರ್ಮಿಕ ಸಂಘಟನೆ (ಟಿಕೆಎಂಇಯು) ಪದಾಧಿಕಾರಿಗಳು ಹಾಗೂ ನೌಕರರು ಸೋಮವಾರ ಬಾಯಿಗೆ ಕಪ್ಪುಬಟ್ಟೆ ಕಟ್ಟಿಕೊಂಡು ಮೌನ ಪ್ರತಿಭಟನೆ ನಡೆಸಿದರು.
Vijaya Karnataka Web toyota workers silence protest against illegally dismissed of employees
ಕಾರ್ಮಿಕರ ವಜಾ ಖಂಡಿಸಿ ಮೌನ ಪ್ರತಿಭಟನೆ


ಟೊಯೋಟಾ ಕಿರ್ಲೊಸ್ಕರ್‌ ಮೋಟಾರ್ಸ್‌ನ 17 ಕಾರ್ಮಿಕರನ್ನು ಆಡಳಿತ ವರ್ಗ ಅಮಾನತುಗೊಳಿಸಿ ಒಂದು ವರ್ಷ ಸಂದ ಹಿನ್ನೆಲೆಯಲ್ಲಿ ಟಿಕೆಎಂಇಯು ಅಧ್ಯಕ್ಷ ಪ್ರಸನ್ನ ಚಕ್ಕೆರೆ ನೇತೃತ್ವದಲ್ಲಿ ನೂರಾರು ಕಾರ್ಮಿಕರು ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಟೊಯೋಟಾ ಕಿರ್ಲೋಸ್ಕರ್‌ ಮೋಟಾರ್ಸ್‌ ಕಾರ್ಖಾನೆಯ ಮುಂಭಾಗ ಜಮಾಯಿಸಿ ಮೌನ ಪ್ರತಿಭಟನೆಗೆ ಮುಂದಾದರು. ಬಾಯಿಗೆ ಕಪ್ಪುಬಟ್ಟೆಯನ್ನು ಕಟ್ಟಿಕೊಂಡು ರಸ್ತೆಯ ಪಕ್ಕದಲ್ಲಿ ಸಾಲಾಗಿ ನಿಲ್ಲುವ ಮೂಲಕ ಕರಾಳ ದಿನವನ್ನಾಗಿ ಆಚರಣೆ ಮಾಡಿದರು.

ವೇತನ ಹೆಚ್ಚಳ, ಕಾರ್ಯದೊತ್ತಡ ಕಡಿಮೆ ಮಾಡುವುದು, ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ 2014ರಲ್ಲಿ ದೊಡ್ಡ ಪ್ರಮಾಣ ಹೋರಾಟ ಹಮ್ಮಿಕೊಳ್ಳಲಾಗಿತ್ತು. 2014ರ ಮಾರ್ಚ್‌ 16 ರಂದು ಕಂಪನಿಯ ಆಡಳಿತ ವರ್ಗ ಕಾರ್ಖಾನೆಗೆ ಏಕಾಏಕಿ ಬೀಗಮುದ್ರೆ ಘೋಷಿಸಿ, 33 ಜನ ಕಾರ್ಮಿಕರನ್ನು ಹೊರಹಾಕುವ ಶಿಕ್ಷೆ ನೀಡಿತ್ತು. ಸದಸ್ಯರನ್ನು ಅಮಾನವೀಯವಾಗಿ ಬೀದಿಗೆ ತಳ್ಳಿದ ಆಡಳಿತ ವರ್ಗದ ವಿರುದ್ಧ ಹೋರಾಟ ಮಾಡಿದ ಕಾರಣ 2017ರ ಡಿಸೆಂಬರ್‌ 15ರಂದು 17 ವಜಾಗೊಳಿಸಲಾಗಿದೆ.

ಕಾರ್ಮಿಕರ ಬೇಡಿಕೆಗಳಿಗೆ ಸ್ಪಂದಿಸದೆ ಕಂಪೆನಿಯ ಆಡಳಿತ ಮಂಡಳಿ ತೆಗೆದುಕೊಂಡ ದಿಢೀರ್‌ ನಿರ್ಧಾರವನ್ನು ಪ್ರಶ್ನಿಸಿ ಕಾರ್ಮಿಕರು ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆದ. ಆದರೆ ನ್ಯಾಯಾಲಯದ ತೀರ್ಪು ಪ್ರಕಟವಾಗುವ ಮುನ್ನವೇ ಕಂಪೆನಿಯ ಆಡಳಿತ ವರ್ಗ ಆಂತರಿಕ ಪರಿಶೀಲನೆ ನಡೆಸಿರುವುದಾಗಿ ತಿಳಿಸಿ, 33 ಜನ ಕಾರ್ಮಿಕರ ಪೈಕಿ ಏಕಾಏಕಿ 16 ಜನರನ್ನು ಪುನರ್‌ ನೇಮಕ ಮಾಡಿಕೊಂಡು 17 ಜನರನ್ನು ಅಕ್ರಮವಾಗಿ ವಜಾಗೊಳಿಸಿದೆ.

ಇದನ್ನು ಖಂಡಿಸಿ ಕಾರ್ಮಿಕ ಸಂಘಟನೆಯು ಪ್ರತಿ ತಿಂಗಳು 15ನೇ ದಿನಾಂಕದಂದು ಕರಾಳ ದಿನವನ್ನು ಆಚರಿಸಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸುತ್ತಾ ಬಂದಿದೆ. ಡಿಸೆಂಬರ್‌ 15ಕ್ಕೆ ಒಂದು ವರ್ಷ ಸಂದಿರುವ ಹಿನ್ನೆಲೆಯಲ್ಲಿ ವಜಾಗೊಳಿಸಿರುವ 17 ಜನ ಕಾರ್ಮಿಕರನ್ನು ಮರು ನೇಮಕಕ್ಕೆ ಆಗ್ರಹಿಸಿ ಮಧ್ಯಾಹ್ನ 1 ಗಂಟೆಯಿಂದ 4 ಗಂಟೆವರೆಗೆ ಮೌನ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಮಿಕ ಮುಖಂಡರು ತಿಳಿಸಿದರು.

ಬಿಡದಿ ಕೈಗಾರಿಕಾ ವಲಯದಲ್ಲಿ ಕಾರ್ಮಿಕರ ಮೇಲೆ ನಿರಂತರವಾಗಿ ದಬ್ಬಾಳಿಕೆ, ದೌರ್ಜನ್ಯ ನಡೆಯುತ್ತಿದ್ದು, ಅನ್ಯಾಯವನ್ನು ಪ್ರಶ್ನಿಸುವ ಕಾರ್ಮಿಕರನ್ನು ಪ್ರತಿ ಸಂಸ್ಥೆಯಲ್ಲೂ ಏಕಾಏಕಿ ಅಮಾನತು ಮಾಡುವುದು. ಇಲ್ಲವೇ ವಜಾಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ. ಯಾವ ಇಲಾಖಾಧಿಕಾರಿಗಳು ಕಾರ್ಮಿಕರ ನೆರವಿಗೆ ಬಾರದೇ ಇರುವುದು ದೌರ್ಭಾಗ್ಯವೇ ಸರಿ ಎಂದು ಪ್ರತಿಭಟನಾನಿರತರು ಅಳಲು ತೋಡಿಕೊಂಡರು.

ಮೌನ ಪ್ರತಿಭಟನೆಯಲ್ಲಿ ಟೊಯೋಟಾ ಕಿರ್ಲೊಸ್ಕರ್‌ ಮೋಟಾರ್ಸ್‌ ಎಂಪ್ಲಾಯಿಸ್‌ ಯೂನಿಯನ್‌ ಅಧ್ಯಕ್ಷ ಪ್ರಸನ್ನ ಚಕ್ಕೆರೆ, ಪ್ರಧಾನ ಕಾರ್ಯದರ್ಶಿ ಶರಣಪ್ಪ ಡಿಂಗಿ, ಕಾರ್ಯದರ್ಶಿ ದೀಪಕ್‌, ಜಂಟಿ ಕಾರ್ಯದರ್ಶಿ ಬಸವರಾಜ ಹವಾಲ್ದಾರ್‌, ಸೇರಿದಂತೆ ಪದಾಧಿಕಾರಿಗಳು, ಬಿಡದಿ ಕೈಗಾರಿಕೆ ಒಕ್ಕೂಟದ ಸದಸ್ಯರು ಹಾಗೂ ಕಾರ್ಮಿಕರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ