ಆ್ಯಪ್ನಗರ

ಬಾಡಿಗೆ ಕಟ್ಟದ್ದಕ್ಕೆ ಶುದ್ಧನೀರಿನ ಘಟಕಕ್ಕೇ ಬಾಗಿಲು..!

​​ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಬಾಡಿಗೆ ಕಟ್ಟದೆ ಘಟಕಕ್ಕೆ ಬಾಗಿಲು ಹಾಕಿರುವ ಹಣಪಟ್ಟಿ ಹೊತ್ತು ಕೊಂಡಿದೆ ಮಾಗಡಿ ಪಟ್ಟಣದ 23 ನೇ ವಾರ್ಡ್‌. ಪಟ್ಟಣದ 23ನೇ ವಾರ್ಡ್‌ನಲ್ಲಿ ಮುಸಲ್ಮಾನರು ಹೆಚ್ಚಾಗಿ ವಾಸ ಮಾಡುತ್ತಿದ್ದು ಪ್ರಮುಖವಾಗಿ ಸುಣ್ಣಕಲ್ಲುಬೀದಿ, ಭಜತ್ರಿ ಗಲ್ಲಿ, ಹೊಸ ಮಸೀದಿ ರಸ್ತೆ ಒಳಗೊಂಡಿದೆ.

Vijaya Karnataka 14 Oct 2019, 3:35 pm
* ಜಗದೀಶ್‌ ಎಸ್‌. ಮಾಗಡಿ
Vijaya Karnataka Web water unit closed due to not pay the rent
ಬಾಡಿಗೆ ಕಟ್ಟದ್ದಕ್ಕೆ ಶುದ್ಧನೀರಿನ ಘಟಕಕ್ಕೇ ಬಾಗಿಲು..!


ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಬಾಡಿಗೆ ಕಟ್ಟದೆ ಘಟಕಕ್ಕೆ ಬಾಗಿಲು ಹಾಕಿರುವ ಹಣಪಟ್ಟಿ ಹೊತ್ತು ಕೊಂಡಿದೆ ಮಾಗಡಿ ಪಟ್ಟಣದ 23 ನೇ ವಾರ್ಡ್‌. ಪಟ್ಟಣದ 23ನೇ ವಾರ್ಡ್‌ನಲ್ಲಿ ಮುಸಲ್ಮಾನರು ಹೆಚ್ಚಾಗಿ ವಾಸ ಮಾಡುತ್ತಿದ್ದು ಪ್ರಮುಖವಾಗಿ ಸುಣ್ಣಕಲ್ಲುಬೀದಿ, ಭಜತ್ರಿ ಗಲ್ಲಿ, ಹೊಸ ಮಸೀದಿ ರಸ್ತೆ ಒಳಗೊಂಡಿದೆ.

1200ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದ್ದು ಈ ವಾರ್ಡ್‌ನಲ್ಲಿ ಒಳಚರಂಡಿ ಸಮಸ್ಯೆ, ಶುದ್ಧ ನೀರಿನ ಘಟಕಕ್ಕೆ ಬಾಡಿಗೆ ಕಟ್ಟಡ ಹಿನ್ನೆಲೆಯಲ್ಲಿಘಟಕವನ್ನು ಮುಚ್ಚಲಾಗಿದ್ದು ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ.

ಒಳಚರಂಡಿ ಸಮಸ್ಯೆ: ಈ ವಾರ್ಡ್‌ನಲ್ಲಿಒಳಚರಂಡಿ ಸಮಸ್ಯೆಯಿದ್ದು ಒಳಚರಂಡಿ ಮ್ಯಾನ್‌ ಹೋಲ್‌ಗಳು ತುಂಬಿ ಹರಿಯುತ್ತಿದ್ದು ಗಬ್ಬ ವಾಸನೆಯಿಂದ ಕೂಡಿದೆ. ಇದು ನಾಗರಿಕರಿಗೆ ಸಾಕಷ್ಟು ಕಿರಿಕಿರಿಯಾಗುತ್ತಿದ್ದು ಒಳಚರಂಡಿ ಕಾಮಗಾರಿ ಪೂರ್ಣಗೊಳಿಸಬೇಕೆಂದು ವಾರ್ಡ್‌ನ ನಾಗರಿಕರು ಒತ್ತಾಯಿಸಿದ್ದಾರೆ.

ಶುದ್ಧ ನೀರು ಘಟಕದ ಅಂಗಡಿಗೆ ಬಾಡಿಗೆ ಕಟ್ಟಿಲ್ಲ: ಸಂಸದ ಡಿ.ಕೆ.ಸುರೇಶ್‌ ಅವರು ನಿರ್ಮಿಸಿರುವ ಶುದ್ಧ ನೀರು ಘಟಕ ಬಾಡಿಗೆ ಕಟ್ಟಡದಲ್ಲಿದ್ದು ಕಳೆದ 1 ವರ್ಷಗಳಿಂದ ಬಾಡಿಗೆ ಕಟ್ಟದ ಹಿನ್ನೆಲೆಯಲ್ಲಿ ಅಂಗಡಿ ಮಾಲೀಕ ಘಟಕವನ್ನು ಮುಚ್ಚಿದ್ದಾನೆ. ಇದರಿಂದ ವಾರ್ಡ್‌ನಲ್ಲಿ ಕುಡಿಯುವ ನೀರು ಇಲ್ಲದೆ ಸಾಕಷ್ಟು ಸಮಸ್ಯೆ ಅನುಭವಿಸುವಂತಾಗಿದೆ. ಪುರಸಭೆ ಯವರು ಶುದ್ಧ ನೀರು ಘಟಕಗಳನ್ನು ಟೆಂಡರ್‌ ಮೂಲಕ ಖಾಸಗಿಯವರಿಗೆ ನೀಡಿ ಕೆಲವು ಘಟಕ ಗಳನ್ನು ಆರಂಭಿಸಿದ್ದಾರೆ. ಈ ವಾರ್ಡ್‌ನಲ್ಲಿರುವ ಘಟಕಗಳನ್ನು ಕೂಡಲೇ ಆರಂಭಿಸಿ ವಾರ್ಡ್‌ನ ಜನತೆಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕಿದೆ ಎಂದು ವಾರ್ಡ್‌ ನಾಗರಿಕರು ಒತ್ತಾಯಿಸಿದ್ದಾರೆ.

ಕಾಮಗಾರಿ ಆರಂಭವಾಗಿಲ್ಲ: ಸ್ಲಂ ಬೋರ್ಡ್‌ ವತಿಯಿಂದ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಭೂಮಿ ಪೂಜೆ ಮಾಡಲಾಯಿತು. ಆದರೆ ಕಾಮಗಾರಿ ಮಾತ್ರ ಇನ್ನೂ ಪೂರ್ಣವಾಗಿಲ್ಲ. 700 ಮೀಟರ್‌ನಷ್ಟು ಚರಂಡಿ ಸ್ಲಾತ್ರ್ಯಬ್‌ ಹಾಕಿಸಿಲ್ಲ. ಇದರಿಂದ ಸೊಳ್ಳೆ ಕಾಟ ಹೆಚ್ಚಾಗಿದ್ದು ಸಾಂಕ್ರಾಮಿಕ ರೋಗ ಬರುವ ಭೀತಿಯಲ್ಲಿದೆ. ಕೂಡಲೇ ಕಾಮಗಾರಿ ಆರಂಭಿಸಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.

ಬಾಡಿಗೆ ಕಟ್ಟಡದಲ್ಲಿ ಅಂಗನವಾಡಿ: ಈ ವಾರ್ಡ್‌ ನಲ್ಲಿಅಂಗನವಾಡಿ ಬಾಡಿಗೆ ಕಟ್ಟಡದಲ್ಲಿದ್ದು 18 ಪುಟಾಣಿ ಮಕ್ಕಳು ಬರುತ್ತಿದ್ದಾರೆ. ಕೊಠಡಿ ಚಿಕ್ಕದಾಗಿದ್ದು, ಮಕ್ಕಳಿಗೆ ಆಟವಾಡಲು ಸ್ಥಳಾವಕಾಶ ವಿಲ್ಲ. ಸ್ವಚ್ಛತೆ ಎಂಬುದು ಇಲ್ಲಿ ಮರೀಚಿಕೆಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ