ಆ್ಯಪ್ನಗರ

ಟೊಯೋಟಾ ಕಾರ್ಮಿಕರ ಹೋರಾಟ ಮತ್ತಷ್ಟು ತೀವ್ರವಾಗಲಿದೆ: ಎಚ್. ಸಿ. ಬಾಲಕೃಷ್ಣ

ಟೊಯೋಟಾ ಕಾರ್ಮಿಕರು 70ಕ್ಕೂ ಹೆಚ್ಚು ದಿನಗಳಿಂದ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ‌. ಇದೆಲ್ಲವನ್ನ‌ ಖಂಡಿಸಿ ಪ್ರತಿಭಟನಾ ರ‍್ಯಾಲಿ ಮಾಡಲು ಮುಂದಾಗಿದ್ದೇವೆ ಎಂದು ಮಾಜಿ ಶಾಸಕ ಎಚ್. ಸಿ. ಬಾಲಕೃಷ್ಣ ತಿಳಿಸಿದ್ದಾರೆ.

Vijaya Karnataka Web 27 Jan 2021, 5:10 pm
ರಾಮನಗರ: ಟೊಯೋಟಾ ಕಾರ್ಮಿಕರು 70ಕ್ಕೂ ಹೆಚ್ಚು ದಿನಗಳಿಂದ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದಾರೆ. ಹಲವು ಬಾರಿ ಮಾತುಕತೆ ಮಾಡಲು ಮುಂದಾದರೂ ಯಾವುದೇ ಪ್ರಯೋಜನವಾಗಿಲ್ಲ‌. ಇದೆಲ್ಲವನ್ನ‌ ಖಂಡಿಸಿ ಪ್ರತಿಭಟನಾ ರ‍್ಯಾಲಿ ಮಾಡಲು ಮುಂದಾಗಿದ್ದೇವೆ ಎಂದು ಮಾಜಿ ಶಾಸಕ ಎಚ್. ಸಿ. ಬಾಲಕೃಷ್ಣ ತಿಳಿಸಿದರು.
Vijaya Karnataka Web HC BALAKRISHNA


ರಾಮನಗರದಲ್ಲಿ ಬುಧವಾರ ಸಿದ್ದಿಗಾರರೊಂದಿಗೆ ಮಾತನಾಡಿದರು. ಟೊಯೋಟಾ ಕಾರ್ಮಿಕರ ಹೋರಾಟಕ್ಕೆ ಅನೇಕ ಮಂದಿ ನಾಯಕರು, ಮುಖಂಡರೆಲ್ಲರೂ ಬೆಂಬಲ ಸೂಚಿಸಿದ್ದಾರೆ. ಎಲ್ಲ ಪಕ್ಷದ ನಾಯಕರು ಸೇರಿ ಪಕ್ಷಾತೀತವಾಗಿ ಪ್ರತಿಭಟನೆ ಮಾಡುತ್ತೇವೆ ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರು ಹೋರಾಟದ ಉಸ್ತುವಾರಿ ವಹಿಸಿಕೊಳ್ಳಬೇಕಿತ್ತು. ಒಬ್ಬರು ಅಥವಾ ಇಬ್ಬರು ಪ್ರತಿಭಟನೆ ಮಾಡಿದ್ರೆ ವೈಯುಕ್ತಿಕ ವಿಚಾರವಾಗಿ ಮಾಡುತ್ತಾರೆ ಎನ್ನಬಹುದು. ಆದರೆ, ಕಾರ್ಮಿಕರೆಲ್ಲರೂ ಸೇರಿ ಹೋರಾಟ ಮಾಡಲು ಮುಂದಾಗಿದ್ದಾರೆ. ಇದರಿಂದ ಅಲ್ಲಿ ಏನೋ ಸಮಸ್ಯೆ ಎಂದು ಸ್ಪಷ್ಟವಾಗಿ ಗೊತ್ತಾಗುತ್ತದೆ ಎಂದು ತಿಳಿಸಿದರು.

74ನೇ ದಿನದ ಟೊಯೋಟಾ ಕಾರ್ಮಿಕರ ಹೋರಾಟಕ್ಕೆ ಕುಟುಂಬಸ್ಥರ ಬೆಂಬಲ

ಸಂಸದ ಡಿ.ಕೆ‌. ಸುರೇಶ್ ಸಭೆ ಮಾಡಿ ಮಾತಾಡಿದರೂ ಸಹ ಕಾರ್ಮಿಕರ ಜತೆ ಮಾತುಕತೆ ಮಾಡೋದಿಲ್ಲ ಅನ್ನುತ್ತಾರೆ. ಇಬ್ಬರೂ ಕುಳಿತು ಮಾತನಾಡಿದಾಗ ಸಮಸ್ಯೆ ಅರ್ಥವಾಗುತ್ತದೆ. ಆಡಳಿತ ವಿರುದ್ದ ಪ್ರತಿಭಟನೆ ಮಾಡುತ್ತಿಲ್ಲ, ಕಾರ್ಮಿಕರ ಪರವಾಗಿ ಕೆಲಸ ಮಾಡುತ್ತಿದ್ದೇವೆ. ಅಡಳಿತ ನಿರ್ಲಕ್ಷ್ಯ ಧೋರಣೆ ಖಂಡಿಸಿ ನಾವು ಪ್ರತಿಭಟನೆ ಮಾಡಲು ತೀರ್ಮಾನ ಮಾಡಿದ್ದೇವೆ ಎಂದರು.

ಟೊಯೋಟಾ ಬಿಕ್ಕಟ್ಟು ಮತ್ತಷ್ಟು ಜಟಿಲ: ಡಿ.ಕೆ.ಸುರೇಶ್‌ ಜತೆಗಿನ ಸಭೆಯೂ ವಿಫಲ!

ಹಾಲಿ ಹಾಗೂ ಮಾಜಿ ಶಾಸಕರು, ಸಂಸದ ಡಿ.ಕೆ ಸುರೇಶ್ ಎಲ್ಲರೂ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದೇವೆ. ಮುಂದಿನ‌ ದಿನಗಳಲ್ಲಿ ಹೋರಾಟ ತೀವ್ರ ಸ್ವರೂಪಗೊಳಿಸಿ ಲಾಕ್ ಡೌನ್ ಮಾಡುವ ನಿರ್ಧಾರಕ್ಕೂ ಬಂದಿದ್ದೇವೆ. ಮುಂದಿನ‌ ದಿನಗಳಲ್ಲಿ ವಿರೋಧ ಪಕ್ಷದ ನಾಯಕರು, ಜೆಡಿಎಸ್ ಪಕ್ಷ ಎಲ್ಲರೂ ಒಗ್ಗೂಡಿಸಿ ದೊಡ್ಡ ಮಟ್ಟದ ಹೋರಾಟ ಮಾಡಲಿದ್ದೇವೆ.

ಟೊಯೋಟಾ ಕಿರ್ಲೋಸ್ಕರ್‌ ಮೋಟಾರ್‌ (ಟಿಕೆಎಂ) ಕಂಪನಿಯ ಕಾರ್ಮಿಕರು ಸತತ ಹೋರಾಟ ನಡೆಸುತ್ತಿದ್ದರೂ ಆಡಳಿತ ಮಂಡಳಿ ಸೊಪ್ಪು ಹಾಕುತ್ತಿಲ್ಲ. ಆಡಳಿತ ಮಂಡಳಿ ಮತ್ತು ಕಾರ್ಮಿಕರ ನಡುವಿನ ಬಿಕ್ಕಟ್ಟು ಈವರೆಗೆ ಬಗೆಹರಿದಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ