ಆ್ಯಪ್ನಗರ

ಕಿಕ್ಕಿರಿದ ಭಕ್ತಸಮೂಹದ ನಡುವೆ ವೈಕುಂಠ ಏಕಾದಶಿ :30ಸಾವಿರ ಲಾಡು ವಿತರಣೆ

ಬಿಡದಿಯ ಕೋದಂಡರಾಮ ದೇವಾಲಯದಲ್ಲಿ ಕಿಕ್ಕಿರಿದ ಭಕ್ತ ಸಮೂಹದ ನಡುವೆ ವೈಕುಂಠ ಏಕಾದಶಿಯನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು.

Vijaya Karnataka 19 Dec 2018, 5:00 am
ವಿಕ ಸುದ್ಧಿಲೋಕ ಬಿಡದಿ ಬಿಡದಿಯ ಕೋದಂಡರಾಮ ದೇವಾಲಯದಲ್ಲಿ ಕಿಕ್ಕಿರಿದ ಭಕ್ತ ಸಮೂಹದ ನಡುವೆ ವೈಕುಂಠ ಏಕಾದಶಿಯನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು.
Vijaya Karnataka Web vaikunta ekadashi between the crowded devotees distributed 30000 laddu
ಕಿಕ್ಕಿರಿದ ಭಕ್ತಸಮೂಹದ ನಡುವೆ ವೈಕುಂಠ ಏಕಾದಶಿ :30ಸಾವಿರ ಲಾಡು ವಿತರಣೆ

ಪುರಸಭೆ ಮುಖ್ಯರಸ್ತೆಯಲ್ಲಿರುವ ಕೋದಂಡರಾಮ ದೇವಾಲಯದಲ್ಲಿ ವೈಕುಂಠದ್ವಾರ ಪ್ರವೇಶ ಹಾಗೂ ಭಕ್ತಾದಿಗಳಿಗೆ ಲಾಡು ವಿತರಣೆ ಹಮ್ಮಿಕೊಳ್ಳಲಾಗಿತ್ತು.ಭಕ್ತರು ಗಂಟೆಗಟ್ಟಲೇ ಸರತಿಯಲ್ಲಿ ನಿಂತು ದರ್ಶನ ಪಡೆದರು. ದೇವಾಲಯದ ಆಡಳಿತ ಮಂಡಳಿ ಹಾಗೂ ಬಿಡದಿ ಗೆಳೆಯರ ಬಳಗದಿಂದ ದೇವಾಲಯದ ಗರ್ಭಗುಡಿಯಲ್ಲಿ ವೆಂಕಟರಮಣ ಸ್ವಾಮಿಯ ಎತ್ತರದ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಶೇಷ ಅಲಂಕಾರ ಮಾಡಲಾಗಿತ್ತು. ಜೊತೆಗೆ ಮೂಲ ವಿಗ್ರಹಗಳಾದ ಕೋದಂಡರಾಮ, ಸೀತಾ ಮತ್ತು ಲಕ್ಷ ್ಮಣ ದೇವರ ಮೂರ್ತಿಗಳನ್ನು ಅಲಂಕರಿಸಲಾಗಿತ್ತು.
ಶಾಸಕ ಎ.ಮಂಜುನಾಥ್‌ ಕುಟುಂಬದಿಂದ ವಿಶೇಷ ಪೂಜೆ, ಪ್ರಸಾದ ಮತ್ತು ಲಾಡು ವಿತರಣೆಯ ಕಾರ್ಯ ನೆರವೇರಿತು, ಭಕ್ತರಿಗಾಗಿ ತಿರುಪತಿ ಲಾಡು ಮಾದರಿಯಲ್ಲಿ ಸುಮಾರು 30 ಸಾವಿರ ಲಾಡುಗಳನ್ನು ತಯಾರಿಸಿ ಹಂಚಲಾಯಿತು.

ಸಂಜೆ ನೂಪುರ ಫೌಂಡೇಶನ್‌, ಆರ್ಟ್‌ ಆಫ್‌ ಲಿವಿಂಗ್‌ ಮತ್ತು ಮಹಿಳಾ ಸಮಾಜದ ವತಿಯಿಂದ ಭಜನೆ ಹಾಗೂ ದೇವರನಾಮಗಳ ಗೀತಗಾಯನ ಕಾರ್ಯಕ್ರಮ ನಡೆಯಿತು.
ಕೋತಿ ಆಂಜನೇಯಸ್ವಾಮಿ ದೇಗುಲದಲ್ಲಿಯೂ ಆಚರಣೆ:

ಬಿಡದಿ ಹೋಬಳಿ ಹನುಮಂತನಗರದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ಕೋತಿ ಆಂಜನೇಯಸ್ವಾಮಿ ದೇವಾಲಯದಲ್ಲಿ ಪ್ರತಿ ವರ್ಷದಂತೆ ವೈಕುಂಠ ಏಕಾದಶಿ ಆಚರಣೆ ನಡೆಯಿತು. ದೇವಾಲಯದಲ್ಲಿರುವ ಸೀತಾ, ರಾಮ, ಲಕ್ಷ ್ಮಣ ಮೂರ್ತಿಗಳಿಗೆ, ಹಾಗೂ ಲಕ್ಷ್ಮೀದೇವಿ ಮೂರ್ತಿಗೆ ವಿವಿಧ ಪುಷ್ಪಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು, ಏಕಾದಶಿ ಅಂಗವಾಗಿ ದೇವಾಲಯದಲ್ಲಿ ನಿರ್ಮಿಸಿದ್ದ ವೈಕುಂಠದ್ವಾರದಲ್ಲಿ ಭಕ್ತರು ಪ್ರವೇಶಿಸಿ ದೇವರ ದರ್ಶನ ಪಡೆದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ