ಆ್ಯಪ್ನಗರ

ವೋಕಲ್‌ ಫಾರ್‌ ಲೋಕಲ್‌: ವಿಶ್ವವಿಖ್ಯಾತ ಚನ್ನಪಟ್ಟಣ ಆಟಿಕೆಗಳಿಗೆ ರೈಲ್ವೆ ಇಲಾಖೆಯಿಂದ ಪ್ರಚಾರ

ಪ್ರಧಾನಿ ಮೋದಿ ಇತ್ತಿಚಿಗಷ್ಟೇ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ವೋಕಲ್‌ ಫಾರ್‌ ಲೋಕಲ್‌ನ್ನು ಭಾರತೀಯ ರೈಲ್ವೆ ಕಾರ್ಯರೂಪಕ್ಕೆ ಇಳಿಸಿದ್ದು, ಪ್ರಾರಂಭಿಕ ಹಂತವಾಗಿ ಚನ್ನಪಟ್ಟಣ ಗೊಂಬೆಗಳನ್ನು ಶ್ರಮಿಕ್‌ ವಿಶೇಷ ರೈಲಿನಲ್ಲಿ ತೆರಳುವ ವಲಸೆಗಿರ ಮಕ್ಕಳಿಗೆ ವಿತರಿಸುತ್ತಿದೆ. ಗೊಂಬೆಗಳ ಮಾರುಕಟ್ಟೆಯನ್ನು ವಿಸ್ತರಿಸಲು ಮುಂದಾಗಿದೆ.

Vijaya Karnataka Web 20 May 2020, 6:44 pm
ರಾಮನಗರ: ಕೊರೊನಾ ವೈರಸ್‌ನಿಂದಾಗಿ ನಲುಗಿರುವ ಸುಪ್ರಸಿದ್ಧ ಚನ್ನಪಟ್ಟಣ ಗೊಂಬೆಗಳಿಗೆ ಬೇಡಿಕೆ ಸೃಷ್ಟಿಸಲು ರೈಲ್ವೆ ಇಲಾಖೆ ಮುಂದಾಗಿದ್ದು, ತನ್ನ ರೈಲುಗಳಲ್ಲಿ ಚನ್ನಪಟ್ಟಣ ಗೊಂಬೆಗಳನ್ನು ವಲಸಿಗರ ಮಕ್ಕಳಿಗೆ ವಿತರಣೆ ಮಾಡುತ್ತಿದೆ.
Vijaya Karnataka Web CHANNAPATTANA


ಈ ಬಗ್ಗೆ ಟ್ವೀಟ್‌ ಮಾಡಿರುವ ನೈರುತ್ಯ ರೈಲ್ವೆ, ಪುಟ್‌ ದಿ ಸ್ಮೈಲ್‌ ಬ್ಯಾಕ್ ಉಪಕ್ರಮದಡಿಯಲ್ಲಿ ಚನ್ನಪಟ್ಟಣ ಗೊಂಬೆಗಳನ್ನು ಶ್ರಮಿಕ್‌ ವಿಶೇಷ ರೈಲುಗಳಲ್ಲಿ ವಲಸಿಗರ ಮಕ್ಕಳಿಗೆ ವಿತರಣೆ ಮಾಡಲಾಗುತ್ತಿದೆ ಎಂದು ತಿಳಿಸಿದೆ. ಇದರಿಂದ ಗೊಂಬೆಗಳ ಮಾರುಕಟ್ಟೆ ಮತ್ತಷ್ಟು ವಿತರಣೆಯಾಗಲಿದೆ.


ಡಿಆರ್‌ಎಮ್‌ ಬೆಂಗಳೂರು ಕೂಡ ಟ್ವೀಟ್‌ ಮಾಡಿದ್ದು, ಶ್ರಮಿಕ್‌ ವಿಶೇಷ ರೈಲುಗಳಲ್ಲಿ ತೆರಳುತ್ತಿರುವ ಮಕ್ಕಳಿಗೆ ಚನ್ನಪಟ್ಟಣ ಗೊಂಬೆಗಳನ್ನು ವ್ಯವಸ್ಥೆ ಮಾಡಲಾಗಿದೆ. ಜಿಐ ಟ್ಯಾಗ್‌ ಪಡೆದ ಗೊಂಬೆಗಳಾಗಿದ್ದು, ಮಕ್ಕಳಿಗೆ ಇಷ್ಟವಾಗುತ್ತವೆ. ಕಟ್ಟಿಗೆ ಮತ್ತಯ ನೈಸರ್ಗಿಕ ಬಣ್ಣದಿಂದ ತಯಾರಿಸಲಾಗಿರುವ ಈ ಗೊಂಬೆಗಳು, ಮಕ್ಕಳಿಗೆ ಸುರಕ್ಷಿತ ಹಾಗೂ ಉತ್ತಮವಾಗಿವೆ ಎಂದು ಹೇಳಿದ್ದು, ಇದರಿಂದ ಸ್ಥಳೀಯ ಗೊಂಬೆ ತಯಾರಕರು ಮತ್ತು ಕಲಾವಿದರಿಗೆ ಹೆಚ್ಚಿನ ವ್ಯಾಪಾರವಾಗುತ್ತದೆ ಎಂದು ಹೇಳಿದ್ದಾರೆ.


ನೈರುತ್ಯ ರೈಲ್ವೆಯ ಟ್ವೀಟ್‌ನ್ನು ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ರಿಟ್ವೀಟ್‌ ಮಾಡಿದ್ದು, ಚನ್ನಪಟ್ಟಣ ಗೊಂಬೆಗಳು ನಮ್ಮ ಕರ್ನಾಟಕ ಹಾಗೂ ಭಾರತದ ಹೆಮ್ಮೆಯಾಗಿವೆ. ಪ್ರಧಾನಿ ನರೇಂದ್ರ ಮೋದಿ ಅವರ ವೋಕಲ್‌ ಫಾರ್‌ ಲೋಕಲ್‌ ಮಂತ್ರಕ್ಕೆ ಅರ್ಥಪೂರ್ಣವಾದ ಕೊಡುಗೆಗಳಾಗಿವೆ ಎಂದು ತಿಳಿಸಿದ್ದಾರೆ.

ಕೊರೊನಾ ಲಾಕ್‌ಡೌನ್‌ ಎಫೆಕ್ಟ್: ಪಾತಾಳಕ್ಕೆ ಕುಸಿದ ಸ್ಥಳೀಯ ಸಂಸ್ಥೆಗಳ ಆದಾಯ


ರೈಲ್ವೆ ಇಲಾಖೆಯ ಈ ಕ್ರಮದಿಂದ ಚನ್ನಪಟ್ಟಣದ ಪ್ರಸಿದ್ಧ ಗೊಂಬೆ ತಯಾರಿಕರ ಜೀವನಕ್ಕೆ ಸ್ವಲ್ಪ ನೆಮ್ಮದಿ ಬಂದಂತಾಗಿದ್ದು, ಬೇರೆ ಬೇರೆ ತರಹದ ಪ್ರಾದೇಶಿಕ ಉತ್ಪನ್ನಗಳನ್ನು ರೈಲ್ವೆ ಇಲಾಖೆ ತನ್ನ ರೈಲುಗಳಲ್ಲಿ ಪರಿಚಯಿಸಲಿ ಎಂಬುದು ಎಲ್ಲರ ಆಶಯವಾಗಿದೆ.

'ಎಚ್‌ಡಿಕೆ ಮೇಲೆ ಡಿಕೆಶಿ ಋಣವಿದೆ, ಅದನ್ನು ಕುಮಾರಸ್ವಾಮಿ ತೀರಿಸಬೇಕುʼ: ಮಾಜಿ ಶಾಸಕ ಬಾಲಕೃಷ್ಣ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ