ಆ್ಯಪ್ನಗರ

ಹಳ್ಳಿಗಳಲ್ಲಿ ಮೊಳಗಲಿ ಜಲಸಾಕ್ಷ ರತೆ ಮಂತ್ರ

ಸರ್ವರಿಗೂ ಜಲ ಸದಾಕಾಲ' ಎಂಬ ಧ್ಯೇಯವಿಟ್ಟುಕೊಂಡು ಸರಕಾರ ಆರಂಭಿಸಿರುವ ಪರಿಸರ ಕಾಳಜಿ, ಜಲಸಂರಕ್ಷ ಣೆ ಯೋಜನೆಗೆ ತಾಲೂಕಿನ ಪ್ರತಿಯೊಬ್ಬ ಪ್ರಜೆಯೂ ಕಂಕಣಬದ್ಧರಾಗಿ ಶ್ರಮಿಸಿ ಪರಿಸರ ಉಳಿಸುವ ಕೆಲಸ ಮಾಡಬೇಕು ಎಂದು ಶಾಸಕ ಎ.ಮಂಜುನಾಥ್‌ ಜನರಲ್ಲಿ ಮನವಿ ಮಾಡಿಕೊಂಡರು.

Vijaya Karnataka 13 Jun 2019, 5:00 am
ಮಾಗಡಿ ಗ್ರಾಮಾಂತರ: 'ಸರ್ವರಿಗೂ ಜಲ ಸದಾಕಾಲ' ಎಂಬ ಧ್ಯೇಯವಿಟ್ಟುಕೊಂಡು ಸರಕಾರ ಆರಂಭಿಸಿರುವ ಪರಿಸರ ಕಾಳಜಿ, ಜಲಸಂರಕ್ಷ ಣೆ ಯೋಜನೆಗೆ ತಾಲೂಕಿನ ಪ್ರತಿಯೊಬ್ಬ ಪ್ರಜೆಯೂ ಕಂಕಣಬದ್ಧರಾಗಿ ಶ್ರಮಿಸಿ ಪರಿಸರ ಉಳಿಸುವ ಕೆಲಸ ಮಾಡಬೇಕು ಎಂದು ಶಾಸಕ ಎ.ಮಂಜುನಾಥ್‌ ಜನರಲ್ಲಿ ಮನವಿ ಮಾಡಿಕೊಂಡರು.
Vijaya Karnataka Web waterfowl mantra is a leaflet in villages
ಹಳ್ಳಿಗಳಲ್ಲಿ ಮೊಳಗಲಿ ಜಲಸಾಕ್ಷ ರತೆ ಮಂತ್ರ


ಮಾಗಡಿಯ ಹುಳ್ಳೇನಹಳ್ಳಿ ಸರಕಾರಿ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ಜಲಾಮೃತ ಯೋಜನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜಲಾಮೃತ ಯೋಜನೆಯ ಭಾಗವಾಗಿ ಕರ್ನಾಟಕ ಸರಕಾರ 2019ರ ವರ್ಷವನ್ನು ಜಲವರ್ಷ ಎಂದು ಘೋಷಣೆ ಮಾಡಿದೆ. ಜಲಾಮೃತ ಅಭಿಯಾನ ಮುಖ್ಯವಾಗಿ ಜಲಸಾಕ್ಷ ರತೆ, ಜಲ ಸಂರಕ್ಷ ಣೆ, ಜಲ ಪುನಶ್ಚೇತನ ಮತ್ತು ಜಲಮೂಲಗಳ ಸೃಜಿಸುವಿಕೆ ಎಂಬ 4 ಆಧಾರ ಸ್ತಂಭಗಳನ್ನು ಅಳವಡಿಸಿಕೊಂಡಿದೆ. ನೀರಿನ ಪ್ರಜ್ಞಾವಂತ ಬಳಕೆ, ಹಸಿರೀಕರಣವನ್ನೂ ಈ ಯೋಜನೆ ಒಳಗೊಂಡಿರುವುದರಿಂದ ತಾಲೂಕಿನ ಎಲ್ಲಾ ಹಳ್ಳಿಗಳು ಯೋಜನೆ ಯಶಸ್ಸಿಗೆ ಸಹರಿಸಿ ಎಂದು ಮನವಿ ಮಾಡಿದರು.

ಜಲಸಂರಕ್ಷ ಣೆಗೆ ವೈಜ್ಞಾನಿಕ ವಿಧಾನ :
ಜಲ ಜಾಗೃತಿ, ಜಲ ಸಾಕ್ಷ ರತೆ, ನೀರಿನ ಮಿತಬಳಕೆ ಮತ್ತು ಹಸಿರೀಕರಣ ಎಂಬ ಧ್ಯೇಯಗಳನ್ನು ಇಟ್ಟುಕೊಂಡು ಜಲ ಚಳವಳಿ ರೂಪಿಸುವುದು 'ಜಲಾಮೃತ ಯೋಜನೆ'ಯ ಗುರಿ. ಸ್ಯಾಟ್‌ಲೈಟ್‌ ಚಿತ್ರಣ, ಪ್ರಾದೇಶಿಕ ಅಂಕಿ-ಅಂಶ, ಸ್ಥಳಾಕೃತಿ ಮತ್ತು ಭೌಗೋಳಿಕ ಅಧ್ಯಯನದ ಆಧಾರದ ಮೇಲೆ ನೀರಿನ ಆಯವ್ಯಯ ಮತ್ತು ಸಂರಕ್ಷ ಣೆಯನ್ನು ವೈಜ್ಞಾನಿಕ ವಿಧಾನಗಳ ಮೂಲಕ ಸಾಧಿಸಲಾಗುವುದು ಎಂದು ವಿವರಿಸಿದರು.

ಹಳ್ಳಿಗರೂ ಮಿತವಾಗಿ ಬಳಸಿ : ಜಿಪಂ ಸದಸ್ಯ ಅಣ್ಣೇಗೌಡ ಮಾತನಾಡಿ, 'ಲಭ್ಯವಿರುವ ನೀರನ್ನು ಭವಿಷ್ಯದ ದಿನಗಳಿಗಾಗಿ ಅತ್ಯಂತ ವೈಜ್ಞಾನಿಕವಾಗಿ ಬಳಸಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿ ನಾವಿದ್ದೇವೆ. ನೀರಿನ ಬೆಲೆ ನಗರವಾಸಿಗಳಿಗೆ ಗೊತ್ತು ಆದ್ದರಿಂದ ಹಳ್ಳಿಗರೂ ನೀರಿನ ಮಿತಬಳಕೆ ಅಭ್ಯಾಸಮಾಡಬೇಕು ಎಂದು ಸಲಹೆ ನೀಡಿದರು.

ಹುಳ್ಳೇನಹಳ್ಳಿ ಸರಕಾರಿ ಪ್ರಾಥಮಿಕ ಶಾಲೆಯ ಆವರಣ ಮತ್ತು ರಸ್ತೆ ಬದಿಯಲ್ಲಿ ಕಾರ್ಯಕ್ರಮದಲ್ಲಿ ಹಾಜರಿದ್ದ ಗಣ್ಯವ್ಯಕ್ತಿಗಳು ಒಂದೊಂದು ಸಸಿನೆಟ್ಟು ನೀರೆರೆದರು.

ಮಾಗಡಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪೂಜಾರಿ ಪಾಳ್ಯದ ಕೃಷ್ಣಮೂರ್ತಿ, ತಾಪಂ ಅಧ್ಯಕ್ಷ ಶಿವರಾಜು, ಕಾರ್ಯನಿರ್ವಹಣಾಧಿಕಾರಿ ಚಂದ್ರು, ಬಿಇಒ ಸಿದ್ದೇಶ್ವರ್‌, ಜಿಪಂ ಸದಸ್ಯ ಅಣ್ಣೇಗೌಡ, ಸ್ಥಾಯಿಸಮಿತಿ ಸದಸ್ಯ ಧನಂಜಯನಾಯಕ್‌, ಸಹಾಯಕ ಕೃಷಿ ನಿರ್ದೇಶಕರಾದ ಅಶೋಕ್‌, ಸಿಂಗ್ರೀಗೌಡ, ಗ್ರಾಪಂ ಅಧ್ಯಕ್ಷ ಸೋಮಸುಂದರ್‌, ವಿರುಪಾಪುರ ಜ್ಯೋತಿ, ಮಹೇಶ್‌, ಬೈರಪ್ಪನಪಾಳ್ಯ ರಾಮಕೃಷ್ಣಯ್ಯ ಹಾಗೂ ಹುಳ್ಳೇನಹಳ್ಳಿ ಸುತ್ತಮುತ್ತಲ ಗ್ರಾಮಸ್ಥರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ