ಆ್ಯಪ್ನಗರ

ಪಾದರಾಯನಪುರ ಆರೋಪಿಗಳಿಗೆ ಕೊರೊನಾ, ರಾಮನಗರ ಜೈಲಿನಿಂದ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್

ರಾಮನಗರ ಜೈಲಿನಲ್ಲಿ ಇರಿಸಲಾಗಿದ್ದ ಪಾದರಾಯನಪುರ ಆರೋಪಿಗಳಲ್ಲಿ ಇಬ್ಬರಿಗೆ ಕೊರೊನಾ ವೈರಸ್ ಬಂದಿರುವ ಹಿನ್ನೆಲೆಯಲ್ಲಿ ಅವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ.

Vijaya Karnataka Web 24 Apr 2020, 8:52 am
ರಾಮನಗರ: ಬೆಂಗಳೂರಿನ ಪಾದರಾಯನಪುರ ಗಲಾಟೆ ವಿಚಾರವಾಗಿ ರಾಮನಗರ ಜೈಲಿನಲ್ಲಿ ಇರಿಸಲಾಗಿದ್ದ 121 ಮಂದಿಯಲ್ಲಿ ಕೊರೊನಾ ವೈರಸ್ ಬಂದಿರುವ ಇಬ್ಬರು ಸೋಂಕಿತರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಈ ಇಬ್ಬರ ಜೊತೆಗೆ ಇನ್ನು ನಾಲ್ಕೈದು ಮಂದಿಗೆ ಸೋಂಕಿರುವ ಶಂಕೆ ಇದೆ.
Vijaya Karnataka Web COVID-19


ಈ ಕುರಿತು ತಡರಾತ್ರಿ ಜಿಲ್ಲಾಧಿಕಾರಿ ಎಂ ಎಸ್ ಅರ್ಚನಾ ನೇತೃತ್ವದಲ್ಲಿ ಸಭೆ ನಡೆಸಲಾಗಿದ್ದು, ಸೋಂಕಿತರ ವರದಿ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮಾಹಿತಿ‌ ನೀಡಲಾಗಿದೆ. ಪಾದರಾಯನಪುರದ ಆರೋಪಿಗಳನ್ನು ಬೇರೆಡೆ ಶಿಫ್ಟ್ ಮಾಡಬೇಕಾ.? ಇಲ್ಲೇ ಜೈಲಿನಲ್ಲೇ ಕ್ವಾರಂಟೈನ್ ಮಾಡಬೇಕಾ.? ಒಂದು ವೇಳೆ‌ ಸ್ಥಾಳಾಂತರ ಮಾಡುವುದಾದರೆ ಯಾವಗ, ಎಲ್ಲಿಗೆ.? ಈ ಎಲ್ಲಾ ವಿಚಾರಗಳನ್ನು ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗಿದೆ.

ಉಸ್ತುವಾರಿ ಸಚಿವರು ‌ ಈ ಎಲ್ಲಾ‌ ವಿಚಾರಗಳ ಬಗ್ಗೆ ಸರಕಾರದ ಜತೆ ಚರ್ಚೆ ಮಾಡಲಿದ್ದಾರೆ. ಬಳಿಕ ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತ ಮುಂದಿನ‌ ನಿರ್ಧಾರ ಮಾಡಲಿದೆ. ಜಿಲ್ಲಾಧಿಕಾರಿ ಸಭೆಯಲ್ಲಿ ಎಸ್ಪಿ ಅನೂಪ್ ಎ ಶೆಟ್ಟಿ, ಡಿ ಹೆಚ್ ಓ ಡಾ.ನಿರಂಜ್ ಭಾಗಿಯಾಗಿದ್ದರು.

ರಾಮನಗರಕ್ಕೆ ವಕ್ಕರಿಸಿದ ಕೊರೊನಾ..! ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಕುಮಾರಸ್ವಾಮಿ

ಜೈಲು ಸಿಬ್ಬಂದಿಗಳು ಕ್ವಾರಂಟೈನ್ ಸಾಧ್ಯತೆ
20 ಕ್ಕೂ ಹೆಚ್ಚು ಜನ ಜೈಲಿನಲ್ಲಿ ಕಾರ್ಯನಿರ್ವಹಿಸುತ್ತಾರೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು, ಅಡುಗೆ ಭಟ್ಟರನ್ನು ಸೇರಿ ಎಲ್ಲರನ್ನು ಕ್ವಾರಂಟೈನ್ ಮಾಡೋ ಸಾಧ್ಯತೆ ಹೆಚ್ಚಿದೆ. ಎಸ್ಪಿ, ಡಿಸಿ, ಡಿ ಎಚ್ ಓ ಸೇರಿ 7 ಜನ ವೈದ್ಯರನ್ನು ಕೂಡ ಕ್ವಾರಂಟೈನ್ ಗೆ ಒಳಪಡಿಸೋ ಸಾಧ್ಯತೆ ಇದ್ದು, ಇದರ ಜತೆಗೆ ಜೈಲಾಧಿಕಾರಿಗಳ ಕುಟುಂಬಸ್ಥರು, ರಾಮನಗರ ನಗರಸಭೆ ಸಿಬ್ಬಂದಿಗಳು ಕೆಲವರು ಮಾಸ್ಕ್, ಸ್ಯಾನಿಟೈಜರ್ ಕೊಡಲು ಜೈಲಿಗೆ ಹೋಗಿದ್ದರು. ಇವರನ್ನೂ ಸೇರಿದಂತೆ ಈ ಪ್ರಕರಣದಲ್ಲಿ ಒಟ್ಟು 150 ಕ್ಕೂ ಹೆಚ್ಚು ಜನರನ್ನು ಹೋಂ ಕ್ವಾರಂಟೈನ್ ಗೆ ಒಳಪಡಿಸೋ ಸಾಧ್ಯತೆ ಇದೆ.

ಪಾದರಾಯನಪುರ ಪುಂಡರಲ್ಲಿ ಇಬ್ಬರಿಗೆ ಕೊರೊನಾ, ರಾಮನಗರ ಜೈಲು ಸಿಬ್ಬಂದಿಯಿಂದ ಪ್ರತಿಭಟನೆ

ರಾಮನಗರ ಶಿಫ್ಟ್ ಗೆ ವಿರೋಧಿಸಿದ್ದ ನಾಯಕರು
ಪಾದರಾಯನ ಪುರ ಆರೋಪಿಗಳನ್ನು ರಾಮನಗರ ಜೈಲಿಗೆ ಶಿಫ್ಟ್ ಮಾಡುವ ಮುನ್ನ ಈ ವಿಚಾರವಾಗಿ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ರಾಮನಗರದ ಪ್ರಮುಖ ನಾಯಕರು, ಮಾಜಿ ಸಿಎಂ ಹೆಚ್.ಡಿ.ಕೆ, ಮಾಜಿ ಸಚಿವ ಡಿ.ಕೆ ಶಿವಕುಮಾರ್, ಸಂಸದ ಡಿ.ಕೆ ಸುರೇಶ್ ಆಕ್ಷೇಪ ವ್ಯಕ್ತಪಡಿಸಿದ್ದರು.

ರಾಮನಗರದಲ್ಲಿ ಖಾತೆ ತೆರೆದ ಕೊರೊನಾ..! ಪಾದರಾಯನಪುರ ಪುಂಡರಲ್ಲಿ ಇಬ್ಬರಿಗೆ ಸೋಂಕು

ಮಿಕ್ಕವರು ಹಜ್ ಭವನಕ್ಕೆ ಶಿಫ್ಟ್ ಸಾಧ್ಯತೆ
ಉಳಿದ ಎಲ್ಲಾ ಆರೋಪಿಗಳನ್ನ ಇವತ್ತೇ ಹಜ್ ಭವನಕ್ಕೆ ಶಿಫ್ಟ್ ಮಾಡುವ ಸಾಧ್ಯತೆ ಹೆಚ್ಚಿದೆ
ಇಂದು ಮಧ್ಯಾಹ್ನದೊಳಗೆ ಶಿಫ್ಟ್ ಮಾಡುವ ವಿಚಾರವಾಗಿ ಕಳೆದ ರಾತ್ರಿ ಅಧಿಕಾರಿಗಳು ತುರ್ತು ಸಭೆ ನಡೆಸಿದ್ದಾರೆ.
ಸಭೆಯಲ್ಲಿ ಡಿಸಿ ಎಂ.ಎಸ್.ಅರ್ಚನಾ, ಎಸ್ಪಿ ಅನೂಪ್ ಶೆಟ್ಟಿ,ಡಿಎಚ್ಒ ನಿರಂಜನ್ ಭಾಗಿಯಾಗಿದ್ದರು. ಪಾಸಿಟಿವ್ ಹಿನ್ನೆಲೆಯಲ್ಲೆ ಯಾರನ್ನೆಲ್ಲಾ ಕ್ವಾರೆಂಟೈನ್ ಮಾಡಬೇಕು ಎಂದು ಚರ್ಚೆ ನಡೆದಿದ್ದು, ಜೈಲಿನಲ್ಲಿ ಸೋಂಕು ಪತ್ತೆಯಾದ ಹಿನ್ನೆಲೆ ಜೈಲಿನ ಸಮೀಪದ ರಸ್ತೆ ಮುಚ್ಚುವ ಸಾಧ್ಯತೆ ಹೆಚ್ಚಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ