ಆ್ಯಪ್ನಗರ

ಉರ್ದು ಶಾಲಾ ಕಟ್ಟಡ ದುಸ್ಥಿತಿ, ದಾಖಲಾತಿಗೆ ಹಿಂದೇಟು

ಪಟ್ಟಣದ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಪಾಠಶಾಲೆಯ ಕಟ್ಟಡ ಸಂಪೂರ್ಣ ಶಿಥಿಲವಾಗಿದ್ದು, ವಿದ್ಯಾರ್ಥಿಗಳು ಪ್ರಾಣಭಯದಲ್ಲಿ ಪಾಠ ಕೇಳುವ ದುಸ್ಥಿತಿ ಉಂಟಾಗಿದೆ.

Vijaya Karnataka 4 Jul 2018, 3:58 pm
ಮಾಗಡಿ: ಪಟ್ಟಣದ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಪಾಠಶಾಲೆಯ ಕಟ್ಟಡ ಸಂಪೂರ್ಣ ಶಿಥಿಲವಾಗಿದ್ದು, ವಿದ್ಯಾರ್ಥಿಗಳು ಪ್ರಾಣಭಯದಲ್ಲಿ ಪಾಠ ಕೇಳುವ ದುಸ್ಥಿತಿ ಉಂಟಾಗಿದೆ.
Vijaya Karnataka Web urdu school building misery back to record
ಉರ್ದು ಶಾಲಾ ಕಟ್ಟಡ ದುಸ್ಥಿತಿ, ದಾಖಲಾತಿಗೆ ಹಿಂದೇಟು


ಮನವಿಗೆ ಬೆಲೆ ಇಲ್ಲ: ಪಟ್ಟಣದ ಮದ್ಯಭಾಗದಲ್ಲಿರುವ ಸರಕಾರಿ ಉರ್ದು ಪಾಠಶಾಲೆಯ ಮೇಲ್ಚಾವಣಿ, ಸಂಪೂರ್ಣ ಬಾಗಿದೆ. ಕಟ್ಟಡದ ಗೋಡೆಗಳು ಬಿರುಕು ಬಿಟ್ಟಿದ್ದು ಯಾವ ಸಮಯದಲ್ಲಾದರೂ ಮಕ್ಕಳ ಮೇಲೆ ಬೀಳುತ್ತದೆ ಎಂಬ ಭಯ ಕಾಡುತ್ತಿದೆ. ಕಟ್ಟಡದ ದುಸ್ಥಿತಿಯ ಬಗ್ಗೆ ಬಹಳಷ್ಟು ಬಾರಿ ತಾಲೂಕಿನ ಶಾಸಕರಿಗೆ ಹಾಗೂ ಕ್ಷೇತ್ರ ಶಿಕ್ಷ ಣಾಧಿಕಾರಿಗಳ ಗಮನಕ್ಕೆ ತಂದು ಕಟ್ಟಡವನ್ನು ದುರಸ್ತಿ ಪಡಿಸಿಕೊಡಿ ಎಂದು ಮನವಿ ಮಾಡಿದ್ದರೂ ಯಾವ ಪ್ರಯೋಜನವೂ ಆಗಿಲ್ಲ.

ಕಡ್ಡಿ ತುಂಬಿ ದುರ್ವಾಸನೆ: ಉರ್ದು ಶಾಲೆಯಲ್ಲಿ ಇರುವುದೊಂದೇ ಶೌಚಾಲಯ, ಅದರಲ್ಲೂ ಕಸ-ಕಡ್ಡಿ ತುಂಬಿಕೊಂಡು ದುರ್ವಾಸನೆ ಬೀರುತ್ತಿದೆ. ಬಿಸಿಯೂಟಕ್ಕೆ ಸರಕಾರ ಪೂರೈಸುವ ಆಹಾರ ಪದಾರ್ಥವೂ ಸಹ ಕಳಪೆ ಗುಣಮಟ್ಟದಾಗಿದೆ. ಬೇಳೆಯಲ್ಲಿ ಹುಳ ತುಂಬಿಕೊಂಡು ಉಂಡೆಯಾಗಿದೆ. ಈ ಬಗ್ಗೆ ಮುಖ್ಯ ಶಿಕ್ಷ ಕರನ್ನು ಪ್ರಶ್ನಿಸಿದರೆ ಮಳೆ ಬಂದರೆ ಶಾಲಾ ಕಟ್ಟಡ ಸೋರುವುದರಿಂದ ಬೇಳೆ ಸ್ವಲ್ಪ ನೆನೆದಿದೆ ಎನ್ನುತ್ತಾರೆ, ಶಾಲೆಗೆ ನೀಡಿರುವ ಕಂಪ್ಯೂಟರ್‌ ಮೇಲೆ ಧೂಳು ತುಂಬಿಕೊಂಡಿದ್ದರೂ ಸಹ ಇದನ್ನು ಸ್ವಚ್ಚಗೊಳಿಸಲು ಶಾಲೆಯ ಸಿಬ್ಬಂದಿಗಳು ಮುಂದಾಗಿಲ್ಲ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಟ್ಟಡ ದುರಸ್ತಿ ಗೊಳಿಸಿ: ಸರಕಾರ ಶಿಕ್ಷ ಣ ಇಲಾಖೆಗೆ ಹೆಚ್ಚು ಅನುದಾನ ನೀಡುತ್ತಿದ್ದರೂ ಸಹ ಶಾಲೆ ಹಾಗೂ ಕೊಠಡಿಗಳನ್ನು ಉತ್ತಮವಾಗಿ ನಿರ್ಮಿಸಿಕೊಳ್ಳಲು ಅಧಿಕಾರಿಗಳ ನಿರ್ಲಕ್ಷ ತೋರುತ್ತಿದ್ದಾರೆ. ಕನ್ನಡ ಮಾಧ್ಯಮ ಹಾಗೂ ಉರ್ದು ಮಾಧ್ಯಮ ಶಾಲೆಗಳು ಉಳಿಯಬೇಕಾದರೆ ಶಿಥಿಲವಾಗಿರುವ ಇಂತಹ ಶಾಲಾ ಕಟ್ಟಡಗಳನ್ನು ದುರಸ್ತಿಗೊಳಿಸಬೇಕು. ಬೀಳುವ ಸ್ಥೀತಿಯಲ್ಲಿರುವ ಸರಕಾರಿ ಶಾಲೆಗಳನ್ನು ನೋಡಿ ಸಾರ್ವಜನಿಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ದಾಖಲಿಸಲು ಹಿಂದೇಟು ಹಾಕುತ್ತಾರೆ.

ಎಸ್‌ಡಿಎಂಸಿ ಅಧ್ಯಕ್ಷ ಬೇಸರ: ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಅನ್ಸರ್‌ ಪಾಷ ಮಾತನಾಡಿ, 'ಪಟ್ಟಣದಲ್ಲಿ ಉರ್ದು ಮಾಧ್ಯಮಕ್ಕೆ ಇರುವುದು ಇದೊಂದೇ ಶಾಲೆ, ಇಲ್ಲಿನ ಪರಿಸ್ಥಿತಿಯನ್ನು ಮಾಜಿ ಶಾಸಕರ ಗಮನಕ್ಕೆ ಹಾಗೂ ಈ ಹಿಂದೆ ಇದ್ದ ಕ್ಷೇತ್ರಶಿಕ್ಷ ಣಾಧಿಕಾರಿಗಳ ಗಮನಕ್ಕೂ ಸಹ ತಂದಿದ್ದೆವು, ಈವರೆವಿಗೂ ಕ್ಷೇತ್ರ ಶಿಕ್ಷ ಣಾಧಿಕಾರಿಯಾಗಲೀ, ಶಾಸಕರಾಗಲೀ ಯಾರೂ ಸಹ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿಲ್ಲ. ಇಂತಹ ಸಂದರ್ಭದಲ್ಲಿ ನಾವೇ ಮಕ್ಕಳನ್ನು ಶಿಥಿಲವಾಗಿರುವ ಕಟ್ಟಡದಿಂದ ಬೇರೆ ಕಟ್ಟಡದಲ್ಲಿ ಕೂರಿಸಿದ್ದೇವೆ, ಕ್ಷೇತ್ರದಲ್ಲಿ ಶಾಸಕರು ಹಾಗೂ ಕ್ಷೇತ್ರಶಿಕ್ಷ ಣಾಧಿಕಾರಿಗಳು ಇಬ್ಬರೂ ಸಹ ಬದಲಾಗಿದ್ದಾರೆ, ಇನ್ನು ಮುಂದಾದರೂ ಪಟ್ಟಣದಲ್ಲಿರುವ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಬಗ್ಗೆ ಗಮನಹರಿಸುವರೋ ಕಾದುನೋಡುತ್ತೇವೆ,' ಎಂದು ಬೇಸರ ವ್ಯಕ್ತಪಡಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ