ಕಸಾಯಿಖಾನೆಗೆ ಕರುಗಳ ಸಾಗಣೆ, ಆರೋಪಿಗಳಿಬ್ಬರು ವಶಕ್ಕೆ
ಕರುಗಳನ್ನು ಸಣ್ಣ ಚೀಲಗಳಲ್ಲಿ ತುಂಬಿ ಆಟೊದಲ್ಲಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಇಬ್ಬರನ್ನು ರಾಮನಗರ ಗ್ರಾಮೀಣ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ...
Vijaya Karnataka 16 Jun 2019, 5:00 am
ರಾಮನಗರ: ಕರುಗಳನ್ನು ಸಣ್ಣ ಚೀಲಗಳಲ್ಲಿ ತುಂಬಿ ಆಟೊದಲ್ಲಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಇಬ್ಬರನ್ನು ರಾಮನಗರ ಗ್ರಾಮೀಣ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ರಾಮನಗರ ನಿವಾಸಿಗಳಾದ ಮಹಮ್ಮದ್ ತಾರ್ಹಿ ಮತ್ತು ಮಹಮ್ಮದ್ ಫಸಿವುಲ್ಲಾ ಬಂಧಿತರು. ನಾಲ್ಕು ಕರುಗಳನ್ನು ರಕ್ಷ ಣೆ ಮಾಡಲಾಗಿದ್ದು, ಕುಂಬಳಗೂಡು ಬಳಿಯ ಬಿಜಿಎಸ್ ಗೋಶಾಲೆಗೆ ಬಿಡಲಾಗಿದೆ.
ಶುಕ್ರವಾರ ಸಂಜೆ ಆಟೊರಿಕ್ಷಾದಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಈ ಕರುಗಳನ್ನು ಸಾಗಿಸಲಾಗುತಿತ್ತು. ಆಟೊರಿಕ್ಷಾದಿಂದ ಹೊರಹೊಮ್ಮುತ್ತಿದ್ದ ವಾಸನೆ ಕಂಡು ಸಾರ್ವಜನಿಕರೊಬ್ಬರು ವಾಹನ ತಡೆದು ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಸ್ಥಳದಲ್ಲಿ ಇದ್ದ ಜನರು ಹಾಗೂ ಸಂಚಾರ ಪೊಲೀಸರು ಕರುಗಳನ್ನು ಚೀಲದಿಂದ ಹೊರ ತೆಗೆದು ಆರೋಪಿಗಳ ಸಮೇತ ಗ್ರಾಮೀಣ ಠಾಣೆ ಪೊಲೀಸರಿಗೆ ಒಪ್ಪಿಸಿದರು.
ರಾಮನಗರ ನಿವಾಸಿಗಳಾದ ಮಹಮ್ಮದ್ ತಾರ್ಹಿ ಮತ್ತು ಮಹಮ್ಮದ್ ಫಸಿವುಲ್ಲಾ ಬಂಧಿತರು. ನಾಲ್ಕು ಕರುಗಳನ್ನು ರಕ್ಷ ಣೆ ಮಾಡಲಾಗಿದ್ದು, ಕುಂಬಳಗೂಡು ಬಳಿಯ ಬಿಜಿಎಸ್ ಗೋಶಾಲೆಗೆ ಬಿಡಲಾಗಿದೆ.
ಶುಕ್ರವಾರ ಸಂಜೆ ಆಟೊರಿಕ್ಷಾದಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಈ ಕರುಗಳನ್ನು ಸಾಗಿಸಲಾಗುತಿತ್ತು. ಆಟೊರಿಕ್ಷಾದಿಂದ ಹೊರಹೊಮ್ಮುತ್ತಿದ್ದ ವಾಸನೆ ಕಂಡು ಸಾರ್ವಜನಿಕರೊಬ್ಬರು ವಾಹನ ತಡೆದು ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಸ್ಥಳದಲ್ಲಿ ಇದ್ದ ಜನರು ಹಾಗೂ ಸಂಚಾರ ಪೊಲೀಸರು ಕರುಗಳನ್ನು ಚೀಲದಿಂದ ಹೊರ ತೆಗೆದು ಆರೋಪಿಗಳ ಸಮೇತ ಗ್ರಾಮೀಣ ಠಾಣೆ ಪೊಲೀಸರಿಗೆ ಒಪ್ಪಿಸಿದರು.